ಚಿನ್ನದಂಗಡಿ ದೋಚಲು ಬಾಡಿಗೆ ಮನೆಯಲ್ಲಿ ವಾಸ- ಮನೆಯಿಂದಲೇ ಸುರಂಗ ಕೊರೆದು ಲೂಟಿ

Public TV
1 Min Read

ಬೆಂಗಳೂರು: ಚಿನ್ನದಂಗಡಿಯ ಪಕ್ಕದ ಮನೆಯನ್ನು ಬಾಡಿಗೆ ಪಡೆದ ಯುವಕರು ಚಿನ್ನದ ಅಂಗಡಿಗೆ ಸುರಂಗ ಕೊರೆದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಲೂಟಿ ಮಾಡಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೊಮ್ಮನಹಳ್ಳಿಯ ಹೊಂಗಸಂದ್ರದಲ್ಲಿನ ಪವನ್ ಜ್ಯುವೆಲ್ಲರ್ಸ್ ನಲ್ಲಿ ಈ ಘಟನೆ ನಡೆದಿದ್ದು, ಅಂಗಡಿಯ ಪಕ್ಕದ ಮನೆಯಿಂದ ಸುರಂಗ ಕೊರೆದು ಲೂಟಿ ಮಾಡಿದ್ದಾರೆ. ಹದಿನೈದು ದಿನಗಳ ಹಿಂದೆ ಬಾಡಿಗೆ ಪಡೆದಿದ್ದ ಉತ್ತರ ಪ್ರದೇಶ ಮೂಲದ ಆರೋಪಿಗಳು ಈ ಕೃತ್ಯ ನಡೆಸಿದ್ದಾರೆ.

ಹದಿನೈದು ದಿನದಿಂದ ಸುರಂಗ ಕೊರೆದು ಗುರುವಾರ ರಾತ್ರಿ ಚಿನ್ನದಂಗಡಿಯಲ್ಲಿನ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಲೂಟಿ ಮಾಡಿ ಪರಾರಿಯಾಗಿದ್ದಾರೆ. ಇಂದು ಬೆಳಗ್ಗೆ ಅಂಗಡಿ ಮಾಲೀಕ ಅಂಗಡಿ ಬಾಗಿಲು ತೆರೆದಾಗ ಪ್ರಕರಣ ಬೆಳಕಿಗೆ ಬಂದಿದೆ.

ವಿಷಯ ತಿಳಿದು ಬೊಮ್ಮನಹಳ್ಳಿ ಪೊಲೀಸರು, ಶ್ವಾನ ದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

https://www.youtube.com/watch?v=O5k_wbWqmko

Share This Article
Leave a Comment

Leave a Reply

Your email address will not be published. Required fields are marked *