ಜ್ವರ, ತಾಳಲಾರದ ಹೊಟ್ಟೆ ನೋವು ಸಮಸ್ಯೆ – ಕರುಳಕುಡಿ ಕೊಂದು ತಾಯಿಯೂ ಸೂಸೈಡ್

Public TV
1 Min Read

ಬೆಂಗಳೂರು: ಜ್ವರ ಹಾಗೂ ಹೊಟ್ಟೆ ನೋವು ತಾಳಲಾರದೆ ತಾಯಿಯೊಬ್ಬಳು ತನ್ನ ಮಗುವನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಈ ಘಟನೆ ಆರ್ ಆರ್ ನಗರದ ಮಂತ್ರಿ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ. ಮೃತರನ್ನು ದೀಪಾ (31) ಮತ್ತು ಈಕೆಯ ಪುತ್ರಿ ರೀಯಾ(3) ಎಂದು ಗುರುತಿಸಲಾಗಿದೆ. ಚಿಕಿತ್ಸೆ ಪಡೆದರೂ ಅನಾರೋಗ್ಯ ಕಮ್ಮಿಯಾಗಿರಲಿಲ್ಲ. ಹೀಗಾಗಿ ಜಿಗುಪ್ಸೆಗೊಳಗಾಗಿದ್ದ ದೀಪ ರಾತ್ರಿ ಮಲಗಿದ್ದ ವೇಳೆ ಮಗುವಿನ ಕುತ್ತಿಗೆಗೆ ವೇಲ್ ಬಿಗಿದು ನೇಣು ಹಾಕಿದ್ದಾರೆ. ಬಳಿಕ ತಾನು ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬ್ರಹ್ಮವರ ಮೂಲದ ದೀಪ ಹಾಗೂ ಅವರು ಸಾಫ್ಟ್ ವೇರ್ ಎಂಜಿನಿಯರ್ ಆಗಿರೋ ಆದರ್ಶ್ ಅವರನ್ನು 2017 ರಲ್ಲಿ ವರಿಸಿದ್ದರು. ಮದ್ವೆಯಾದಗಿನಿಂದಲೂ ಮಂತ್ರಿ ಅಪಾಟ್ರ್ಮೆಂಟ್ ನಲ್ಲಿ ದಂಪತಿ ವಾಸವಾಗಿದ್ದಾರೆ. ಇದನ್ನೂ ಓದಿ: ಸುಳ್ಳಾದ ಆತ್ಮಹತ್ಯೆ ನಾಟಕ – ಪತಿಗೆ ಮೂಹೂರ್ತ ಇಟ್ಟಿದ್ದ ಪತ್ನಿ, ಪ್ರಿಯಕರ ಅರೆಸ್ಟ್

ಮಗುವನ್ನು ಕೊಂದು ದೀಪ ಡೆತ್ ನೋಟ್ ಬರೆದಿಟ್ಟಿದ್ದಾರೆ. ಅದರಲ್ಲಿ “Nobody is responsible for it i just felt life is full of shits i am sorry mom and divya Love you shona” ಎಂದು ಉಲ್ಲೇಖಿಸಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *