ಹವಾಲಾ ದಂಧೆ – 1.27 ಕೋಟಿ ವಶಕ್ಕೆ, ಮೂವರು ಅರೆಸ್ಟ್

Public TV
2 Min Read

ಹೈದರಾಬಾದ್: ಹವಾಲಾ ದಂಧೆಯನ್ನು (Hawala Racket) ಭೇದಿಸಿದ ಹೈದರಾಬಾದ್ (Hyderabad) ಪೊಲೀಸರು, 1.27 ಕೋಟಿ ರೂಪಾಯಿ ಮೌಲ್ಯದ ಹಣವನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ.

ನಾರಾಯಣಗುಡ ಪೊಲೀಸ್ ಠಾಣಾ (Narayanguda police station) ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಮನ್ನೆ ಶ್ರೀನಿವಾಸ್ (53), ವಿಶ್ವನಾಥ್ ಚೆಟ್ಟಿ (45) ಮತ್ತು ಕೆ. ಫಣಿಕುಮಾರ್ ರಾಜು (42) ಎಂದು ಗುರುತಿಸಲಾಗಿದ್ದು, ಮೂವರೂ ಹೈದರಾಬಾದ್‍ನವರಾಗಿದ್ದಾರೆ.

ಹವಾಲಾ ದಂಧೆ ಬಗ್ಗೆ ಗೌಪ್ಯ ಮಾಹಿತಿ ದೊರೆತ ಕಮಿಷನರ್ ಕಾರ್ಯಪಡೆ, ಕೇಂದ್ರ ವಲಯ ತಂಡದ ಸಬ್ ಇನ್ಸ್‍ಪೆಕ್ಟರ್ ಸಾಯಿ ಕಿರಣ್ ಮತ್ತು ಅವರ ತಂಡವು ಹಿಮಾಯತ್ ನಗರದ ಲಿಬರ್ಟಿ ಎಕ್ಸ್ ರಸ್ತೆಯ ರೇಮಂಡ್ ಶೋರೂಂ ಎದುರು ಬಿಳಿ ಬಣ್ಣದ ಹೋಂಡಾ ಆಕ್ಟಿವಾದಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಅಡ್ಡಹಾಕಿದ್ದಾರೆ. ಬಳಿಕ ವಿಚಾರಣೆ ನಡೆಸಿದಾಗ ಆರೋಪಿ ಕೆ. ಫಣಿಕುಮಾರ್ ರಾಜು ಸತ್ಯ ಬಾಯ್ಬಿಟ್ಟಿದ್ದಾನೆ. ಇದೇ ವೇಳೆ ವಾಹನವನ್ನು ಪರಿಶೀಲನೆ ನಡೆಸಿದ ವೇಳೆ ಲೆಕ್ಕಕ್ಕೆ ಸಿಗದ 1.27 ಕೋಟಿ ರೂ. ಪತ್ತೆಯಾಗಿದೆ. ಇದನ್ನೂ ಓದಿ: ಡಯಟ್ ಕಾರಣದಿಂದಾಗಿ ಖ್ಯಾತ ನಟ ಕಲ್ಯಾಣ್ ಕುಮಾರ್ ಸೊಸೆ ನಿಧನ?

POLICE JEEP

ಈ ಬಗ್ಗೆ ತನಿಖೆಯನ್ನು ತೀವ್ರಗೊಳಿಸಿದ ಪೊಲೀಸರಿಗೆ, ಬಂಧಿತ ಆರೋಪಿ ಮನ್ನೆ ಶ್ರೀನಿವಾಸ್ ಬಳಿ ಕಲೆಕ್ಷನ್ ಏಜೆಂಟ್ ಆಗಿ ಕೆಲಸ ಮಾಡಿದ್ದು, ಕೆ. ಫಣಿಕುಮಾರ್ ಅವರಿಂದ 70 ಲಕ್ಷ ರೂ. ಹಾಗೂ ಉಳಿದ 57 ಲಕ್ಷ ರೂ.ಗಳನ್ನು ಸಿ. ವಿಶ್ವನಾಥ್ ಚೆಟ್ಟಿ ಎಂಬ ಮತ್ತೊಬ್ಬ ವ್ಯಕ್ತಿಯಿಂದ ವಸೂಲಿ ಮಾಡಿರುವುದಾಗಿ ತಿಳಿಸಿದ್ದಾನೆ. ಇದನ್ನೂ ಓದಿ: ಧರ್ಮಸ್ಥಳದ ಧರ್ಮಾಧಿಕಾರಿಗಳ ಭೇಟಿ ಮಾಡಿ ಆಶೀರ್ವಾದ ಪಡೆದ ರಿಷಬ್ ಶೆಟ್ಟಿ ದಂಪತಿ

ಈ ಆಧಾರಗಳ ಮೇಲೆ ಅಧಿಕಾರಿಗಳು ಮನ್ನೆ ಶ್ರೀನಿವಾಸ್ ಮತ್ತು ವಿಶ್ವನಾಥ್ ಚೆಟ್ಟಿಯನ್ನು ಸಹ ಬಂಧಿಸಿದ್ದು, ಈ ಇಬ್ಬರು ಹಣದ ಲೆಕ್ಕವನ್ನು ನೀಡವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಅವರನ್ನು ಮತ್ತು ನಗದನ್ನು ಮುಂದಿನ ಕ್ರಮಕ್ಕಾಗಿ ನಾರಾಯಣಗುಡ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *