ಕಾಂಗ್ರೆಸ್ ಕೃತ್ಯಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ: ಸೂಲಿಬೆಲೆ

Public TV
1 Min Read

ಧಾರವಾಡ: ಕಾಂಗ್ರೆಸ್ ಕಾರ್ಯಕರ್ತರು ವೀರ ಸಾವರ್ಕರ್ ಅವರ ಭಾವಚಿತ್ರ ಸುಟ್ಟ ಪ್ರಕರಣಕ್ಕೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ. ಕಾಂಗ್ರೆಸ್‍ನವರ ಈ ವರ್ತನೆ ಹೊಸದೇನಲ್ಲ ಎಂದು ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಾವರ್ಕರ್ ಮತ್ತು ರಾಷ್ಟ್ರಭಕ್ತರನ್ನು ಅವಮಾನಿಸುವ ಪ್ರಕ್ರಿಯೆ ಕಾಂಗ್ರೆಸ್‍ನಲ್ಲಿ ಯಾವಾಗಲೂ ಇದೆ. ದುರದೃಷ್ಟ ಎಂದರೆ ನಾವು ಧಾರವಾಡಕ್ಕೆ ಬಂದಾಗಲೇ ಹೀಗೆ ಆಗಿದೆ. ಧಾರವಾಡ ತಿಲಕರು ಬಂದು ಹೋದ ಜಾಗ. ಆಲೂರು ವೆಂಕಟರಾಯರು ತಿಲಕ್ ಅವರ ಭಾಷಣವನ್ನು ಕನ್ನಡಕ್ಕೆ ಅನುವಾದಿಸಿದ ಜಾಗ. ಕರ್ನಾಟಕದ ಏಕೀಕರಣ ಚಿಂತನೆಯ ಬೀಜ ಹಾಕಿದ ಜಾಗ. ಈ ಇತಿಹಾಸಕ್ಕೆ ದೊಡ್ಡ ಗೌರವ ಕೊಟ್ಟು ಧಾರವಾಡಕ್ಕೆ ಬಂದಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಮುಂಬೈ ಪೊಲೀಸರಿಗೆ ಮತ್ತೆ ದಾಳಿ ಬೆದರಿಕೆ – ಆತಂಕ ಸೃಷ್ಟಿಸಿದ ಪಾಕ್ ಸಂದೇಶ

ಕಾಂಗ್ರೆಸ್‍ನವರು ಇಂತಹ ಇತಿಹಾಸವನ್ನು ತುಚ್ಛವಾಗಿ ತೋರಿಸುತ್ತಿದ್ದಾರೆ. ಇತಿಹಾಸ ಪುರುಷರನ್ನು ಅವಮಾನಿಸುತ್ತಿದ್ದಾರೆ. ಇದು ಖಂಡನೀಯ. ಇದು ಕಾಂಗ್ರೆಸ್‍ಗೆ ಒಳ್ಳೆಯದಲ್ಲ. ನಾವು ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿದ್ದೇವೆ. ಇಂತಹ ಸಮಯದಲ್ಲಿ ಸಾವರ್ಕರ್‌ಗೆ ಅವಮಾನ ಮಾಡುತ್ತಿದ್ದಾರೆ. ಕಾಂಗ್ರೆಸ್‍ನ ಹಿರಿಯರು ತಿದ್ದಿ ಬುದ್ದಿ ಹೇಳಬೇಕಾದ ಅಗತ್ಯವಿದೆ. ಸಿದ್ದರಾಮಯ್ಯನವರ ಮೇಲೆ ಮೊಟ್ಟೆ ಎಸೆದಿದ್ದನ್ನು ನಾವೂ ಸಮರ್ಥಿಸಿಕೊಳ್ಳುವುದಿಲ್ಲ. ಆದರೆ, ಸಾವರ್ಕರ್ ಅವರ ಭಾವಚಿತ್ರದ ಮೇಲೆ ಮೊಟ್ಟೆ ಒಡೆದಾಗ ಸಿದ್ದರಾಮಯ್ಯ ಮೌನವಾಗಿದ್ದಾರೆ. ಇದು ಬಹಳ ದುರದೃಷ್ಟಕರ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಮೊಟ್ಟೆ ಎಸೆದ ಪ್ರಕರಣ : ಸಂಪತ್ ಯಾರು ಅಂತ ನಮಗೆ ಗೊತ್ತಿಲ್ಲ: ಕೆ.ಜಿ. ಬೋಪಯ್ಯ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *