ಕನ್ನಡದ ಇಬ್ಬರು ಸೂಪರ್ ಸ್ಟಾರ್ ಚಿತ್ರಕ್ಕೆ `ಮದಗಜ’ ಮಹೇಶ್ ಆ್ಯಕ್ಷನ್ ಕಟ್ :ನಂತರ ಬಾಲಿವುಡ್ ಸಿನಿಮಾ

Public TV
2 Min Read

ಣ್ಣದ ಲೋಕನೇ ಹಾಗೆ, ಇಂದು ಕೆಳಗಿದ್ದವರು ನಾಳೆ ಏನಾಗುತ್ತಾರೆ ಅನ್ನುವುದನ್ನು ಊಹೆ ಮಾಡುವುದು ಅಸಾಧ್ಯ. ಕಲಾವಿದರಿಗೆ, ನಿರ್ದೇಶಕರಿಗೆ, ಕಲೆಗೆ ಭಾಷೆಯ ಬೇಲಿಯಿಲ್ಲ. ಜೀರೋ ಟು ಸ್ಟಾರ್ ಆಗೋದು ಅಷ್ಟು ಸುಲಭದ ಮಾತಲ್ಲ. ಪ್ರತಿಭೆ ಒಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಅನ್ನುವುದಕ್ಕೆ ಕನ್ನಡದ ಪ್ರತಿಭಾನ್ವಿತ ನಿರ್ದೇಶಕ ಮಹೇಶ್ ಕುಮಾರ್ ಅವರು ತಾಜಾ ಉದಾಹರಣೆ.

`ಅಯೋಗ್ಯ’ ಚಿತ್ರದ ಮೂಲಕ ಚಂದನವನಕ್ಕೆ ಪರಿಚಿತರಾದ ನಿರ್ದೇಶಕ ಮಹೇಶ್ ಕುಮಾರ್, ಮೊದಲ ಚಿತ್ರನೇ ಸೂಪರ್ ಡೂಪರ್ ಹಿಟ್, ಬಾಕ್ಸ್ ಆಫೀಸ್ ಲೂಟಿ ಮಾಡೋದರ ಜೊತೆಗೆ ಮೊದಲ ಚಿತ್ರದ ಹಾಡು, ಕಂಟೆAಟ್‌ನಿAದ ಸಿನಿಪ್ರಿಯರಿಗೆ ಸಿಕ್ಕಾಪಟ್ಟೆ ಮೋಡಿ ಮಾಡಿತ್ತು.ನಂತರ ಶ್ರೀಮುರುಳಿ ನಟನೆಯ `ಮದಗಜ’ ಚಿತ್ರಕ್ಕೆ ನಿರ್ದೇಶನ ಮಾಡುವುದರ ಮೂಲಕ ಗಾಂಧಿನಗರದಲ್ಲಿ ತಾನೆಂತಹ ನಿರ್ದೇಶಕ ಅನ್ನುವುದನ್ನು ಪ್ರೂವ್ ಮಾಡಿದ್ರು. ಈಗ ಕನ್ನಡ ಇಂಡಸ್ಟಿçಯಲ್ಲಿ ಮಾತ್ರವಲ್ಲ ಪಕ್ಕದ ಇಂಡಸ್ಟಿçಯಲ್ಲೂ ಇವರದ್ದೇ ಸುದ್ದಿ. ಫಿಲಂ ನಗರಿಯಲ್ಲಿ ಸೆನ್ಸೆಷನಲ್ ಡೈರೆಕ್ಟರ್ ಆಗಿ ಮಿಂಚುತ್ತಿದ್ದಾರೆ.`ಅಯೋಗ್ಯ’ ಮತ್ತು `ಮದಗಜ’ ಸಿನಿಮಾ ನೋಡಿ ಖುಷಿಪಟ್ಟಿದ್ದ ತಮ್ಮ ಅಭಿಮಾನಿಗಳಿಗೆ ನಿರ್ದೇಶಕ ಮಹೇಶ್ ಕುಮಾರ್ ಡಬಲ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಒಂದ್ ಕಡೆ ಕನ್ನಡದ ಮಲ್ಟಿ ಸ್ಟಾರ್‌ಗೆ ಆಕ್ಷನ್ ಕಟ್ ಹೇಳುವುದಕ್ಕೆ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಸುತ್ತಿದ್ದರೆ, ಇನ್ನೊಂದ್ ಕಡೆ ಬಾಲಿವುಡ್ ನಿರ್ಮಾಪಕರಿಂದ ಮಹೇಶ್‌ಗೆ ಬುಲಾವ್ ಬಂದಿದೆ.

`ಮದಗಜ’ ಚಿತ್ರವಾದ ಮೇಲೆ ಡೈರೆಕ್ಟರ್ ಮಹೇಶ್ ಅವರ ನಸೀಬ್‌ಯೇ ಚೇಂಚ್ ಆಗಿದೆ. ಪ್ರತಿಷ್ಠಿತ ಪ್ರೊಡಕ್ಷನ್ ಅಡಿಯಲ್ಲಿ ಮೂಡಿ ಬರಲಿರೋ ಮಲ್ಟಿಸ್ಟಾರ್‌ಗಳಿಗೆ ನಿರ್ದೇಶಕ ಮಹೇಶ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮಹೇಶ್ ಮಾಡಿರೋ ಡಿಫರೆಂಟ್ ಕಥೆಗೆ ಕನ್ನಡದ ಇಬ್ಬರು ಸೂಪರ್ ಸ್ಟಾರ್‌ಗಳು ಜೀವ ತುಂಬುತ್ತಿದ್ದಾರೆ. ಇದೇ ಮೇ ೩೦ಕ್ಕೆ ಅಧಿಕೃತವಾಗಿ ಪೋಸ್ಟರ್ ರಿವೀಲ್ ಮಾಡುವುದರ ಮೂಲಕ ಆ ಸೂಪರ್ ಸ್ಟಾರ್‌ಗಳು ಯಾರು ಅನ್ನುವುದಕ್ಕೆ ಉತ್ತರ ಸಿಗಲಿದೆ.ಅದಕ್ಕಾಗಿ ತೆರೆಮರೆಯಲ್ಲಿ ಭರ್ಜರಿ ಸಿದ್ದತೆ ನಡೆಯುತ್ತಿದೆ. ಇದನ್ನು ಓದಿ: ಪಾವನಾ ನಾಯಕಿಯಾಗಿ ನಟಿಸಿದ ‘ಇನ್’ ಚಿತ್ರದ ಟೀಸರ್ ರಿಲೀಸ್ ಮಾಡಿದ ಕಿಚ್ಚ

ಮಲ್ಟಿ ಸ್ಟಾರ್‌ಗಳಿಗೆ ಆ್ಯಕ್ಷನ್ ಕಟ್ ಹೇಳ್ತಿರೋ ಬೆನ್ನಲ್ಲೆ ಮತ್ತೊಂದು ಬಿಗ್ ನ್ಯೂಸ್ ಕೊಟ್ಟಿದ್ದಾರೆ.ನಿರ್ದೇಶಕ ಮಹೇಶ್ ಬಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಇವರು ನಿರ್ದೇಶಿಸಿರೋ ಕನ್ನಡ ಚಿತ್ರಗಳನ್ನ ನೋಡಿಯೇ ಜೀಯೋ ಸಂಸ್ಥೆ ಚಿತ್ರ ನಿರ್ಮಾಣಕ್ಕೆ ಮುಂದಾಗಿದೆ..ಈಗಾಗಲೇ ಒಂದೊಳ್ಳೆ ಕಥೆಯನ್ನ ಸಿದ್ದಪಡಿಸಿಸೋ ಮಹೇಶ್, ಬಾಲಿವುಡ್ ಬಿಗ್‌ಸ್ಟಾರ್‌ಗೆ ಆ್ಯಕ್ಷನ್ ಕಟ್ ಹೇಳೋದಕ್ಕೆ ಸಜ್ಜಾಗಿದ್ದಾರೆ. ಬಿಗ್ ಬಜೆಟ್, ಬಿಗ್ ಸ್ಟಾರ್‌ಗಳಿರೋ ಈ ಚಿತ್ರ ಆಗಸ್ಟ್ನಿಂದ ಶೂಟಿಂಗ್ ಶುರುವಾಗಲಿದೆ..ಕನ್ನಡ ನಿರ್ದೇಶಕರೊಬ್ಬರಿಗೆ ಬಿಟೌನ್‌ನಲ್ಲಿ ಡಿಮ್ಯಾಂಡ್ ಸೃಷ್ಠಿಯಾಗಿರೋದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

 

Share This Article
Leave a Comment

Leave a Reply

Your email address will not be published. Required fields are marked *