ಮೈಸೂರಿನ ಒರಿಜಿನಲ್ ದಸರಾದ ನೆನಪನ್ನು ಬಿಚ್ಚಿಟ್ಟ ಅಂಬರೀಶ್

Public TV
1 Min Read

ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರು ನಾನು ನೋಡಿದ ಆ ಕಾಲದ ದಸರಾದ ರಾಜ ವೈಭವವನ್ನ ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡಿದ್ದಾರೆ.

ದಸರಾ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ತಾತ ಪಿಟೀಲು ಚೌಡಯ್ಯ ಅವರೊಂದಿಗೆ ದಸರಾ ದರ್ಬಾರಿಗೆ ಹೋಗುತ್ತಿದ್ದೆ. ಅಲ್ಲಿ ಅವರು ಪಿಟೀಲು ಬಾರಿಸುತ್ತಿದ್ದರು. ಚಿಕ್ಕವನಾಗಿದ್ದ ನಾನು ತಾತನ ಜೊತೆ ಮೈಸೂರು ಪೇಟಾ, ಶಲ್ಯ, ಕೋಟು ತೊಟ್ಟು ಅರಮನೆಗೆ ಹೋಗುತ್ತಿದ್ದೆ ಎಂದು ಹಳೆಯ ನೆನಪನ್ನು ಮೆಲುಕು ಹಾಕಿದರು.

ಮಹರಾಜರು ಅಂಬಾರಿ ಮೇಲೆ ಸವಾರಿ ಮಾಡುವುದನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು. ಅಂತಹ ದೃಶ್ಯ ಇನ್ನೆಲ್ಲೂ ಸಿಗುವುದಿಲ್ಲ. ನಾನು ಸ್ವಲ್ಪ ದೊಡ್ಡವನಾದ ಮೇಲೆ ತಂದೆ ನನ್ನನ್ನ ಜಂಬೂ ಸವಾರಿ ನೋಡಲು ಕರೆದುಕೊಂಡು ಹೋಗುತ್ತಿದ್ದರು. ಆಗ ನಾವು ಕೆಆರ್‌ಎಸ್‌ ಆಸ್ಪತ್ರೆ ಮೇಲೆ, ದೇವರಾಜ ಮಾರ್ಕೆಟ್ ಮೇಲೆ ನಿಲ್ಲುತ್ತಿದ್ದೆವು. ಆ ಸಮಯದಲ್ಲಿ ಮಹಾರಾಜರು ಅಪ್ಪಿ-ತಪ್ಪಿ ನಿಂತಿದ್ದ ನಮ್ಮನ್ನು ನೋಡಿದರೆ ಅಯ್ಯೋ ಮಹಾರಾಜರು ನಮ್ಮನ್ನ ನೋಡಿಬಿಟ್ಟರು, ಅವರ ಆಶೀರ್ವಾದ ನಮ್ಮ ಮೇಲೆ ಎಷ್ಟೋ ಇದೆ ಎಂದು ಸಂತಸ ಪಡುತ್ತಿದ್ದೆವು. ಇದು ಒರಿಜಿನಲ್ ದಸರಾ ಎಂದು ಹೇಳಿದರು.

ಮಹಾರಾಜರು ಆನೆ ಮೇಲೆ ಸವಾರಿ ಮಾಡಿದರೆ, ಇವತ್ತು ಎಷ್ಟು ಜನ ದಸರಾ ನೋಡಲು ಸೇರುತ್ತಾರೋ ಅದಕ್ಕಿಂತ 60 ಪಟ್ಟು ಜನ ಸೇರುತ್ತಾರೆ. ಈ ವರ್ಷದ ದಸರಾದಲ್ಲಿ ಅರಮನೆಯ ದೀಪಾಲಂಕಾರ ಮತ್ತು ಮೈಸೂರು ನಗರಿಯನ್ನ ಬಹಳ ಸೊಗಸಾಗಿ ಅಲಂಕರಿಸಿದ್ದಾರೆ. ನವರಾತ್ರಿಯ ಸಮಯದಲ್ಲಿ ಯುವ ದಸರಾ, ಕ್ರೀಡೆ ಮುಂತಾದವುಗಳು ಎಲ್ಲರಿಗೂ ಮನೋರಂಜನೆ ನೀಡಿದೆ ಎಂದು ಅಂಬಿ ಯವರು “ನಾನು ಕಂಡ ದಸರಾದ” ಅನುಭವವನ್ನ ಪಬ್ಲಿಕ್ ಟಿವಿಯೊಂದಿಗೆ ಹಂಚಿಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *