ಶಾರುಖ್ ಖಾನ್ ಮಗ ಎಂಬ ಕಾರಣಕ್ಕೆ ಬಲಿಪಶು ಮಾಡಿದ್ದಾರೆಂದ ಶತ್ರುಘ್ನ ಸಿನ್ಹಾ.!

Public TV
1 Min Read

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ಗೆ ಡ್ರಗ್ಸ್ ಪ್ರಕರಣದಲ್ಲಿ ಎನ್‌ಸಿಬಿ ಕ್ಲೀನ್ ಚೀಟ್ ನೀಡಿದೆ. ಈ ಬೆನ್ನಲ್ಲೆ ನಟ ಶತ್ರುಘ್ನ ಸಿನ್ಹಾ, ಶಾರುಖ್ ಖಾನ್ ಪುತ್ರ ಎಂಬ ಕಾರಣಕ್ಕಾಗಿ ಆರ್ಯನ್ ಖಾನ್ ಅನ್ನು ಬಲಿಪಶು ಮಾಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಎನ್‌ಸಿಬಿ ಕ್ಲೀನ್ ಚೀಟ್ ನೀಡಿದ ಬೆನ್ನಲ್ಲೆ ಸಾಕಷ್ಟು ಸ್ಟಾರ್ ನಟ ಮತ್ತು ನಟಿಯರು ಈ ಕುರಿತು ಮಾಡಿದ್ದಾರೆ. ಶಾರುಖ್ ಖಾನ್ ಪುತ್ರನ ಬಂಧನವಾದ ದಿನದಿಂದಲೂ ಈವರೆಗೂ ಸ್ಟಾರ್ಸ್, ಶಾರುಖ್ ಬೆನ್ನಿಗೆ ನಿಂತಿದ್ದಾರೆ. ಇದೀಗ ಶಾರುಖ್ ಖಾನ್ ಪುತ್ರನ ಪರ ಬ್ಯಾಟಿಂಗ್ ಶತ್ರುಘ್ನ ಸಿನ್ಹಾ ಮಾಡಿದ್ದಾರೆ. ಇದನ್ನೂ ಓದಿ: ಐಪಿಎಲ್ ಫೈನಲ್ ಮ್ಯಾಚ್: `ಕೆಜಿಎಫ್’ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ ರಣ್‌ವೀರ್ ಸಿಂಗ್

ARYAN

ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಎನ್‌ಸಿಬಿ ಕ್ಲೀನ್ ಚೀಟ್ ನೀಡಿ, ಚಾರ್ಜ್ ಶೀಟ್‌ನಿಂದ ಆರ್ಯನ್ ಖಾನ್ ಹೆಸರನ್ನ ತೆಗೆದುಹಾಕಲಾಗಿದೆ. ಈ ಕುರಿತು ಸಂದರ್ಶನವೊಂದರಲ್ಲಿ ಶತ್ರುಘ್ನ ಸಿನ್ಹಾ, ಮುಗ್ಧ ಹುಡುಗ ಆರ್ಯನ್ ಯಾವುದೇ ಸಾಕ್ಷಿ ಮತ್ತು ಪುರಾವೆಯಿಲ್ಲದೇ ಬಂಧಿಸಿದ್ದರು. ಸೂಕ್ತ ತನಿಖೆ ಕೈಗೊಳ್ಳಬೇಕಿತ್ತು. ಸ್ಟಾರ್ ನಟ ಶಾರುಖ್ ಖಾನ್ ಪುತ್ರ ಎಂಬ ಕಾರಣಕ್ಕೆ ಆರ್ಯನ್ ಅನ್ನು ಬಲಿಪಶು ಮಾಡಿದ್ದಾರೆ. ಇಂತಹ ಕಾರ್ಯಕ್ಕೆ ಹೆಜ್ಜೆ ಇಡುವ ಮುನ್ನ ಸಾವಿರ ಬಾರಿ ಯೋಚಿಸಬೇಕು ಎಂದಿದ್ದಾರೆ. ಒಟ್ನಲ್ಲಿ ಶಾರುಖ್ ಖಾನ್ ಕುಟುಂಬದ ಪರ ನಿಂತ ಶತ್ರುಘ್ನ ಸಿನ್ಹಾಗೆ ನಡೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *