ಬೆಂಗಳೂರು: ಸಿಎಂ ಐದು ವರ್ಷ ನಾನೇ ಸಿಎಂ ಎಂದಿದ್ದಾರೆ ಅಂದಮೇಲೆ ಕಾಂಗ್ರೆಸ್ನಲ್ಲಿ (Congress) ಡಿಕೆಶಿಗೆ ನಯಾಪೈಸೆ ಬೆಲೆ ಇಲ್ಲ ಎಂದು ಆರ್.ಅಶೋಕ್ (R Ashok) ಲೇವಡಿ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸಾವಿರ ಬಾರಿ ನಾನೇ 5 ವರ್ಷ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ. ಇದೇ ಅವರ ದೌರ್ಬಲ್ಯ. ಡಿಕೆ ಶಿವಕುಮಾರ್ ಸರ್ಕಾರವನ್ನು ನಾನೇ ಅಧಿಕಾರಕ್ಕೆ ತಂದೆ ಎಂದಿದ್ದಾರೆ. ಇನ್ನೂ ಸ್ವಾಮೀಜಿ ಸಹ ಡಿಕೆಶಿ ಸಿಎಂ ಆಗಲಿ ಎಂದು ಹೇಳಿದ್ದಾರೆ. ಆದರೆ ಸಿದ್ದರಾಮಯ್ಯ ಐದು ವರ್ಷ ನಾನೇ ಸಿಎಂ ಎಂದಿದ್ದಾರೆ. ಇದರರ್ಥ ಕಾಂಗ್ರೆಸ್ನಲ್ಲಿ ಡಿಕೆಶಿಗೆ ನಯಾ ಪೈಸೆ ಬೆಲೆ ಇಲ್ಲ ಎಂದಿದ್ದಾರೆ.ಇದನ್ನೂ ಓದಿ: ಶುಭಾಂಶು ಶುಕ್ಲಾ ಜು.14ಕ್ಕೆ ಭೂಮಿಗೆ ವಾಪಸ್?
ಇನ್ನೂ ಸಿದ್ದರಾಮಯ್ಯ ಡಿಕೆಶಿಗೆ ಶಾಸಕರ ಬೆಂಬಲ ಇಲ್ಲ ಎಂದು ಸಂದೇಶ ನೀಡಿದ್ದಾರೆ. ಸಿದ್ದರಾಮಯ್ಯ ತಾವೇ ಐದು ವರ್ಷ ಸಿಎಂ ಅಂತಾರೆ, ಆದರೆ ಇದನ್ನು ಮಲ್ಲಿಕಾರ್ಜುನ ಖರ್ಗೆಯವರು ಘೋಷಣೆ ಮಾಡಬೇಕು. ಖರ್ಗೆಯವರು ಒಂದು ದಿನ ಆದರೂ ಸಿದ್ದರಾಮಯ್ಯ ಐದು ವರ್ಷ ಸಿಎಂ ಎಂದಿದ್ದಾರಾ? ಅಥವಾ ಡಿಕೆಶಿ ಹೇಳಿದ್ದಾರಾ? ಯಾರೂ ಹೇಳಿಲ್ಲ. ಖರ್ಗೆ ಮತ್ತು ಡಿಕೆಶಿಯವರಿಂದ ಒಂದೇ ಒಂದು ಹೇಳಿಕೆ ಕೊಡಿಸಿ ನೋಡೋಣ ಎಂದು ಹೇಳಿದ್ದಾರೆ.
ರಾಜ್ಯದ ಜನತೆಗೆ ಸಿಎಂ ಸ್ಥಾನ ಅಭದ್ರತೆ ಕಾಡುತ್ತಿದೆ. ಕೆಲಸ ಆಗುತ್ತಿಲ್ಲ, ಅಭಿವೃದ್ಧಿ ಆಗುತ್ತಿಲ್ಲ. ಯಾರು ಇವರ ಮಾತು ಕೇಳುತ್ತಿಲ್ಲ. ದೆಹಲಿಯಿಂದಲೇ ಡಿಕೆಶಿಗೆ ಚಾಟಿ ಏಟು ಕೊಟ್ಟಿದ್ದಾರೆ. ಎಲ್ಲರಂತೆ ನೀನು ಕೆಲಸ ಮಾಡಿದ್ಯಾ? ವಿಶೇಷ ಏನು ಇಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಕಾಂಗ್ರೆಸ್ನಲ್ಲಿ ಈಗ ಪ್ರಳಯ ಆಗಿದೆ. ಖರ್ಗೆಯವರು ಏನಾದರೂ ಹೇಳಿದರೆ ಈ ಪ್ರಳಯ ನಿಲ್ಲುತ್ತೆ. ಇಲ್ಲವಾದರೆ ಈ ಕಚ್ಚಾಟ ಹೀಗೆ ಮುಂದುವರೆಯುತ್ತೆ, ಅಭಿವೃದ್ಧಿ ಕುಂಠಿತ ಆಗುತ್ತದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಕಲಬುರಗಿ | ಗಾಣಗಾಪುರದ ದತ್ತನ ಸನ್ನಿಧಿಯಲ್ಲಿ ಕಾಲ್ತುಳಿತ – ಮಹಿಳೆ ಸಾವು