ಜನಾರ್ದನ ಪೂಜಾರಿಯನ್ನು ಎನ್‌ಕೌಂಟರ್‌ ಮಾಡಿ- ಕೈ ಅಲ್ಪಸಂಖ್ಯಾತ ಮುಖಂಡ ಕಿಡಿ

Public TV
3 Min Read

– ರಾಮಮಂದಿರ ಪರ ಮಾತನಾಡಿದ್ದಕ್ಕೆ ಸ್ವಪಕ್ಷಿಯನಿಂದಲೇ ಕಿಡಿ ನುಡಿ

ಮಂಗಳೂರು: ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮುಖಂಡನೊಬ್ಬ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿಯವರನ್ನು ಎನ್ ಕೌಂಟರ್ ಮಾಡಿ ಹತ್ಯೆ ಮಾಡಬೇಕೆಂದು ಹೇಳಿರುವ ಆಡಿಯೋ ಈಗ ವೈರಲ್ ಆಗಿದೆ.

ಭಾನುವಾರ ರಾಮ ಮಂದಿರ ನಿರ್ಮಾಣದ ಪರವಾಗಿ ಜನಾರ್ದನ ಪೂಜಾರಿ ಮಾಧ್ಯಮಗಳ ಜೊತೆ ಮಾತನಾಡಿದ್ದರು. ಪೂಜಾರಿ ಮಾತನ್ನು ಟೀಕಿಸಿ, ಆಡಿಯೋ ಬಿಡುಗಡೆ ಮಾಡಿರುವ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಮುಖಂಡನೊಬ್ಬ, ಪೂಜಾರಿ ಆರೆಸ್ಸೆಸ್ ಜೊತೆಗೆ ನಂಟು ಹೊಂದಿದ್ದಾರೆ. ಅವರು ಕಾಂಗ್ರೆಸಿನಲ್ಲಿ ಸೋಲಲು ಇದೇ ವರ್ತನೆ ಕಾರಣವಾಗಿದೆ. ರಾಮ ಮಂದಿರ ಪರವಾಗಿ ಮಾತನಾಡಿ ಬಿಜೆಪಿ ಮತ್ತು ಆರ್ ಎಸ್ ಎಸ್ ಜೊತೆಗಿನ ನಂಟನ್ನು ಬಹಿರಂಗಪಡಿಸಿದ್ದಾರೆ. ಇಂಥಹ ವ್ಯಕ್ತಿಯನ್ನು ದೇಶದಲ್ಲಿ ಬದುಕಲು ಬಿಡಬಾರದು. ಎನ್ ಕೌಂಟರ್ ನಡೆಸಿ ಸಾಯಿಸಬೇಕು. ಜೊತೆಗೆ ರಾಮ ಮಂದಿರದ ಪರವಾಗಿ ಮಾತನಾಡುವವರನ್ನು ಕೊಲ್ಲಬೇಕು. ಜನಾರ್ದನ ಪೂಜಾರಿಯನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಬೇಕು ಅಂತಾ ಹೇಳಿಕೊಂಡಿದ್ದಾನೆ.

ಸದ್ಯ ಈ ವ್ಯಕ್ತಿ ಯಾರೆಂದು ತಿಳಿದುಬಂದಿಲ್ಲ. ಆದ್ರೆ ಮಂಗಳೂರು ಅಥವಾ ಬಂಟ್ವಾಳ ತಾಲೂಕಿನ ಮುಸ್ಲಿಂ ವ್ಯಕ್ತಿ ಎನ್ನುವುದು ಗೊತ್ತಾಗಿದೆ. ಆಡಿಯೋ ವೈರಲ್ ಆಗಿದ್ದು ಜನಾರ್ದನ ಪೂಜಾರಿ ವಿರುದ್ಧ ಮಾತನಾಡಿದ ವ್ಯಕ್ತಿಯ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

ಆಡಿಯೋದಲ್ಲೇನಿದೆ?:
ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಸಂಸದ ಜನಾರ್ದನ ಪೂಜಾರಿಯವರು ಆರ್‍ಎಸ್‍ಎಸ್‍ನವರಿಗೆ ಹುಟ್ಟಿದ್ದು. ಆರ್‍ಎಸ್‍ಎಸ್‍ನವರೊಂದಿಗೆ ಹೊಂದಾಣಿಕೆ ಇದ್ದಾರೆಂದು ಹೇಳಿ ಕಳೆದ 10 ವರ್ಷದಿಂದ ನಾನು ಹೇಳಿಕೆ ಕೊಡುತ್ತಿರುವಾಗ ಯಾರೂ ನಂಬುತ್ತಿರಲಿಲ್ಲ. ಕಾಂಗ್ರೆಸ್ ಪಕ್ಷದವರೇ ನನಗೆ ಬೈಯುತ್ತಿದ್ದರು. ಈಗೀಗ ಎಲ್ಲರಿಗೂ ಗೊತ್ತಾಗುತ್ತಿದೆ. ಇದನ್ನೂ ಓದಿ: ಕುದ್ರೋಳಿಯಲ್ಲಿ ಮನಸ್ಸಿನ ನೋವನ್ನು ರಾಹುಲ್ ಬಳಿ ತೋಡಿಕೊಂಡ ಪೂಜಾರಿ!

ಆರ್‍ಎಸ್‍ಎಸ್‍ನೊಂದಿಗೆ ಹೊಂದಾಣಿಕೆ ಆಗಿದ್ದಾರೆ. ಇವರ ಪುಸ್ತಕ ಬಿಡುಗಡೆ ಮಾಡುವ ಸಂದರ್ಭದಲ್ಲಿ ಕರ್ನಾಟಕದ ರಾಜ್ಯದ ಮುಖ್ಯಮಂತ್ರಿ ಇರುವಾಗ ಅವರನ್ನು ಕರಿಯುತ್ತಿರಲಿಲ್ಲ. ಆರ್‍ಎಸ್‍ಎಸ್ ಪ್ರಭಾಕರ ಭಟ್ಟ, ಅದರ ಮುಖ್ಯಸ್ಥರನ್ನು ತರಿಸಿ ಉದ್ಘಾಟನೆ ಮಾಡಿಸುವಾಗಲೇ ಪ್ರತಿಯೊಬ್ಬ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಪ್ರಜೆಯೂ ಆಲೋಚನೆ ಮಾಡಬೇಕಿತ್ತು. ಇವರು ಕೋಮುವಾದಿ ಪ್ರಭಾಕರ್ ಭಟ್ಟನೊಂದಿಗೆ ಹೊಂದಾಣಿಕೆ, ಆರ್‍ಎಸ್‍ಎಸ್‍ನೊಂದಿಗೆ ಹೊಂದಾಣಿಕೆ ಆಗಿ ಇರುವಂತಹ ಜನಾರ್ದನ ಪೂಜಾರಿಯನ್ನು ಯಾವತ್ತೂ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡುವುದಿಲ್ಲ. ಅಷ್ಟರ ತನಕ ಕಾಂಗ್ರೆಸ್ ಪಕ್ಷಕ್ಕೆ ಪ್ರತಿಯೊಬ್ಬ ಮುಸ್ಲಿಮರು ಬೆಂಬಲ ಕೊಡಬಾರದು. ಇಂತಹ ನಾಲಾಯಕ್ ಬಿಜೆಪಿ, ಆರ್‍ಎಸ್‍ಎಸ್ ಒಟ್ಟಿಗೆ ಹೊಂದಾಣಿಕೆ ಇರುವ ಜನಾರ್ದನ ಪೂಜಾರಿಯನ್ನು ಯಾವ ಕಾರಣಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಇಟ್ಟಿದ್ದೀರಿ ಎಂದು ಬಹಿರಂಗವಾಗಿ ಕಾಂಗ್ರೆಸ್‍ನವರು ಹೇಳಿಕೆ ಕೊಡಬೇಕು.

ಇಂತಹ ಕೊಳಕು ಮನುಷ್ಯನಿಗೆ ದೇವರು ಇಷ್ಟು ಆಯಸ್ಸು ಕೊಟ್ಟಿದ್ದೇ ದೊಡ್ಡ ದುರಂತ. ಇಂತಹ ಮನುಷ್ಯನಿಗೆ ನಮ್ಮ ದೇಶದಲ್ಲಿ ಇರಲು ಬಿಡಬಾರದು. ಇವನನ್ನು ಎನ್‍ಕೌಂಟರ್ ಮಾಡಿ ಕೊಲ್ಲಬೇಕು. ನಮ್ಮ ಸಂವಿಧಾನ ವಿರೋಧಿ ಹೇಳಿಕೆ ಕೊಡುತ್ತಿದ್ದಾರೆ. ಸುಪ್ರ್ರಿಂ ಕೋರ್ಟ್ ನಲ್ಲಿ ಒಂದು ಕೇಸ್ ಪೆಂಡಿಗ್ ಇರುವಾಗ ನಾನು ಇಲ್ಲಿ ರಾಮ ಮಂದಿರ ಕಟ್ಟಿಯೇ ತೀರುತ್ತೇನೆ ಎಂದು ಯಾರೆಲ್ಲ ಹೇಳಿಕೆ ಕೊಡುತ್ತಾರೋ ಅವರನ್ನು ಎನ್‍ಕೌಂಟರ್ ಮಾಡಬೇಕು. ಎನ್‍ಕೌಂಟರ್ ಮಾಡಿ ದೇಶದಿಂದ ಶೂಟ್ ಮಾಡಿ ಕೊಲ್ಲಬೇಕು. ಇಲ್ಲದಿದ್ದರೆ ದೇಶದಿಂದ ಗಡೀಪಾರು ಮಾಡಬೇಕು. ಇಂತಹ ಆರ್‍ಎಸ್‍ಎಸ್‍ಗೆ ಹುಟ್ಟಿದಂತಹ ಜನಾರ್ದನ ಪೂಜಾರಿ ಸಮೇತ ಯಾವ ಕಾರಣಕ್ಕೂ ನಮ್ಮ ಜಿಲ್ಲೆಯಲ್ಲಿ ಇವರನ್ನು ಇಡಬಾರದು. ನಮ್ಮ ದೇಶದಲ್ಲಿ ಇಡಬಾರದು. ಯಾವ ಕಾರಣಕ್ಕೂ ಕಾಂಗ್ರೆಸ್ ಪಕ್ಷದಲ್ಲಿ ಇಡಬಾರದು. ಇದನ್ನೂ ಓದಿ: ಮುಸ್ಲಿಂ, ಕ್ರಿಶ್ಚಿಯನ್ನರೂ ರಾಮಮಂದಿರವನ್ನು ಬಯಸುತ್ತಾರೆ- ಜನಾರ್ದನ ಪೂಜಾರಿ

ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ನಾಯಕರಿಗೂ ಹೇಳೋದು ನಾನು ಒಂದೇ. ಈ ಆರ್‍ಎಸ್‍ಎಸ್ ಮುಖವಾಡದ ಜನಾರ್ದನ ಪೂಜಾರಿಯನ್ನು ತಕ್ಷಣ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಬೇಕು. ಮಾಡುವುದಿಲ್ಲವಾದ್ರೆ ನಾನು ಬಹಿರಂಗವಾಗಿ ನಾಳೆ ನಾನು ವಿಡಿಯೋ ಕಳಿಸ್ತೇನೆ ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರ ಹಾಕ್ತೇನೆ. ಈ ನಾಲಾಯಕನಿಂದ ಕಳೆದ ಮೂವತ್ತು ವರ್ಷದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಸೋಲಲು ಕಾರಣ. ಇವರು ಸಿದ್ದರಾಮಯ್ಯರ ವಿರುದ್ಧ ಹೇಳಿಕೆ ಕೊಡುವಾಗಲೇ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹಾಗೂ ನಾಯಕರುಗಳು ಆಲೋಚನೆ ಮಾಡಬೇಕಿತ್ತು.

ಸಿದ್ದರಾಮಯ್ಯನವರಂತಹ ನಾಯಕರ ಟೀಕೆ ಮಾಡೋದಾದ್ರೆ ಅರ್ಥ ಮಾಡಿಕೊಳ್ಳಬೇಕಿತ್ತು. ಇದೇ ಆರ್‍ಎಸ್‍ಎಸ್‍ನವರು ಹೇಳಿಕೆ ಕೊಟ್ಟದ್ದನ್ನು ಹೇಳ್ತಾ ಇದ್ದದ್ದು ಹೊರತು ಬೇರೇನು ಅಲ್ಲ. ಎಲ್ಲಾ ಕಾಂಗ್ರೆಸ್ ಪಕ್ಷವನ್ನು ನಾಶ ಮಾಡಿ ಇವರು ಸಾಯುವುದಾದರೆ ಏನು ಇವರದ್ದು ಕೊಡುಗೆ ಕಾಂಗ್ರೆಸ್ ಪಕ್ಷಕ್ಕೆ? ಇವರದ್ದು ಇದೇ ಕೊಡುಗೆನಾ? ಮುಸ್ಲಿಮರ ಬಗ್ಗೆ ಇಷ್ಟು ಕೀಳಾಗಿ ಮಾತನಾಡುವಂತಹ ನಾಲಾಯಕ ಜನಾರ್ದನ ಪೂಜಾರಿ ನಿನಗೆ ಧಿಕ್ಕಾರ. ನಿನಗೆ ದೇವರು ತುಂಬಾ ಆಯಸ್ಸು ಕೊಡಲ್ಲ. ಇಷ್ಟು ಸಮಯ ನಿನ್ನನ್ನು ಬದುಕಿಸಿ ಇಟ್ಟಿದ್ದು ದುರಂತ.

https://www.youtube.com/watch?v=44mqtl83rSI&feature=youtu.be

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *