ತಾಜ್‌ಮಹಲ್ ನಿರ್ಮಿಸಲು ಶಹಜಾನ್ ಕೊಟೆಷನ್ ಕೇಳಿಲ್ಲ – ನಿಯಮ ಉಲ್ಲಂಘನೆ ಆರೋಪಕ್ಕೆ ಗೋವಾ ಸಚಿವ ಸಮರ್ಥನೆ

Public TV
1 Min Read

ಪಣಜಿ: ಗೋವಾದಲ್ಲಿನ ಆಕರ್ಷಕ ಕಲಾ ಅಕಾಡೆಮಿ ಕಟ್ಟಡದ ನವೀಕರಣ ಕಾಮಗಾರಿ ಹಂಚಿಕೆಗೆ ಇಲಾಖೆ ಕೈಗೊಂಡ ಕ್ರಮವನ್ನು ಸಮರ್ಥಿಸುವ ಭರದಲ್ಲಿ ಗೋವಾ ಕಲಾ ಮತ್ತು ಸಂಸ್ಕೃತಿ ಸಚಿವ ಗೋವಿಂದ್ ಗೌಡೆ ತಾಜ್‌ಮಹಲ್ ಅನ್ನು ಉದಾಹರಣೆಯಾಗಿ ತೆಗೆದುಕೊಂಡು ತಮ್ಮ ಇಲಾಖೆಯ ಕಾರ್ಯವನ್ನು ಸಮರ್ಥಿಸಿಕೊಂಡಿದ್ದಾರೆ.

ಮೊಘಲ್ ಚಕ್ರವರ್ತಿ ಷಹಜಹಾನ್ ಆಗ್ರಾದಲ್ಲಿ ತಾಜ್ ಮಹಲ್ ನಿರ್ಮಿಸುವಾಗ ಯಾವುದೇ ಕೊಟೆಷನ್ ಆಹ್ವಾನಿಸಿರಲಿಲ್ಲ ಎಂದು ಸಚಿವ ಗೋವಿಂದ್ ಗೌಡೆ ಉದಾಹರಣೆ ನೀಡಿದ್ದಾರೆ. ಇದನ್ನೂ ಓದಿ: ಬಿಜೆಪಿ MLAಗೆ ಮಣ್ಣಿನ ಸ್ನಾನ ಮಾಡಿಸಿದ ಮಹಿಳೆಯರ ಗುಂಪು – ಕಾರಣ ಕೇಳಿ ನೆಟ್ಟಿಗರು ಶಾಕ್

ರಾಜ್ಯ ವಿಧಾನಸಭೆಯ ಮುಂಗಾರು ಅಧಿವೇಶನದ ಪ್ರಶ್ನೋತ್ತರ ಸಮಯದಲ್ಲಿ ಮಾತನಾಡಿದ ಗೋವಾ ಫಾರ್ವರ್ಡ್ ಪಾರ್ಟಿ (GFP) ಶಾಸಕ ವಿಜಯ್ ಸರ್ದೇಸಾಯಿ, ರಾಜ್ಯ ರಾಜಧಾನಿಯ ಕಲಾ ಅಕಾಡೆಮಿ ಕಟ್ಟಡವನ್ನು 49 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಿಸಲು ಕಾರ್ಯಾದೇಶ ನೀಡುವ ವೇಳೆ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ. ಜೊತೆಗೆ ಕೇಂದ್ರ ಲೋಕೋಪಯೋಗಿ ಇಲಾಖೆಯ ಕೈಪಿಡಿಯನ್ನು ಉಲ್ಲಂಘಿಸಿ ಇಲಾಖೆಯು ಟೆಕ್ಟನ್ ಬಿಲ್ಡ್ಕಾನ್ಸ್ ಪ್ರೈವೇಟ್ ಲಿಮಿಟೆಡ್‌ಗೆ ನವೀಕರಣದ ಕೆಲಸ ನೀಡಿದೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: ಸರ್ಕಾರಿ ನೌಕರರು ಕಚೇರಿಗಳಲ್ಲಿ ಜೀನ್ಸ್-ಟೀ ಶರ್ಟ್ ಧರಿಸುವಂತಿಲ್ಲ- ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ

ಇದಕ್ಕೆ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡ ಗೋವಿಂದ್ ಗುಡೆ ಅವರು, `ತಾಜ್ ಮಹಲ್ ಎಂದೆಂದಿಗೂ ಶಾಶ್ವತ ಮತ್ತು ಸುಂದರವಾಗಿದೆ. ಏಕೆಂದರೆ ಶಹಜಹಾನ್ ಅದನ್ನು ಆಗ್ರಾದಲ್ಲಿ ನಿರ್ಮಿಸಲು ಉಲ್ಲೇಖವನ್ನೂ ಕೇಳಲಿಲ್ಲ. ತಾವು ಆಗ್ರಾದ ತಾಜ್‌ಮಹಲ್‌ಗೆ ಭೇಟಿ ನೀಡಿರಬಹುದು. ಇದರ ನಿರ್ಮಾಣವು 1632 ರಲ್ಲಿ ತಾಜ್‌ಮಹಲ್ ನಿರ್ಮಾಣ ಕಾರ್ಯ ಆರಂಭವಾಯಿತು ಮತ್ತು 1653ರಲ್ಲಿ ಪೂರ್ಣಗೊಂಡಿತು ಎಂದು ಹೇಳಿದ್ದಾರೆ.

ನೀವೇಕೆ ಹೀಗೆ ಯೋಚಿಸುತ್ತೀರಿ? ಶಹಜಾನ್ ಅಂದು ಯಾವುದೇ ಕೊಟೆಷನ್ ಆಹ್ವಾನಿಸಿರಲಿಲ್ಲ. ಆದರೂ ತಾಜ್‌ಮಹಲ್ 390 ವರ್ಷ ಕಳೆದರೂ ಸುಂದರವಾಗಿ ಮತ್ತು ಸುರಕ್ಷಿತವಾಗಿಯೇ ಉಳಿದಿದೆ ಎಂದು ಹೇಳಿ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *