ರೇಣುಕಾಚಾರ್ಯ ಸೋದರನ ಪುತ್ರ ನಾಪತ್ತೆ ಪ್ರಕರಣ- ಕಾರಿನಲ್ಲಿ ಹೋಗ್ತಿರೋ ಸಿಸಿಟಿವಿ ದೃಶ್ಯ ಲಭ್ಯ

Public TV
1 Min Read

ದಾವಣಗೆರೆ: ಶಾಸಕ ಎಂ.ಪಿ ರೇಣುಕಾಚಾರ್ಯ (M.P Renukacharya) ಸಹೋದರನ ಪುತ್ರ ಕಳೆದ 3 ದಿನಗಳಿಂದ ನಾಪತ್ತೆಯಾಗಿರುವುದು ಭಾರೀ ಅನುಮಾನ ಹುಟ್ಟಿಸಿದೆ.

ಚಂದ್ರಶೇಖರ್ (Chandrashekhar) ಕಾರು ಭಾನುವಾರ ಶಿವಮೊಗ್ಗ (Shivamogga) ಮೂಲಕ ಹೊನ್ನಾಳಿ ಕಡೆ ಬಂದಿತ್ತು. ಆದರೆ ಕಾರು ಹೊನ್ನಾಳಿ ತಲುಪಿಲ್ಲ ಅಂತ ಮೂಲಗಳು ತಿಳಿಸಿವೆ. ಶಿವಮೊಗ್ಗ-ನ್ಯಾಮತಿ ಮಧ್ಯೆ ಕಾರು ಹೋಗೋ ದೃಶ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಶಿವಮೊಗ್ಗದಿಂದ ಬಂದ ಕಾರು ಸುರಹೊನ್ನೆ ಬಳಿ ರಾತ್ರಿ ಪಾಸ್ ಆಗಿದೆ. ಆದರೆ ಸುರಹೊನ್ನೆಯಿಂದ ಹೊನ್ನಾಳಿಗೆ ಬಂದ ಬಗ್ಗೆ ಸುಳಿವಿಲ್ಲ. ಸುರಹೊನ್ನೆಯಿಂದ ಹೊನ್ನಾಳಿಗೆ ಬಂದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇದನ್ನೂ ಓದಿ: ಎಂ.ಪಿ ರೇಣುಕಾಚಾರ್ಯ ಸಹೋದರನ ಪುತ್ರ ನಾಪತ್ತೆ- ಕುಟುಂಬಸ್ಥರಲ್ಲಿ ಆತಂಕ

ಭಾನುವಾರ ಇಡೀ ದಿನ ಹೊನ್ನಾಳಿಯ ಹಲವು ಹಳ್ಳಿಗಳಲ್ಲಿ ಸಂಚಾರ ಮಾಡಿದ್ದಾರೆ. ಸಂಜೆ 5 ಗಂಟೆ ಸುಮಾರಿಗೆ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿ ಸಂಜೆ 6 ಗಂಟೆಗೆ ಸ್ನೇಹಿತರನ್ನು ಭೇಟಿಯಾಗಿದ್ದಾರೆ. ಸಂಜೆ 6-30ಕ್ಕೆ ಶಿವಮೊಗ್ಗದಿಂದ ಸ್ನೇಹಿತ ಕಿರಣ್ ಜೊತೆ ಗೌರಿಗದ್ದೆಗೆ ಭೇಟಿ ನೀಡಿದ್ದಾರೆ.

ರಾತ್ರಿ 10 ಗಂಟೆವರೆಗೂ ವಿನಯ್ ಗುರೂಜಿ (Vinay Guruji) ಆಶ್ರಮದಲ್ಲಿದ್ದ ಚಂದ್ರಶೇಖರ್, 11 ಗಂಟೆಗೆ ಶಿವಮೊಗ್ಗಕ್ಕೆ ಸ್ನೇಹಿತ ಕಿರಣ್ ಜೊತೆ ವಾಪಸ್ಸಾಗಿದ್ದಾರೆ. ರಾತ್ರಿ 11-56ಕ್ಕೆ ಸ್ನೇಹಿತ ಕಿರಣ್‍ನನ್ನು ಶಿವಮೊಗ್ಗದ ಮನೆಗೆ ಬಿಟ್ಟು ಹೊನ್ನಾಳಿಗೆ ಪ್ರಯಾಣ ಮಾಡಿದ್ದಾರೆ. ಕೆಎ-17 ಎಂಎ 2534 ನಂಬರ್‍ನ ಹೊಂಡಾಯ್ ಕ್ರೇಟಾ ಕಾರ್ ನಲ್ಲಿ ಹೊನ್ನಾಳಿಗೆ ವಾಪಸ್ ಆಗಿದ್ದಾರೆ. ಸೋಮವಾರ ಬೆಳಗ್ಗೆ 6-48ಕ್ಕೆ ಹೊನ್ನಾಳಿಯಲ್ಲಿ ಚಂದ್ರಶೇಖರ್ ಮೊಬೈಲ್ ಲೊಕೇಷನ್ ತೋರಿಸುತ್ತದೆ. ಅಲ್ಲಿಂದ ಮತ್ತೆ ಎಲ್ಲಿಗೆ ಹೋಗಿದ್ದಾರೆ ಎಂಬುದು ಪತ್ತೆಯಾಗಿಲ್ಲ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *