ಆ ಹೆಣ್ಣಿಗೆ ಬುದ್ಧಿ ಇಲ್ಲ: ಶೋಭಾ ಕರಂದ್ಲಾಜೆ ವಿರುದ್ಧ ಶಾಮನೂರು ಕಿಡಿ

Public TV
1 Min Read

– ಕೇಂದ್ರ ವ್ಯಾಪ್ತಿಗೆ ಏನು ಬರುತ್ತೆಂದು ಶೋಭಾಗೆ ಗೊತ್ತಿಲ್ಲ: ಸಚಿವ ಖರ್ಗೆ

ದಾವಣಗೆರೆ: ಆ ಹೆಣ್ಣಿಗೆ ಬುದ್ಧಿ ಇಲ್ಲ. ಹೆಣ್ಣು ಮಗಳನ್ನ ಮುಂದೆ ಇಟ್ಟುಕೊಂಡು ಗಂಡಸರು ಹಿಂದೆ ಸರಿಯುತ್ತಾರೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಅವರು, ಸಂಸದೆ ಶೋಭಾ ಕರಂದ್ಲಾಜೆ ಹಾಗೂ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.

ನಗರದ ಛಲವಾದಿ ಮಹಾಸಭೆ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಬಳಿಕ ಮಾತನಾಡಿದ ಶಾಸಕರು, ಸುಳ್ಳು ಹೇಳುವುದು ಬಿಜೆಪಿಯವರಿಗೆ ಚೆನ್ನಾಗಿ ಗೊತ್ತಿದೆ. ಏರ್ ಶೋ ಅಗ್ನಿ ಅವಘಡಕ್ಕೂ ರಾಜ್ಯ ಸರ್ಕಾರ ವೈಫಲ್ಯ ಕಾರಣ ಎಂದು ಹೇಳುವುದಕ್ಕೂ ಏನು ಸಂಬಂಧ. ಆಕಸ್ಮಿಕವಾಗಿ ಬೆಂಕಿ ಹತ್ತಿದರೆ ಯಾರು ಏನು ಮಾಡಲು ಸಾಧ್ಯ? ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನು ಓದಿ: ಏರ್ ಶೋ ಬೆಂಕಿ ಅವಘಡಕ್ಕೂ ಪುಲ್ವಾಮಾ ದಾಳಿಗೂ ಲಿಂಕ್ ಇದೆಯಾ – ಘಟನೆಯನ್ನು ರಾಜಕೀಯಗೊಳಿಸಿದ್ರಾ ಕರಂದ್ಲಾಜೆ?

ಇದೇ ವೇಳೆ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಕೇಂದ್ರ ಸರ್ಕಾರ ಗೆರೆ ಎಲ್ಲಿ ಎಳೆಯಬೇಕು? ರಾಜ್ಯ ಸರ್ಕಾರದ ಗೆರೆ ಎಲ್ಲಿ ಎಳೆಯಬೇಕು? ಕೇಂದ್ರದ ವ್ಯಾಪ್ತಿಗೆ ಏನು ಬರುತ್ತಿದೆ ಎನ್ನುವುದೇ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು. ಇದನ್ನು ಓದಿ: ಗಂಡಸು ಎಂಪಿಗಳಿಗೆ ಶೋಭಾ ಕರಂದ್ಲಾಜೆ ಚಾಲೆಂಜ್

ಏರ್ ಶೋಗಳಲ್ಲಿ ರಕ್ಷಣಾ ಇಲಾಖೆ ಅವರು ನಮ್ಮನ್ನ (ರಾಜ್ಯ ಸರ್ಕಾರವನ್ನು) ಒಳಗಡೆ ಬಿಡುವುದಿಲ್ಲ. ಇದರಿಂದಾಗಿ ಸಂಸದೆ ಶೋಭಾ ಕರಂದ್ಲಾಜೆ ಇಲ್ಲಸಲ್ಲದ ಹೇಳಿಕೆ ಕೊಡುವುದು ಸರಿಯಲ್ಲ. ಏರ್ ಶೋ ಅಗ್ನಿ ಅವಘಡದಲ್ಲಿ ಕಾರುಗಳು ಸುಟ್ಟಿವೆ ಪರವಾಗಿಲ್ಲ. ಒಂದು ವೇಳೆ ಪ್ರಾಣಹಾನಿ ಸಂಭವಿಸಿದ್ದರೆ ಏನು ಮಾಡಬೇಕಿತ್ತು ಎಂದು ಆಕ್ರೋಶ ಹೊರ ಹಾಕಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *