ಕಾಲು ಜಾರಿ ಉಕ್ಕಿ ಹರಿಯುತ್ತಿರೋ ನದಿಗೆ ಬಿದ್ರೂ ಈಜಿ ದಡ ಸೇರಿದ ಗಟ್ಟಿಗ!

Public TV
1 Min Read

ಬಳ್ಳಾರಿ: ಕಾಲು ಜಾರಿ ನದಿಗೆ ಬಿದ್ದ ವ್ಯಕ್ತಿಯೊಬ್ಬ ಅದೃಷ್ಟವಶಾತ್ ಭಾರೀ ಅಪಾಯದಿಂದ ಪಾರಾದ ಘಟನೆ ನಗರದ ಸಿರಗುಪ್ಪಾ ತಾಲೂಕಿನ ರಾರಾವಿ ಬಳಿ ನಡೆದಿದೆ.

ಸಿರಗುಪ್ಪಾ ನಿವಾಸಿ ಮಲ್ಲಿಕಾರ್ಜುನ ಕಾಲು ಜಾರಿ ನದಿಗೆ ಬಿದ್ದ ವ್ಯಕ್ತಿ. ರಾಜ್ಯಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ನದಿ ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಕಾಲುವೆ ಮೇಲೆ ಹರಿಯುತ್ತಿರುವ ನದಿಯನ್ನು ದಾಟಲು ಹೋಗಿ ಮಲ್ಲಿಕಾರ್ಜುನ ಕಾಲು ಜಾರಿ ರಾರಾವಿ ಬಳಿಯ ವೇದಾವತಿ ನದಿಯಲ್ಲಿ ಬಿದ್ದಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ 124 ಮಂದಿಗೆ ಕೊರೊನಾ -159 ಮಂದಿ ಡಿಸ್ಚಾರ್ಜ್

ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ನದಿಯನ್ನು ದಾಟಲು ಮುಂದಾಗಿದ್ದರು. ಅದೇ ಸಮಯದಲ್ಲಿ ಸೇತುವೆ ಮೇಲೆ ಭಾರೀ ವಾಹನವೊಂದು ಸಾಗಿದೆ. ಹೀಗಾಗಿ ನದಿಯ ರಭಸಕ್ಕೆ ಸಿಲುಕಿ ಕಾಲು ಜಾರಿ ನದಿಗೆ ಬಿದಿದ್ದಾರೆ. ಆದರೂ ರಭಸವಾಗಿ ಹರಿಯುತ್ತಿದ್ದ ನದಿಯಲ್ಲಿ ಧೈರ್ಯದಿಂದ ಈಜಿ ದಡ ಸೇರಿದ್ದಾರೆ. ಇದೇ ವೇಳೆಯಲ್ಲಿ ಸ್ಥಳೀಯರು ಸಹಾಯ ಮಾಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಸನ್ನಿ ಲಿಯೋನ್: ಮಂಡ್ಯ ಫ್ಯಾನ್ಸ್ ಪ್ರೀತಿಗೆ ಧನ್ಯವಾದ ತಿಳಿಸಿದ ಸನ್ನಿ

Share This Article
Leave a Comment

Leave a Reply

Your email address will not be published. Required fields are marked *