ಹೈದರಾಬಾದ್ ನಲ್ಲಿ ‘ಕೆಜಿಎಫ್ 2’ ಡೈರೆಕ್ಟರ್ ಪ್ರಶಾಂತ್ ನೀಲ್ ಗೆ ಮನೆ ಬೇಕಾಗಿದೆ

Public TV
1 Min Read

ಕೆಜಿಎಫ್ 2 ಸಕ್ಸಸ್ ಅನ್ನು ಚಿತ್ರತಂಡ ಎಂಜಾಯ್ ಮಾಡುತ್ತಿದ್ದರೆ, ಅದರ ನಿರ್ದೇಶಕ ಪ್ರಶಾಂತ್ ನೀಲ್ ‘ಸಲಾರ್’ ಸಿನಿಮಾದ ಉಳಿದ ಕೆಲಸಗಳತ್ತ ಮುಖ ಮಾಡಿದ್ದಾರೆ. ‘ಸಲಾರ್’ ಸಿನಿಮಾದ ಶೂಟಿಂಗ್ ಇನ್ನೂ ಬಾಕಿ ಇರುವ ಕಾರಣದಿಂದಾಗಿ ಅವರು ಹೈದರಾಬಾದ್ ನಲ್ಲೇ ಉಳಿದುಕೊಳ್ಳಲು ನಿರ್ಧರಿಸಿದ್ದಾರಂತೆ. ಹಾಗಾಗಿ ಹೈದರಾಬಾದ್ ನಲ್ಲಿ ಮನೆ ಹುಡುಕಾಟಕ್ಕೆ ಮುಂದಾಗಿದ್ದಾರೆ ಎನ್ನುತ್ತಾರೆ ಅವರ ಆಪ್ತರು. ಇದನ್ನೂ ಓದಿ : ಪ್ರಶಾಂತ್ ನೀಲ್ -ಜ್ಯೂ.ಎನ್‌ಟಿಆರ್ ವಿವಾಹ ವಾರ್ಷಿಕೋತ್ಸವ ಸಂಭ್ರಮ ಹೇಗಿತ್ತು ಗೊತ್ತಾ?

ಕೆಲಸದ ವಿಷಯದಲ್ಲಿ ಪ್ರಶಾಂತ್ ನೀಲ್ ದೈತ್ಯ. ಹಗಲು ರಾತ್ರಿ ಲೆಕ್ಕಿಸದೇ ಕೆಲಸ ಮಾಡುತ್ತಾರೆ. ಕೆಲಸ ಮಾಡುತ್ತಿರುವಾಗ ಮನೆಗೆ ಹೋಗುವುದೇ ಕಡಿಮೆ ಎಂದು ಅವರೇ ಸ್ವತಃ ಹೇಳಿದ್ದಾರೆ. ಕೋವಿಡ್ ವೇಳೆಯಲ್ಲೇ ಆಫೀಸಿನಲ್ಲೇ ಹೆಚ್ಚು ದಿನ ಉಳಿದುಬಿಟ್ಟೆ ಎಂದೂ ಹೇಳಿದ್ದಾರೆ. ಹಾಗಾಗಿ ಸಲಾರ್ ಸಿನಿಮಾದ ಬಹುತೇಕ ಕೆಲಸಗಳು ಹೈದರಾಬಾದ್ ನಲ್ಲೇ ನಡೆಯುವ ಕಾರಣದಿಂದಾಗಿ ಅಲ್ಲದೇ ಉಳಿದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ : ಯಶ್ ಮುಂದಿನ ಚಿತ್ರ ಯಾರ ಜೊತೆ? ಹೊರಬಿತ್ತು ಬಿಗ್ ನ್ಯೂಸ್

ಈ ತಿಂಗಳಿಂದ ಸಲಾರ್ ಸಿನಿಮಾದ ಶೂಟಿಂಗ್ ಶುರುವಾಗಲಿದ್ದು, ಈ ಸಿನಿಮಾ ಮುಗಿದ ನಂತರ ಅವರು ಜ್ಯೂನಿಯರ್ ಎನ್.ಟಿ.ಆರ್ ಗಾಗಿ ಸಿನಿಮಾವೊಂದನ್ನು ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅದರ ಬಹುತೇಕ ಕೆಲಸಗಳು ಹೈದರಾಬಾದ್ ನಲ್ಲೇ ನಡೆಯುವುದರಿಂದ ಹಲವು ವರ್ಷಗಳ ಕಾಲ ಅವರು ಅಲ್ಲೇ ಇರಬೇಕಾಗಿ ಬರಬಹುದು. ಹಾಗಾಗಿ ಹೈದರಾಬಾದ್ ನಲ್ಲಿ ಉಳಿದುಕೊಳ್ಳಲು ಮನೆಯೊಂದು ಹುಡುಕುತ್ತಿದ್ದಾರಂತೆ. ಇದನ್ನೂ ಓದಿ : ಹೆಸರಾಂತ ಹಾಸ್ಯ ಕಲಾವಿದ ಮೋಹನ್ ಜೂನೇಜ ಇನ್ನಿಲ್ಲ

ಸಲಾರ್ ಮತ್ತು ಜ್ಯೂ.ಎನ್.ಟಿ.ಆರ್ ಈ ಎರಡೂ ಸಿನಿಮಾಗಳು ಮುಗಿಯಲು ಕನಿಷ್ಠ ನಾಲ್ಕೈದು ವರ್ಷ ಬೇಕಾಗಬಹುದು. ಅಲ್ಲದೇ, ಇದೇ ಹೊತ್ತಿನಲ್ಲಿ ಕೆಜಿಎಫ್ 3 ಸಿನಿಮಾದ ವಿಷಯವು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. ಸಲಾರ್ ನಂತರ ಕೆಜಿಎಫ್ 3 ಬರತ್ತಾ? ಅಥವಾ ಕೆಜಿಎಫ್ 3 ಗಿಂತಲೂ ಮೊದಲು ಜ್ಯೂನಿಯರ್ ಎನ್.ಟಿ.ಆರ್ ಸಿನಿಮಾ ಮಾಡುತ್ತಾರಾ ಅವರೇ ಸ್ಪಷ್ಟನೆ ಕೊಡಬೇಕು.

Share This Article
Leave a Comment

Leave a Reply

Your email address will not be published. Required fields are marked *