ಕಲ್ಯಾಣ ಕರ್ನಾಟಕ ಉತ್ಸವ – ಸಿಎಂ ಬಿಎಸ್‍ವೈರಿಂದ ಧ್ವಜಾರೋಹಣ

Public TV
1 Min Read

ಬೆಂಗಳೂರು: ಹೈದರಾಬಾದ್ ಕರ್ನಾಟಕ ವಿಮೋಚನಾ ದಿನದ ಹೆಸರು ಇನ್ನು ಮುಂದೇ ಕಲ್ಯಾಣ ಕರ್ನಾಟಕ ದಿನವಾಗಿ ಮಾರ್ಪಡಲಿದೆ. ಕಲ್ಯಾಣ ಕರ್ನಾಟಕ ದಿನಾಚರಣೆ ಅಂಗವಾಗಿ ಕಲಬುರಗಿಯಲ್ಲಿ ಮಂಗಳವಾರ ಸಿಎಂ ಯಡಿಯೂರಪ್ಪ ಧ್ವಜಾರೋಹಣ ಮಾಡಲಿದ್ದಾರೆ.

ಮಂಗಳವಾರ ಬೆಳಗ್ಗೆ 7.30ಕ್ಕೆ ಎಚ್‍ಎಎಲ್‍ನಿಂದ ಕಲಬುರಗಿಗೆ ಹೊರಡಲಿರುವ ಸಿಎಂ ಬಿಎಸ್‍ವೈ ಅವರು, ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಜೆ 6.30ರ ವೇಳೆಗೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಕಲಬುರಗಿಯಲ್ಲಿ ಧ್ವಜಾರೋಹಣ ಮಾಡಿದ ಬಳಿಕ ಕಲ್ಯಾಣ ಕರ್ನಾಟಕ ಭಾಗದ ಮಠಾಧೀಶರು ಹಮ್ಮಿಕೊಂಡಿರುವ ಅಭಿನಂದನಾ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಲಿದ್ದಾರೆ. ಇದರ ಜೊತೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಇದನ್ನು ಓದಿ: ಜಿಲ್ಲಾ ಉಸ್ತುವಾರಿ ಸಚಿವರ ನೇಮಕ – ಬೆಂಗಳೂರನ್ನು ತನ್ನ ಬಳಿಯೇ ಇಟ್ಟುಕೊಂಡ ಸಿಎಂ

ಈ ಕುರಿತು ಗೃಹ ಕಚೇರಿ ಕೃಷ್ಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಎಸ್‍ವೈ ಅವರು, ನಾಳೆ ಕೆಲ ಸಚಿವರು, ನಾವು ಕಲಬುರಗಿಗೆ ಭೇಟಿ ನೀಡುತ್ತೇವೆ. ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಘೋಷಣೆ ಮಾಡಿದ್ದು ಎಲ್ಲರಿಗೂ ಸಂತೋಷ ತಂದಿದೆ. ನೂರಾರು ಸ್ವಾಮೀಜಿಗಳು ಸೇರಿ ದೊಡ್ಡ ಕಾರ್ಯಕ್ರಮ ಮಾಡುತ್ತಾರೆ ಎಂದರು. ಈ ವೇಳೆ ಹಿಂದಿ ಭಾಷಾ ಹೇರಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡದೆ ತೆರಳಿದರು. ಇದನ್ನು ಓದಿ: ಹಿಂದಿ ಬಗ್ಗೆ ಅಭಿಮಾನ ಮೆರೆದಿದ್ದ ಅಮಿತ್ ಶಾಗೆ ಬಿಎಸ್‍ವೈ ಟಾಂಗ್

ಕಲಬುರಗಿಯಲ್ಲಿ ಸಿಎಂ ಬಿಎಸ್‍ವೈ ಧ್ವಜಾರೋಹಣ ಮಾಡಿದರೆ, ರಾಯಚೂರಿನಲ್ಲಿ ಡಿಸಿಎಂ ಗೋವಿಂದ ಕಾರಜೋಳ, ಬಳ್ಳಾರಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಕೊಪ್ಪಳದಲ್ಲಿ ಸಚಿವ ಸಿ.ಸಿ ಪಾಟೀಲ್, ಬೀದರ್ ನಲ್ಲಿ ಪ್ರಭು ಚೌಹಾಣ್ ಹಾಗೂ ಯಾದಗಿರಿಯಲ್ಲಿ ಶ್ರೀರಾಮುಲು ಅವರು ಧ್ವಜಾರೋಹಣ ಮಾಡಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *