ಟಿಕೆಟ್ ಘೋಷಣೆ ವೇಳೆ ಸಮಸ್ಯೆ, ಸವಾಲು ನಿರ್ವಹಣೆಗೆ ಬಿಜೆಪಿ ಹೈಕಮಾಂಡ್ ಪ್ರೀಪ್ಲಾನ್

Public TV
1 Min Read

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೂ (Karnataka Election 2023) ಮುನ್ನ ಪಕ್ಷದ ಒಳಗಿನ ಓರೆಕೋರೆಗಳನ್ನು ಸರಿಪಡಿಸಲು ಬಿಜೆಪಿ ಹೈಕಮಾಂಡ್ (BJP High Command) ಮುಂದಾಗಿದೆ. ವಿಧಾನಸಭೆ ಚುನಾವಣೆಗೆ ಬಿಜೆಪಿ ಎಲ್ಲ ರೀತಿಯಿಂದಲೂ ಎಚ್ಚರಿಕೆ ನಡೆ ಇಡ್ತಿದೆ. ಈ ಹಿನ್ನೆಲೆಯಲ್ಲಿ 224 ವಿಧಾನಸಭೆ ಕ್ಷೇತ್ರಗಳಲ್ಲಿ ತಲೆದೋರಿರುವ ಆಂತರಿಕ ಭಿನ್ನಮತ ತಣಿಸಲು ಪ್ಲಾನ್ ರೂಪಿಸುತ್ತಿದೆ.

ಮುಖ್ಯವಾಗಿ ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಎದುರಾಗುವ ಸವಾಲು, ಸಮಸ್ಯೆಗಳನ್ನು ಟ್ಯಾಕಲ್ ಮಾಡಲು ಈಗಿಂದಲೇ ಬಿಜೆಪಿಯಲ್ಲಿ ತಯಾರಿ ನಡೆಯುತ್ತಿದೆ. ಟಿಕೆಟ್ ಹಂಚಿಕೆಗೂ ಮುನ್ನ ಮುಂಜಾಗ್ರತಾ ಕ್ರಮಕ್ಕೆ ಬಿಜೆಪಿ ಮೊರೆ ಹೋಗಿದೆ. ಇದನ್ನೂ ಓದಿ: ಯಡಿಯೂರಪ್ಪ ಬಗ್ಗೆ ನನ್ನನ್ನು ಇನ್ಮೇಲೆ ಏನು ಕೇಳಬೇಡಿ: ಯತ್ನಾಳ್‌

ಕ್ಷೇತ್ರವಾರು ಅಸಮಾಧಾನ, ಸಂಘರ್ಷ ಕೊನೆಗಾಣಿಸಲು ಹೈಕಮಾಂಡ್ ತಂತ್ರ ರೂಪಿಸಲು ನಿರ್ಧರಿಸಿದೆ. 224 ಕ್ಷೇತ್ರಗಳಲ್ಲೂ ಆಂತರಿಕ ಭಿನ್ನಮತಕ್ಕೆ ಈಗಿಂದಲೇ ಟ್ರೀಟ್ಮೆಂಟ್ ಕೊಡಲು ಮುಂದಾಗಿದೆ. ಈ ನಿಟ್ಟಿನಲ್ಲಿ 224 ಕ್ಷೇತ್ರಗಳಿಗೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಘಟಕದಿಂದ ಹೈಕಮಾಂಡ್ ಕಂಪ್ಲೀಟ್ ರಿಪೋರ್ಟ್ ಕೇಳಿದೆ.

ಕಂಪ್ಲೀಟ್ ವರದಿ ಪಡೆಯುತ್ತಿರುವ ಹಿಂದಿನ ಉದ್ದೇಶವೇ ಟಿಕೆಟ್ ಹಂಚಿಕೆ ಸಂದರ್ಭ ನಿರ್ವಹಣೆ ಮಾಡುವ ಸಲುವಾಗಿ ಎನ್ನಲಾಗಿದೆ. ನಾಳೆ ಬರುತ್ತಿರುವ ಅಮಿತ್ ಶಾ (Amit Shah) ಅವರೇ ಈ ಸಮಸ್ಯೆಗೆ ಚಾಣಕ್ಯ ಪರಿಹಾರ ಹುಡುಕಲಿದ್ದಾರೆ. ಮೊದಲೇ ಪ್ರೀಪ್ಲಾನ್ ಮಾಡಿಕೊಂಡು ಕೊನೆಯ ಕ್ಷಣದಲ್ಲಿ ವೃಥಾ ಟೆನ್ಶನ್ ಆಗದಿರಲು ಈ ಮೂಲಕ ತಂತ್ರ ಹೆಣೆದಿದ್ದಾರಂತೆ. ಇದನ್ನೂ ಓದಿ: ಸಮರ್ಥ ಅಭ್ಯರ್ಥಿಗಳಿದ್ದಾಗ ಕುಟುಂಬದಿಂದ ಯಾರನ್ನೂ ಸ್ಪರ್ಧೆಗೆ ಇಳಿಸಲ್ಲ -HDK

ರಾಜ್ಯ ಘಟಕ ಕಳಿಸುವ ರಿಪೋರ್ಟ್ ಆಧರಿಸಿ ಕ್ಷೇತ್ರವಾರು ಸಮಸ್ಯೆ ಬಗೆಹರಿಸಲು ಟೀಮ್‌ಗಳ ರಚನೆಗೂ ಪ್ಲಾನ್ ಮಾಡಲಾಗುತ್ತೆ ಎನ್ನಲಾಗಿದೆ. ಒಟ್ಟಿನಲ್ಲಿ ಟಿಕೆಟ್ ಘೋಷಣೆಗೂ ಮುನ್ನ ಹೈಕಮಾಂಡ್ ಅಲರ್ಟ್ ಸ್ಟೆಪ್ ಇಟ್ಟಿದೆ. ಟಿಕೆಟ್ ಹಂಚಿಕೆ ವೇಳೆ ಬಂಡಾಯ, ಭಿನ್ನಮತ ಕಾಣಿಸದಂತೆ ತಡೆಯುವ ವರಿಷ್ಠರ ತಂತ್ರ ಸಕ್ಸಸ್ ಆಗುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *