ವಾಗ್ಮೋರೆ ಓರ್ವ ಧರ್ಮ ರಕ್ಷಕ – ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕೊಂಡ ಶ್ರೀರಾಮ ಸೇನೆ ಸಂಚಾಲಕ

Public TV
1 Min Read

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಸಿಂಧಗಿ ಪರಶುರಾಮ್ ವಾಗ್ಮೋರೆ ಓರ್ವ ಧರ್ಮ ರಕ್ಷಕ ಅಂತಾ ವಿಜಯಪುರ ಜಿಲ್ಲಾ ಶ್ರೀರಾಮ ಸೇನೆ ಸಂಚಾಲಕ ನೀಲಕಂಠ ಕಂದಗಲ್ ಫೇಸ್‍ಬುಕ್ ಪೇಜಿನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆಯ ಆರೋಪಿಗಳನ್ನು ಹಿಡಿಯಲು ಸುಳಿವು ನೀಡಿತ್ತು ಕಾಯಿನ್ ಬಾಕ್ಸ್!

ಫೇಸ್‍ಬುಕ್ ನಲ್ಲಿ ವಾಗ್ಮೋರೆ ಓರ್ವ ಧರ್ಮ ರಕ್ಷಕ ಅಂತಾ ಬರೆದಿರು ಫೋಟೋವನ್ನು ಶ್ರೀರಾಮ ಸೇನೆಯ ಸಂಚಾಲಕ ಹಾಕಿಕೊಂಡಿದ್ದಾರೆ. ಮಾತೃ ಭೂಮಿಯ ರಕ್ಷಣೆಗಾಗಿ ಮುಡುಪಾಗಿದೆ ನನ್ನ ಪ್ರಾಣ. ಧರ್ಮಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ಧ. ದೇಶದ್ರೋಹಿಗಳಿಗೆ ಹಾಗು ನಕ್ಸಲರಿಗೆ ಬೆಂಬಲಿಸುವವರನ್ನು ಕೊಲ್ಲುವುದು ತಪ್ಪೇ ಅಂತಾ ಬರೆಯಲಾಗಿದೆ. ಇದನ್ನೂ ಓದಿ: ವಾಗ್ಮೋರೆ ಮೇಲೆ ಎಸ್‍ಐಟಿಗೆ ಅನುಮಾನ ಮೂಡಿದ್ದು ಹೇಗೆ?

ಪರಶುರಾಮ್ ಬಂಧನವಾದಾಗ ಆತನಿಗೂ ಸೇನೆಗೂ ಯಾವುದೇ ಸಂಬಂಧವಿಲ್ಲ ಎಂದು ಶ್ರೀರಾಮ ಸೇನಾ ಸಂಚಾಲಕ ಪ್ರಮೋದ ಮುತಾಲಿಕ್ ಹೇಳಿದ್ದರು. ಈ ಎಲ್ಲ ಬೆಳವಣಿಗೆ ನಡುವೆ ನೀಲಕಂಠರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಗೌರಿ ಹತ್ಯೆ ನಡೆದಿದ್ದು ಹೇಗೆ? – ‘ಆ’ ಆರು ಗುಂಡುಗಳ ಕಥೆ ಇಲ್ಲಿದೆ

 ಇದನ್ನೂ ಓದಿ: ಗೌರಿ ಹತ್ಯೆ ಕೇಸ್: ಆರೋಪಿ ವಾಗ್ಮೋರೆಯಿಂದ ಎಸ್‍ಐಟಿ ತನಿಖೆ ದಾರಿ ತಪ್ಪಿಸೋ ಯತ್ನ!

https://www.youtube.com/watch?v=AIwNtdKGVGs

https://www.youtube.com/watch?v=Muzh1bCrCp8

Share This Article
Leave a Comment

Leave a Reply

Your email address will not be published. Required fields are marked *