ಭಾವುಕರಾದ ಸಚಿವ ಮುರುಗೇಶ್ ನಿರಾಣಿ

Public TV
2 Min Read

ದಾವಣಗೆರೆ: ರಾಜ್ಯದಲ್ಲಿ ಮೀಸಲಾತಿ ಕದನ ಜೋರಾಗಿಯೇ ನಡೆಯುತ್ತಿದ್ದು, ಈ ಮಧ್ಯೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಹಾಗೂ ಸಚಿವ ಮುರುಗೇಶ್ ನಿರಾಣಿ (Murugesh Nirani) ನಡುವೆ ವಾಗ್ವಾದಗಳು ಕೂಡ ನಡೆಯುತ್ತಿವೆ. ಇದೀಗ ಸಚಿವರು ಅವರು ಮಾಧ್ಯಮಗಳ ಮುಂದೆ ಭಾವುರಾದ ಪ್ರಸಂಗ ನಡೆದಿದೆ.

ದಾವಣಗೆರೆ (Davanagere) ಜಿಎಂಐಟಿ ಹೆಲಿಪ್ಯಾಡ್ ನಲ್ಲಿ ಮಾಧ್ಯಮಗಳ ಮುಂದೆ ಮಾತನಾಡುತ್ತಾ ಸಚಿವರು ಭಾವುಕರಾದರು. ಬಿಜೆಪಿ (BJP) ಸಂಸ್ಕೃತಿ ಹೊಂದಿರೋ ಪಕ್ಷ, ನಮ್ಮ ಸಮುದಾಯದವೂ ಸಂಸ್ಕೃತಿ ಹೊಂದಿದೆ. ಯತ್ನಾಳ್ ಅಸಂವಿಧಾನಿಕ ಮಾತುಗಳನ್ನು ಆಡುತ್ತಾರೆ. ಜಯಮೃತ್ಯುಂಜಯ ಸ್ವಾಮೀಜಿ (Basava Jaya Mruthyunjaya Swamiji) ಮೀಸಲಾತಿ ವಿಚಾರದಲ್ಲಿ ರಾಜಕೀಯ ಮಾಡ್ತಿದ್ದಾರೆ ಎಂದು ಆರೋಪಿಸಿದರು.  ಇದನ್ನೂ ಓದಿ: ನಿರಾಣಿ ಆ ಹುಲಿ ಜೊತೆ ಮಾತಾಡಲಿ- ಯತ್ನಾಳ್‍ರನ್ನ ಹುಲಿಗೆ ಹೋಲಿಕೆ ಮಾಡಿದ ಸ್ವಾಮೀಜಿ

ಯಡಿಯೂರಪ್ಪ (BS Yediyurappa) ಸರ್ಕಾರ ಇದ್ದಾಗ 3ಬಿ ಗೆ ಸೇರಿಸುವ ಕೆಲಸ ಮಾಡಿದ್ದರು. 2013-18 ರ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ (Congress Government) ಅಧಿಕಾರದಲ್ಲಿತ್ತು. ಆಗ ಕಾಂತರಾಜ್ ವರದಿಯನ್ನು ಸರ್ಕಾರ ನಿರಾಕರಿಸಿತ್ತು. ಕಾಂಗ್ರೆಸ್ ಸರ್ಕಾರದಲ್ಲಿ ಸುಮ್ಮನಿದ್ದ ಸ್ವಾಮೀಜಿ ಈಗ ಹೋರಾಟ ಮಾಡ್ತಿದ್ದಾರೆ. ಅವರ ಅವಧಿಯಲ್ಲಿ ಮಾತನಾಡದವರು ಈಗ ಮಾತನಾಡುತ್ತಿದ್ದಾರೆ ಎಂದರು.

ಬೊಮ್ಮಾಯಿ, ಯಡಿಯೂರಪ್ಪ ನಮ್ಮ ಸಮುದಾಯದಕ್ಕೆ ಮೀಸಲಾತಿ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಯತ್ನಾಳ್ ಜೆಡಿಎಸ್ ಗೆ ಹೋಗಿ ಟಿಪ್ಪುಗಳನ್ನು ಹೊಗಳಿದ್ದು, ಹಿಂದುಗಳನ್ನು ಬೈದಿದ್ದು ಇನ್ನೂ ಜನ ಮರೆತಿಲ್ಲ. ಡೋಂಗಿ ರಾಜಕಾರಣ ಮಾಡಿರೋದು ಜನರ ಮನಸ್ಸಲ್ಲಿದೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿ ಬಗ್ಗೆ ಗೌರವ ಇಲ್ಲ ಅಂದ್ರೆ ಈ ಪಕ್ಷದಲ್ಲಿ ಯಾಕೆ ಇರ್ತೀಯಾ: ಯತ್ನಾಳ್‍ ವಿರುದ್ಧ ನಿರಾಣಿ ಏಕವಚನದಲ್ಲೇ ಗುಡುಗು

ಸಿದ್ದೇಶ್ವರ ಸ್ವಾಮೀಜಿ (Siddeshwara Swamiji) ಅವರ ಸನ್ನಿಧಿಯಲ್ಲಿ ಬೆಳೆದವರು ನಾವು. ಅವರನ್ನು 0.5 ರಷ್ಟು ನಾವು ಅನುಕರಣೆ ಮಾಡಿದ್ರೆ ಸಾಕು. ನಾನು ಘಟಪ್ರಭಾ, ಮಲಪ್ರಭಾ ನೀರು ಕುಡಿದವನು. ದೀಪ ಆರುವಾಗ ಗಾಳಿ ಜೋರಾಗಿ ಇರುತ್ತಂತೆ. ಯತ್ನಾಳ್ ಪರಿಸ್ಥಿತಿ ಕೂಡ ಹಾಗೆ ಆಗಿದೆ. ಯತ್ನಾಳ್ ಗೆ ಪಕ್ಷದಲ್ಲಿ ಇರೋದು ಇಷ್ಟ ಇಲ್ಲದೇ ಇದ್ದರೆ ಪಕ್ಷ ಬಿಟ್ಟು ಹೋಗ್ಲಿ. ಯತ್ನಾಳ್ ಯಾರನ್ನು ಬಿಟ್ಟಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ವೈಯಕ್ತಿಕ ನಿಂದನೆ ಮಾಡೋದು ರಾಜ್ಯದ ಸಂಸ್ಕೃತಿ ಅಲ್ಲ – ಯತ್ನಾಳ್ ಮಾತು ಅವರ ಸಂಸ್ಕೃತಿಯನ್ನು ತೋರಿಸುತ್ತದೆ: ಸಿಎಂ ವಾರ್ನಿಂಗ್

ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಬೊಮ್ಮಾಯಿ, ಶೆಟ್ಟರ್, ಸೋಮಣ್ಣ ಹೀಗೆ ಎಲ್ಲರ ಮೇಲೂ ಮಾತಾಡಿದ್ದಾರೆ. ನ್ಯಾಯಾಲಯಕ್ಕೆ ಹೋಗಿ ಕೈಕಾಲು ಹಿಡಿದು ಬಂದಿದ್ದಾರೆ. ಕಾಂಗ್ರೆಸ್ ನಲ್ಲೇ ಲಿಂಗಾಯತರಿಗೆ ಮೀಸಲಾತಿ ಕೊಡಲು ಬಿಡೋದಿಲ್ಲ ಅಂತಿದ್ದಾರೆ. ಜಯಮೃತ್ಯುಂಜಯ ಸ್ವಾಮೀಜಿ, ಯತ್ನಾಳ್ ಅವರ ವಿರುದ್ಧ ಹೋರಾಟ ಮಾಡೋದು ಬಿಟ್ಟು ನಮ್ಮ ವಿರುದ್ಧ ಮಾಡ್ತಿದ್ದಾರೆ ಎಂದು ಹೇಳುತ್ತಾ ನಿರಾಣಿ ಕಣ್ಣೀರಾಕಿದರು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *