ಶಿರೂರು ಮಠಕ್ಕೆ ಯೋಗ್ಯವಟು ಉತ್ತರಾಧಿಕಾರಿ -ಸೋದೆ ಮಠಾಧೀಶರಿಂದ ಸ್ಪಷ್ಟನೆ

Public TV
1 Min Read

ಉಡುಪಿ: ಶೀರೂರು ಮಠಕ್ಕೆ ಯೋಗ್ಯ ವಟುವೊಬ್ಬರು ಉತ್ತರಾಧಿಕಾರಿಯಾಗುತ್ತಾರೆ ಎಂದು ಸೋದೆ ಮಠಾಧೀಶ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿಯ ಶೀರೂರು ಶ್ರೀಗಳ ವೃಂದಾವನಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಶೀರೂರು ಮಠದ ಸ್ವತ್ತುಗಳ ಸ್ವಾಧೀಕರಣ ಆಗಬೇಕು. ಈಗ ಎಲ್ಲವೂ ಪೊಲೀಸರ ಸುಪರ್ಧಿಯಲ್ಲಿದೆ. ಪೊಲಿಸರ ಮೂಲಕ ಕಾನೂನು ಪ್ರಕಾರ ಎಲ್ಲವನ್ನೂ ಮಾಡುತ್ತೇವೆ. ಶೀರೂರು ಮಠಕ್ಕೆ ಉತ್ತರಾಧಿಕಾರಿ ಆಯ್ಕೆ ಆಗಬೇಕು. ಒಬ್ಬ ಯೋಗ್ಯ ವಟುವನ್ನು ನೋಡಿ ಉತ್ತರಾಧಿಕಾರಿ ಮಾಡ್ತೇವೆ. ಈ ಬಗ್ಗೆ ಹಿರಿಯ ಯತಿಗಳ ಅಭಿಪ್ರಾಯವನ್ನು ಪಡೆಯುತ್ತೇವೆ. ಶೀರೂರು- ಹಿರಿಯಡ್ಕದ ಎರಡು ಮಠದಲ್ಲಿ ಹಿಂದಿನವರೇ ಪೂಜೆ ಮಾಡ್ತಾರೆ ಅಂತ ಹೇಳಿದ್ರು.

ಸ್ವಾಮೀಜಿಗಳಿಗೆ ವಿಷಪ್ರಾಶನ ಆಗಿತ್ತು ಎಂದು ಮಾಧ್ಯಮದ ಮೂಲಕವೇ ವಿಚಾರ ತಿಳಿಯಿತು. ವೈದ್ಯರ ಪರೀಕ್ಷೆಯಲ್ಲಿ ಎಲ್ಲವೂ ಗೊತ್ತಾಗಲಿದೆ. ವಿಷಪ್ರಾಶನ ಮಾಡುವಂತಹ ಉದ್ದೇಶ ಇಲ್ಲ. ಪಟ್ಟದ ದೇವರ ವಿಚಾರದಲ್ಲಿ ಚರ್ಚೆ ಮಾಡಿದ್ದೇವೆ ಅಷ್ಟೇ. ವಿಷಪ್ರಾಶನ ಎಲ್ಲ ಮಾಡೋಕೆ ಸಾಧ್ಯವಿಲ್ಲ ಅಂದ್ರು.

ಗುಪ್ತ ಸಭೆ ಆಗಿರೋ ಮಾಹಿತಿ ಇಲ್ಲ. ಈಗ ಶಿರೂರು ಶ್ರೀಗಳ ಬೃಂದಾವನ ದರ್ಶನಕ್ಕೆ ಬಂದಿದ್ದೇವೆ. ಕಿರಿಯ ಯತಿಗಳು ಶಿರೂರು ಶ್ರೀಗಳ ದರ್ಶನ ಪಡೆದಿದ್ದೇವೆ. ಶಿರೂರು ಶ್ರೀಗಳಿಗಿಂತ ಹಿರಿಯ ಯತಿಗಳು ದರ್ಶನ ಪಡಿಬೇಕೆಂದು ಇಲ್ಲ ಅಂತ ಅವರು ಸ್ಪಷ್ಟಪಡಿಸಿದ್ರು.

https://www.youtube.com/watch?v=oIVAFQigp0M

https://www.youtube.com/watch?v=mBcWLA7VQJM

Share This Article
Leave a Comment

Leave a Reply

Your email address will not be published. Required fields are marked *