ವರ್ಕ್ ಫ್ರಮ್ ಹೋಂ ಮಹಿಳೆಯರಿಗೆ ಟ್ರಿಪಲ್ ಹೊರೆ: ರಾಮನಾಥ್ ಕೋವಿಂದ್

Public TV
2 Min Read

– ಕೊರೊನಾ ನಮಗೆ ಸೂಕ್ತ ಪಾಠಗಳನ್ನು ಕಲಿಸಿದೆ

ನವದೆಹಲಿ: ಕೋವಿಡ್ ಸೋಂಕಿನ ಹಿನ್ನೆಲೆ ಮನೆಯಿಂದಲೇ ಕೆಲಸ ಮಾಡುವುದು ಹೆಚ್ಚು ಪ್ರಯೋಜನಗಳನ್ನು ಹೊಂದಿದೆ. ಆದರೆ ಇದು ದುಡಿಯುವ ಮಹಿಳೆಯರಿಗೆ ‘ಟ್ರಿಪಲ್ ಹೊರೆ’ ಮಾಡಿದೆ ಎಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಹೇಳಿದರು.

ಮನೋರಮಾ ಇಯರ್‌ಬುಕ್ 2022ರಲ್ಲಿ ಪ್ರಕಟವಾದ ಯುವ ಭಾರತೀಯರಿಗೆ ಪತ್ರದಲ್ಲಿ ಕೋವಿಂದ್ ಅವರು, ಮಹಿಳೆಯರು ಈಗಾಗಲೇ ಪಾವತಿಸಿದ ಕೆಲಸ ಮತ್ತು ‘ಪಾವತಿಯಿಲ್ಲದ ಕೆಲಸ’ ಅಂದರೆ ಮನೆಯ ಜವಾಬ್ದಾರಿಗಳ ದುಪ್ಪಟ್ಟು ಹೊರೆಯನ್ನು ಹೊಂದಿದ್ದಾರೆ. ಮಕ್ಕಳು ಮನೆಯಿಂದ ಶಾಲೆಗೆ ಹೋಗುವಾಗ, ಅವರ ಕಲಿಕೆಗೆ ಪೋಷಕರು ಪೂರಕವಾಗಿರಬೇಕು. ಆ ಕಾರ್ಯವು ಸಾಮಾನ್ಯವಾಗಿ ತಾಯಿಯ ಮೇಲೆ ಬೀಳುತ್ತದೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ನಿಶ್ಚಿತಾರ್ಥ ಸಮಾರಂಭಕ್ಕೆ ನುಗ್ಗಿ ಯುವಕನನ್ನ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು!

ವರ್ಕ್ ಫ್ರಮ್ ಹೋಂ ಸಮಯದಲ್ಲಿ ಕೆಲಸ ಮಾಡುವ ಪುರುಷನು ಸಹ ಮನೆಯಲ್ಲಿನ ಒತ್ತಡವನ್ನು ತೆಗೆದುಕೊಳ್ಳಬೇಕು. ಇದರಿಂದಾಗಿ ದಂಪತಿ ತಮ್ಮ ಜವಾಬ್ದಾರಿಗಳನ್ನು ಹಂಚಿಕೊಳ್ಳಬಹುದು. ಕೆಲಸಕ್ಕಾಗಿ ಸಮಯ ಹೆಚ್ಚಾದಂತೆ, ಕೆಲವು ಸಂದರ್ಭದಲ್ಲಿ ಉತ್ಪಾದಕತೆ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.

ಕೊರೊನಾ ರೋಗವು ನಮಗೆ ಸೂಕ್ತವಾಗಿ ಪಾಠಗಳನ್ನು ಕಲಿಸಿದೆ. ಸಾಂಕ್ರಾಮಿಕ ರೋಗವು ಅಭೂತಪೂರ್ವ ಬಿಕ್ಕಟ್ಟಾಗಿದೆ. ಆದರೆ ಇದು ದೊಡ್ಡ ಬಿಕ್ಕಟ್ಟಿನ ಎಚ್ಚರಿಕೆಯೂ ಆಗಿರಬಹುದು ಎಂದಿದ್ದಾರೆ.

WFH has put working women under 'triple burden', says President Kovind - Lagatar English

ಹವಾಮಾನ ಬದಲಾವಣೆಯು ಇನ್ನು ಮುಂದೆ ವೈಜ್ಞಾನಿಕ ಸಂಶೋಧನೆ ಮತ್ತು ನೀತಿ ಚರ್ಚೆಗಳ ವಿಷಯವಲ್ಲ. ಅದರ ಪರಿಣಾಮವು ಈಗಾಗಲೇ ಸ್ಪಷ್ಟವಾಗಿದೆ. 2020 ರ ದಶಕವು ಅತ್ಯಂತ ನಿರ್ಣಾಯಕ ಹಂತವಾಗಿ ಹೊರಹೊಮ್ಮಬಹುದು. ಪರಿಸ್ಥಿತಿ ಭೀಕರವಾಗಿದೆ. ನಿರಾಶಾವಾದ ಎಷ್ಟೇ ಇದ್ದರೂ ನಾನು ಆಶಾವಾದಿಯಾಗಿದ್ದೇನೆ ಎಂದು ಹೇಳಿದ್ದಾರೆ.

ನಮ್ಮ ದೇಶಕ್ಕೆ ಕೊರೊನಾ ವೈರಸ್‍ನಿಂದ ಬೆದರಿಕೆ ಬಂದಾಗ ನಾವು ಹೇಗೆ ಸಮರ್ಥರಾಗಿದ್ದೇವೆ ಎಂಬುದನ್ನು ನಾವು ನೋಡಿದ್ದೇವೆ. ಎಲ್ಲ ರಾಷ್ಟ್ರಗಳು ಕೈಜೋಡಿಸಿದರೆ ಮಾನುಕುಲ ಏನು ಬೇಕಾದರೂ ಮಾಡಬಹುದು ಎಂಬುದನ್ನ ಕೋವಿಡ್-19 ತೋರಿಸಿಕೊಟ್ಟಿದೆ ಎಂದು ತಿಳಿಸಿದ್ದಾರೆ.

ವೃತ್ತಿ ಅವಕಾಶಗಳ ಕುರಿತು ಅವರು, ಇಪ್ಪತ್ತರ ಹರೆಯದಲ್ಲಿಯೇ ವೃತ್ತಿಜೀವನದ ಪ್ರಶ್ನೆಯು ನಮ್ಮ ಮನಸ್ಸಿನಲ್ಲಿ ಅಗ್ರಸ್ಥಾನದಲ್ಲಿರುತ್ತದೆ. ಸಾಮಾಜಿಕ ಅಗತ್ಯತೆಗಳ ಅಡಿಯಲ್ಲಿ ಅಥವಾ ಗೆಳೆಯರ ಒತ್ತಡದ ಅಡಿಯಲ್ಲಿ, ನಮ್ಮಲ್ಲಿ ಅನೇಕರು ಸಾಮಾನ್ಯವಾಗಿ ‘ವೃತ್ತಿ’ಯನ್ನು ‘ಉದ್ಯೋಗ’ದೊಂದಿಗೆ ಸಮೀಕರಿಸುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕನ್ನಡಕ್ಕೆ ಬಂದಿದೆ ಹೊಸ ಫಾಂಟ್ ಬಂಡೀಪುರ!

ಭಾರತದ ಸರ್ಕಾರ ಮತ್ತು ಸಾರ್ವಜನಿಕ ವಲಯ ಎರಡಕ್ಕೂ ಪ್ರತಿಭಾವಂತ, ಕಷ್ಟಪಟ್ಟು ದುಡಿಯುವ ಯುವಕರ ಅಗತ್ಯವಿದೆ. ಉದ್ಯೋಗ ಎಂದರೆ ಕೇವಲ ಸರ್ಕಾರ ಅಥವಾ ಸಾರ್ವಜನಿಕ ವಲಯದಲ್ಲಿ ಕೆಲಸ ಎಂದರ್ಥವಲ್ಲ. ಭಾರತದ ಆರ್ಥಿಕತೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಪ್ರತಿಭೆಯ ಅಗತ್ಯವಿದೆ ಎಂದು ಬರೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *