ಪದೇ ಪದೇ ಭೂಕಂಪಕ್ಕೆ ಆಲಮಟ್ಟಿ ಡ್ಯಾಂ ಕಾರಣ: ಶಿವಾನಂದ ಪಾಟೀಲ್

Public TV
1 Min Read

ವಿಜಯಪುರ: ಜಿಲ್ಲೆಯಲ್ಲಿ ಪದೇ ಪದೇ ಆಗುತ್ತಿರುವ ಭೂಕಂಪಕ್ಕೆ ಆಲಮಟ್ಟಿ ಡ್ಯಾಂ ಕಾರಣ. ನನ್ನ ಅನುಭವದ ಪ್ರಕಾರ ಇದು ನನ್ನ ಊಹೆ ಎಂದು ಶಾಸಕ ಶಿವಾನಂದ ಪಾಟೀಲ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮರಿ ಖರ್ಗೆ ಹೆಸರು ಗಂಡೋ, ಹೆಣ್ಣೋ ಎಂಬ ಕ್ಲಾರಿಟಿ ಇಲ್ಲ: ಪ್ರತಾಪ್ ಸಿಂಹ

ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋಯ್ನಾ ಡ್ಯಾಂ ಆದಾಗ ಸುತ್ತಮುತ್ತನಲ್ಲಿ ಈ ರೀತಿ ಆಗಿದ್ದನ್ನು ನಾವು ಕೇಳಿದ್ದೇವೆ.ಎನ್‍ಟಿಪಿಸಿಗೂ ಭೂಕಂಪಕ್ಕು ಸಂಬಂಧವಿಲ್ಲ. ನನ್ನ ಪ್ರಕಾರ ಇದು ಆಲಮಟ್ಟಿ ಡ್ಯಾಂ ನಿಂದಾಗಿ ಆಗುತ್ತಿದೆ ಎಂದರು. ಇದನ್ನೂ ಓದಿ: ವಿಜಯಪುರದಲ್ಲಿ ಮತ್ತೆ ಸರಣಿ ಭೂಕಂಪದ ಅನುಭವ


ರಾಜ್ಯ ಸರ್ಕಾರ ಮೂರು ಬಾರಿ ತಜ್ಞರ ತಂಡ ಕಳುಹಿಸಿದೆ. ಆದರೆ ಅದರ ಫೈನಲ್ ವರದಿ ಬಂದಿಲ್ಲ. ಅವರ ವರದಿ ಬಂದ ಮೇಲೆ ಇದರ ಬಗ್ಗೆ ಮಾತನಾಡುವುದು ಸೂಕ್ತ. ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಇದರ ಬಗ್ಗೆ ಗಮನ ಸೆಳೆಯುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಡಿಕೆ ಅಂತ ಘೋಷಣೆ ಕೂಗಿವದರು ಪಕ್ಷ ದ್ರೋಹಿಗಳು ಹೊರಗೆ ಹೋಗಿ: ಡಿಕೆಶಿ ಗರಂ

Share This Article
Leave a Comment

Leave a Reply

Your email address will not be published. Required fields are marked *