ಸುಳ್ಳು ಹೇಳಿ ಕಣ್ಣಿರು ಹಾಕಬೇಡಿ- ಎಚ್‍ಡಿಕೆಗೆ ಕೈಮುಗಿದ ನಾರಾಯಣಗೌಡ

Public TV
1 Min Read

ಮಂಡ್ಯ: ಕಣ್ಣೀರು ಹಾಕುತ್ತಾ ಮಾಜಿ ಸಿಎಂ ಕುಮಾರಸ್ವಾಮಿ ಅವರು ಮಾಡಿದ ಆರೋಪಕ್ಕೆ ಕೆ.ಆರ್ ಪೇಟೆ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ತಿರುಗೇಟು ನೀಡಿದ್ದಾರೆ. ಭಗವಂತನ ಆಣೆಗೂ ನಾನು ಯಾವುದೇ ಪತ್ರ ಬರೆದಿಲ್ಲ. ಕುಮಾರಣ್ಣ ಮೊದಲು ಸುಳ್ಳು ಹೇಳುವುದನ್ನು ಬಿಡಿ ಎಂದು ಎಚ್‍ಡಿಕೆ ವಿರುದ್ಧ ಕಿಡಿಕಾರಿದ್ದಾರೆ.

ಜಿಲ್ಲೆಯ ಕಿಕ್ಕೇರಿಯಲ್ಲಿ ಎಚ್‍ಡಿಕೆ ಕಣ್ಣೀರು ಹಾಕಿದ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕುಮಾರಣ್ಣ ಕಣ್ಣೀರು ಹಾಕಿದ್ದಾರೆ. ಯಾಕೆಂದರೆ ಅವರಿಗೆ ಅವರ ಕುಟುಂಬ ಬಿಟ್ಟರೆ ಬೇರೆ ಒಕ್ಕಲಿಗರು ಯಾರು ಬೆಳೆಯಬಾರದು. ಅವರು ನನ್ನ ಕತ್ತು ಹಿಸುಕಲು ಹೊರಟಿದ್ದಾರೆ. ಕತ್ತು ಹಿಸುಕೋದಾದರೆ ಅವರ ಮನೆಗೆ ಕರೆಸಿಕೊಂಡು ಹಿಸುಕಲಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ:ನಾನೇನು ತಪ್ಪು ಮಾಡಿದೆ, ನನ್ನನ್ನು ಯಾಕೆ ಕೈ ಬಿಟ್ಟಿರಿ – ಮಂಡ್ಯದಲ್ಲಿ ಎಚ್‍ಡಿಕೆ ಮತ್ತೆ ಕಣ್ಣೀರು

ಎಚ್‍ಡಿಕೆ ಅವರು ನಾನು ಅವರಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದ್ದಾರೆ. ಭಗವಂತನ ಆಣೆಗೂ ನಾನು ಅವರಿಗೆ ಪತ್ರ ಬರೆದಿಲ್ಲ. ಯಾರು ಬರೆದಿದ್ದಾರೆ? ಯಾಕೆ ಬರೆದಿದ್ದಾರೆ ಎಂದು ಅವರೇ ಸೃಷ್ಟಿಸುತ್ತಿರುವ ಕಥೆಯಿದು. ಅವರು ಮತ ಕೇಳಲಿ ಪಕ್ಷ ಬೆಳೆಸಲಿ. ಆದರೆ ಸುಳ್ಳು ಹೇಳುವುದನ್ನು ನಿಲ್ಲಿಸಲಿ. ದಯಮಾಡಿ ಕುಮಾರಣ್ಣ ಸುಳ್ಳು ಹೇಳುವುದನ್ನು ಬಿಡಿ ಎಂದು ಕೈ ಮುಗಿದಿದ್ದಾರೆ.

ಸುಳ್ಳು ಹೇಳಿ ಹೇಳಿ ನಮ್ಮ ಸ್ಥಿತಿ ಈ ರೀತಿ ಆಯ್ತು. ನಿಮ್ಮನ್ನು ನಾವು ದೂರ ಮಾಡಿಕೊಂಡು ಬರೋದಕ್ಕೆ ನೀವು ಸುಳ್ಳು ಹೇಳಿದ್ದೇ ಕಾರಣ. ದಯವಿಟ್ಟು ಸತ್ಯ ಹೇಳಿ, ಸುಳ್ಳು ಹೇಳಿ ನಮ್ಮ ಕತ್ತು ಯಾಕೆ ಹಿಸುಕಲು ಹೊರಟಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *