ದಾವಣಗೆರೆಯಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯ ರಥೋತ್ಸವ – ಇಲ್ಲಿ ಮಹಿಳೆಯರೇ ರಥ ಎಳೀತಾರೆ

Public TV
1 Min Read

ದಾವಣಗೆರೆ: ಸಾಮಾನ್ಯವಾಗಿ ರಥೋತ್ಸವದಲ್ಲಿ ರಥ ಎಳೆಯುವವರು ಪುರುಷರಾಗಿರುತ್ತಾರೆ. ಅಷ್ಟೇ ಅಲ್ಲದೇ ರಥೋತ್ಸವ ನಡೆಯುವುದು ಹಿಂದೂ ಧರ್ಮದಲ್ಲಿ. ಆದರೆ ಜಿಲ್ಲೆಯ ಯರಗುಂಟೆ ಗ್ರಾಮದಲ್ಲಿ ರಾಜ್ಯದ ಯಾವುದೇ ಸ್ಥಳಗಳಲ್ಲಿ ನಡೆಯದಂತ ವಿಶಿಷ್ಟ ಮಹಿಳಾ ರಥೋತ್ಸವ ನಡೆಯುತ್ತೆ. ಇಲ್ಲಿ ಮಹಿಳೆಯರೇ ರಥ ಎಳೆಯೋದೇ ವೈಶಿಷ್ಟ್ಯವಾಗಿದೆ. ರಥವನ್ನು ಮಹಿಳೆಯರು ಎಳೆಯುವುದರ ಜೊತೆಗೆ ಮುಸ್ಲಿಮರು ಕೂಡ ರಥೋತ್ಸವದಲ್ಲಿ ಭಾಗವಹಿಸಿ ಏಕತೆಯನ್ನು ಮೆರೆದಿದ್ದಾರೆ.

ಈ ಗ್ರಾಮದ ಕರಿಬಸವೇಶ್ವರ ರಥೋತ್ಸವವನ್ನು ವಿಜೃಂಭಣೆಯಿಂದ ಮಹಿಳೆಯರೇ ಮುಂದೆ ನಿಂತು ಆಚರಿಸುತ್ತಾರೆ. ಜೊತೆಗೆ ರಥವನ್ನೂ ಕೂಡ ಅವರೇ ಎಳೆಯುತ್ತಾರೆ. ಇದು ಹಿಂದೂ ಮುಸ್ಲಿಂ ಭಾವೈಕ್ಯತೆಯ ಪೂಜಾಕಾರ್ಯವಾಗಿದ್ದು, ಮಹಿಳೆಯರು ಶ್ರದ್ಧಾ ಭಕ್ತಿಯಿಂದ ರಥವನ್ನು ಎಳೆದು ದೇವರಿಗೆ ಪೂಜೆ ಸಲ್ಲಿಸುತ್ತಾರೆ.

ಹೀಗೆ ರಥ ಎಳೆಯುವುದು ಹಾಗೂ ಕರಿಬಸವೇಶ್ವರನ ಪೂಜೆ ಮಾಡುವುದು ಹಾಗೂ ತೊಟ್ಟಿಲು ತೂಗುವುದರಿಂದ ತಾವು ಬೇಡಿಕೊಂಡ ಇಷ್ಟಾರ್ಥಗಳು ಈಡೇರುತ್ತವೆ ಎಂದು ಭಕ್ತೆಯರಾದ ಸುಮಾ ಮತ್ತು ಸುರೇಖಾ ಅವರು ಹೇಳಿದ್ದಾರೆ.

ಈ ರಥೋತ್ಸವಕ್ಕೆ ಕೇವಲ ಯರಗುಂಟೆ ಗ್ರಾಮದವರಷ್ಟೇ ಅಲ್ಲ ದಾವಣಗೆರೆ ಸುತ್ತಮುತ್ತಲಿನ ಎಲ್ಲಾ ಗ್ರಾಮದ ಮಹಿಳೆಯರು ಬಂದು ಜಾತ್ರೆಯಲ್ಲಿ ಭಾಗಿಯಾಗುತ್ತಾರೆ. ವಿಶೇಷ ಎಂದರೆ ಮುಸ್ಲಿಂ ಧರ್ಮಿಯರು ಬಂದು ಕರಿಬಸವೇಶ್ವರನ ರಥಕ್ಕೆ ಹೂ ಮಾಲೆ ಸಮರ್ಪಣೆ ಮಾಡುತ್ತಾರೆ. ಇದರ ಮೂಲಕ ದೇವನೊಬ್ಬ ನಾಮ ಹಲವು ಅನ್ನೋ ಸಂದೇಶವನ್ನು ಸಾರುತ್ತಾರೆ ಎಂದು ಮುಸ್ಲಿಂ ಭಕ್ತ ಸಯ್ಯದ್ ಖಾದರ್ ಷಾ ಅವರು ಹೇಳಿದ್ರು.

Share This Article
Leave a Comment

Leave a Reply

Your email address will not be published. Required fields are marked *