ನಟ ರಕ್ಷಿತ್ ಶೆಟ್ಟಿಗೆ ಎಡಪಂಥಿ ಪಟ್ಟ ಕಟ್ಟಿದ ಸಾಯಿ ಪಲ್ಲವಿ ವಿರೋಧಿಗಳು

Public TV
1 Min Read

ಳೆದ ಶುಕ್ರವಾರ ಸಾಯಿ ಪಲ್ಲವಿ ನಟನೆಯ ‘ಗಾರ್ಗಿ’ ಸಿನಿಮಾ ದೇಶದಾದ್ಯಂತ ಬಿಡುಗಡೆ ಆಗಿದೆ. ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್ ಆಗಿರುವ ಈ ಸಿನಿಮಾದ ಕನ್ನಡದ ಹಕ್ಕುಗಳನ್ನು ರಕ್ಷಿತ್ ಶೆಟ್ಟಿ ಒಡೆತನದ ಪರಮಃ ಸ್ಟುಡಿಯೋಸ್ ಪಡೆದಿದೆ. ಈ ಕಾರಣಕ್ಕಾಗಿ ಸಾಯಿ ಪಲ್ಲವಿ ವಿರೋಧಿಗಳು ರಕ್ಷಿತ್ ಶೆಟ್ಟಿಗೆ ಎಡಪಂಥಿ ಪಟ್ಟ ಕಟ್ಟಿದ್ದಾರೆ.

ಈ ಹಿಂದೆ ಸಾಯಿ ಪಲ್ಲವಿ ಹಿಂದೂ ವಿರೋಧಿ ಹೇಳಿಕೆ ನೀಡಿದ್ದರು ಎನ್ನುವ ಕಾರಣಕ್ಕಾಗಿ ಹಲವರು ಇವರ ಮೇಲೆ ದೂರು ದಾಖಲಿಸಿದ್ದಾರೆ. ಕಾಶ್ಮೀರದಲ್ಲಿ ನಡೆದ ಹಿಂದೂಗಳ ಮಾರಣ ಹೋಮವನ್ನು ಹಸುಗಳ್ಳರಿಗೆ ಹೋಲಿಸಿದ್ದರು ಎನ್ನುವ ಕಾರಣಕ್ಕಾಗಿ ವಿವಾದವಾಗಿತ್ತು. ಅದನ್ನೇ ಮುಂದಿಟ್ಟುಕೊಂಡು ಗಾರ್ಗಿ ಸಿನಿಮಾಗೆ ಬೈಕಾಟ್ ಮಾಡಬೇಕೆಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರವಾಗಿತ್ತು. ಆದರೆ, ಕೊನೆಗೂ ರಕ್ಷಿತ್ ಶೆಟ್ಟಿ ಮೂಲಕ ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಮಾಡಿದೆ. ಇದನ್ನೂ ಓದಿ:ಪೊನ್ನಿಯನ್ ಸೆಲ್ವನ್ ವಿವಾದ : ಮಣಿರತ್ನಂ ಮತ್ತು ವಿಕ್ರಮ್ ಗೆ ನೋಟಿಸ್

ಹಿಂದೂ ವಿರೋಧಿ ಸಾಯಿ ಪಲ್ಲವಿ ನಟನೆಯ ಗಾರ್ಗಿ ಸಿನಿಮಾವನ್ನು ರಕ್ಷಿತ್ ಶೆಟ್ಟಿ ಕರ್ನಾಟಕದಲ್ಲಿ ವಿತರಣೆ ಮಾಡಿದ್ದಾರೆ. ಈ ನಡೆಯನ್ನು ನೋಡಿದರೆ, ರಕ್ಷಿತ್ ಎಡಪಂಥಿ ಅನಿಸುತ್ತದೆ. ಹಾಗಾಗಿ ಮುಂದಿನ ದಿನಗಳಲ್ಲಿ ರಕ್ಷಿತ್ ಶೆಟ್ಟಿ ಸಿನಿಮಾಗಳನ್ನೂ ವಿರೋಧಿಸೋಣ ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಅಷ್ಟೇ ಸಂಖ್ಯೆಯಲ್ಲಿ ರಕ್ಷಿತ್ ಅವರನ್ನು ಬೆಂಬಲಿಸಿದವರೂ ಇದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *