ಮರ ಹತ್ತಿದ ಕಾಡು ಕರಡಿ – 54 ತಾಸುಗಳ ಬಳಿಕ ರಕ್ಷಣೆ

Public TV
1 Min Read

ಭುವನೇಶ್ವರ: ಕರಡಿಯೊಂದು ಆಹಾರ ಹುಡುಕುತ್ತಾ ಗ್ರಾಮಕ್ಕೆ ಬಂದು, ಗ್ರಾಮಸ್ಥರನ್ನು ಕಂಡು ಹೆದರಿ ಮರ ಏರಿ ಕುಳಿತಿದ್ದ ಘಟನೆ ಒಡಿಶಾದ ನಬ್ರಂಗ್‌ಪುರ ಜಿಲ್ಲೆಯ ನಾಯಕ್‌ಗುಡ ಗ್ರಾಮದಲ್ಲಿ ನಡೆದಿದೆ. ಸತತ 54 ಗಂಟೆಗಳ ಕಾಲ ಮರದಲ್ಲಿಯೇ ಹೆದರಿ ಕುಳಿತಿದ್ದ ಕರಡಿಯನ್ನು ಬಳಿಕ ರಕ್ಷಣೆ ಮಾಡಲಾಗಿದೆ.

ಮರವೇರಿ ಕುಳಿತಿದ್ದ ಕರಡಿಯ ಬಗ್ಗೆ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಕರಡಿಯನ್ನು ಕೆಳಗೆ ಇಳಿಸಲು ಶತಪ್ರಯತ್ನ ಪಟ್ಟಿದ್ದಾರೆ. 1 ದಿನದವರೆಗೆ ಕರಡಿಯನ್ನು ಕೆಳಗೆ ಇಳಿಸಲು ಪ್ರಯತ್ನಪಟ್ಟ 10 ಮಂದಿ ಅರಣ್ಯ ತಂಡ ಗ್ರಾಮಸ್ಥರನ್ನು ಅಲ್ಲಿಂದ ದೂರ ಕಳುಹಿಸುವುದರಿಂದ ಹಿಡಿದು ಬಗೆಬಗೆಯ ಭಕ್ಷ್ಯಗಳನ್ನು ಇರಿಸಿ ಅದನ್ನು ಕೆಳಗೆ ತರಲು ಪ್ರಯತ್ನ ಪಟ್ಟಿದ್ದಾರೆ. ಇದನ್ನೂ ಓದಿ: ಆಹಾರಕ್ಕಾಗಿ ನಾಡಿಗೆ ಬಂತು ಕಾಡು ಕರಡಿ

ಹಲವು ಪ್ರಯತ್ನಗಳ ಬಳಿಕ ಅರಣ್ಯಾಧಿಕಾರಿಗಳು ಕೊನೆಗೂ 54 ಗಂಟೆಗಳ ಬಳಿಕ ಕರಡಿಯನ್ನು ಕೆಳಗೆ ಇಳಿಸುವಲ್ಲಿ ಸಫಲರಾಗಿದ್ದಾರೆ. 2 ದಿನಗಳಿಂದ ಏನನ್ನೂ ತಿಂದಿರದ ಕರಡಿ ಪ್ರಜ್ಞಾಹೀನ ಸ್ಥಿತಿಗೆ ಜಾರಿದ್ದು, ಅದಕ್ಕೆ ಅಗತ್ಯ ಚಿಕಿತ್ಸೆ ನೀಡಿದ ಬಳಿಕ ಕಾಡಿಗೆ ಬಿಡಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ:ನ ರಾಜ್ಯದ 19 ಪೊಲೀಸ್ ಅಧಿಕಾರಿಗಳಿಗೆ ವಿಶೇಷ ಗೌರವ

ಕಾಡು ಕರಡಿಗಳು ಆಹಾರಕ್ಕಾಗಿ ಹಳ್ಳಿಗಳಿಗೆ ನುಗ್ಗಿ, ಜನರನ್ನು ಭಯಭೀತಗೊಳಿಸುತ್ತಿರುವ ಘಟನೆ ಆಗಾಗ ನಡೆಯುತ್ತಲೇ ಇದೆ. ಅವು ಜನವಸತಿ ಪ್ರದೇಶಗಳಿಗೆ ಪ್ರವೇಶಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *