ದೆಹಲಿಗೆ ರೊಬೋಟಿಕ್ ಅಗ್ನಿಶಾಮಕ ವಾಹನ ಎಂಟ್ರಿ – ಏನೆಲ್ಲಾ ಇದೆ ವಿಶೇಷ?

Public TV
1 Min Read

ನವದೆಹಲಿ: ದೇಶದಲ್ಲೇ ಮೊದಲ ಬಾರಿಗೆ ಅರವಿಂದ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ 2 ರೊಬೋಟ್ ಅಗ್ನಿಶಾಮಕ ವಾಹನವನ್ನು ಖರೀದಿಸಿದೆ.

ರಾಜ್ಯದಲ್ಲಿ ಆಗುವಂತಹ ಅಗ್ನಿ ಅವಘಡಗಳ ನಿಯಂತ್ರಣಕ್ಕೆ ಈ ರೊಬೋಟ್ ಅಗ್ನಿಶಾಮಕ ವಾಹನಗಳು ಮಹತ್ವದ ಪಾತ್ರ ವಹಿಸಲಿವೆ. ಕಿರಿದಾದ ರಸ್ತೆ, ಗೋದಾಮು, ಬೇಸ್ಮೆಂಟ್, ಮಹಡಿ, ಅರಣ್ಯ, ಆಯಿಲ್ ಟ್ಯಾಂರ‍್ಸ್ ಎಂಥದ್ದೇ ಸ್ಥಳದಲ್ಲೂ ಕಾರ್ಯ ನಿರ್ವಹಿಸುವ ಪರಿಣಿತಿ ಹೊಂದಿವೆ. ಇದನ್ನೂ ಓದಿ: ಜಮ್ಮು ಸುರಂಗ ಕುಸಿತ – 10 ಮೃತದೇಹಗಳು ಪತ್ತೆ

Arvind Kejriwal

300 ಮೀಟರ್ ದೂರದಿಂದಲೇ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿರುವ ಈ ವಾಹನಗಳು ಸುಲಭವಾಗಿ ಮಹಡಿಯನ್ನು ಹತ್ತುತ್ತವೆ. ಸೆನ್ಸಾರ್ ಮತ್ತು ಕ್ಯಾಮೆರಾ ಹಾಕಿದ್ದು ತಾಪಮಾನಕ್ಕೆ ಅನುಗುಣವಾಗಿ ನೀರು ಬಿಡುಗಡೆ ಮಾಡಲಿದೆ. ದೆಹಲಿಯ ಪಿವಿಸಿ ಮಾರ್ಕೆಟ್‌ನಲ್ಲಿ ನಡೆದ ಅಗ್ನಿ ಅವಘಡದ ಬಳಿಕ ಎಚ್ಚೆತ್ತುಕೊಂಡ ಸರ್ಕಾರ ಜನರ ರಕ್ಷಣೆಗಾಗಿ ಈ ಉಪಕ್ರಮವನ್ನು ತೆಗೆದುಕೊಂಡಿದೆ. ಇದನ್ನೂ ಓದಿ: ಟ್ರ್ಯಾಕ್ಟರ್ ಏರಿ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ ಸಂಸದ ಸಂಗಣ್ಣ ಕರಡಿ

fire
ಸಾಂದರ್ಭಿಕ ಚಿತ್ರ

ಈ ಕುರಿತು ಮಾತನಾಡಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಈ ಉಪಕ್ರಮವು ಅಮೂಲ್ಯ ಜೀವಗಳನ್ನು ಉಳಿಸಲು ಸಹಾಯ ಮಾಡುತ್ತದೆ. ನಮ್ಮ ಅಗ್ನಿಶಾಮಕ ದಳದವರು 100 ಮೀಟರ್‌ಗಳಷ್ಟು ಸುರಕ್ಷಿತ ದೂರದಿಂದ ಹೋರಾಡಿ ಬೆಂಕಿಯನ್ನು ನಂದಿಸಬಹುದು. ಈ ಮಿಷನ್‌ಗಳು 300 ಮೀಟರ್ ದೂರದಿಂದಲೇ ಕಾರ್ಯ ನಿರ್ವಹಿಸುವುದರಿಂದ ಅಗ್ನಿಶಾಮಕ ದಳಕ್ಕೆ ಮತ್ತಷ್ಟು ಸಹಾಯಕವಾಗಲಿದೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *