ವೈಯಕ್ತಿಕ ನಿಂದನೆ ಮಾಡೋದು ರಾಜ್ಯದ ಸಂಸ್ಕೃತಿ ಅಲ್ಲ – ಯತ್ನಾಳ್ ಮಾತು ಅವರ ಸಂಸ್ಕೃತಿಯನ್ನು ತೋರಿಸುತ್ತದೆ: ಸಿಎಂ ವಾರ್ನಿಂಗ್

Public TV
2 Min Read

ಬೆಂಗಳೂರು: ರಾಜಕಾರಣದಲ್ಲಿ, ಸಾರ್ವಜನಿಕ ಜೀವನದಲ್ಲಿ ಎಲ್ರೂ ಜನಮನ್ನಣೆ ಪಡ್ಕೊಂಡೇ ಬಂದಿರ್ತಾರೆ. ವೈಯಕ್ತಿಕ ನಿಂದನೆ ಮಾಡೋದು ರಾಜ್ಯದ ಸಂಸ್ಕೃತಿ ಅಲ್ಲ. ಯತ್ನಾಳ್ ಅವರು ಇದನ್ನೆಲ್ಲ ಹೊರತಾಗಿ ಮಾತನಾಡಿದ್ದಾರೆ. ಅವರ ಮಾತು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai), ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‍ಗೆ (Basangouda Patil Yatnal) ವಾರ್ನಿಂಗ್ ನೀಡಿದ್ದಾರೆ.

ಶಾಸಕ ವರ್ಸಸ್ ಬಿಜೆಪಿ (BJP) ನಾಯಕರ ಮಧ್ಯೆ ಬಿಗ್ ಫೈಟ್ ಆರಂಭವಾಗಿತ್ತು. ರಾಜ್ಯದಲ್ಲಿ ಮೀಸಲಾತಿ ಕದನ ತಾರಕಕ್ಕೇರಿದ್ದು, ರಾಜ್ಯ ಬಿಜೆಪಿಯಲ್ಲಿ ಯತ್ನಾಳ್ ವರ್ಸಸ್ ಮುರುಗೇಶ್‌ ನಿರಾಣಿ (Murugesh Nirani) ನಡುವೆ ವಾಕ್ ಸಮರ ಆರಂಭವಾಗಿದೆ. ನಿನ್ನೆಯಷ್ಟೇ ನಿರಾನಿ ಪಿಂಪ್ ಅಂತ ಯತ್ನಾಳ್ ಆರೋಪಿಸಿದ್ದರು. ಯತ್ನಾಳ್ ಹೇಳಿಕೆಗೆ ಸಿಎಂ ಪ್ರತಿಕ್ರಿಯಿಸಿ, ಬೀದಿಯಲ್ಲಿ ನಿಂತು ಬಾಯಿಗೆ ಬಂದಂತೆ ಮಾತನಾಡ್ತಿರೋ ಯತ್ನಾಳ್‍ಗೆ ಸಿಎಂ ವಾರ್ನಿಂಗ್ ನೀಡಿದ್ದಾರೆ. ವೈಯಕ್ತಿಕ ನಿಂದನೆ ಮಾಡೋದು ರಾಜ್ಯದ ಸಂಸ್ಕೃತಿ ಅಲ್ಲ. ಯತ್ನಾಳ್ ಅವರು ಇದನ್ನೆಲ್ಲ ಹೊರತಾಗಿ ಮಾತಾಡಿದ್ದಾರೆ. ಅವರ ಮಾತು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಆಡಿಯೋ ವೈರಲ್ ಬೆನ್ನಲ್ಲೇ ಸಿಎಂ ಭೇಟಿ ಮಾಡಿದ ಸಿಪಿವೈ

ಕಾಂಗ್ರೆಸ್ ನಾಯಕರ ಆರೋಪದ ಕುರಿತಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್‍ನವರು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೊಡಲು ನಿರಾಕರಿಸಿದ್ರು ಅವರಿದ್ದಾಗ ಯಾಕೆ ಕೊಡಲಿಲ್ಲ? ಅವರಿಗೆ ಈಗ ಮೀಸಲಾತಿ ಕೇಳುವ ಯಾವ ನೈತಿಕತೆ ಇದೆ? ಸ್ವಾಮೀಜಿಗಳು ತಮ್ಮ ಅಕ್ಕ ಪಕ್ಕ ಯಾರಿರ್ತಾರೆ ಅಂತ ಗಮನಿಸಲಿ. ಪಂಚಮಸಾಲಿ ಸಮುದಾಯದ ಅಧ್ಯಕ್ಷರು ವಿಜಯಾನಂದ ಕಾಶೆಪ್ಪನವರ್ ಒಬ್ಬರು ಶಾಸಕರಾಗಿದ್ರು, ಅವರ ತಂದೆ ಮಂತ್ರಿಯಾಗಿದ್ರು. ಅವರು ಯಾಕೆ ಮೀಸಲಾತಿ ಮಾಡಿಲ್ಲ ವರದಿಯನ್ನು ತಿರಸ್ಕಾರ ಮಾಡಲಾಯಿತು. ಮೀಸಲಾತಿ ಮಾಡೋಕೆ ಬರಲ್ಲ ಎಂದು ಹೇಳಿದ್ರು. ಆಗ ಯಾಕೆ ಬಾಯಿ ತೆಗೆಯಲಿಲ್ಲ, ಮಾತನಾಡಲಿಲ್ಲ ಈಗ ಅವರಿಗೆ ಯಾವ ನೈತಿಕತೆ ಇದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸ್ಯಾಂಟ್ರೋ ಟ್ರಾವೆಲ್ಸ್ ಹತ್ತಿದವರಿಗೆ ಸಿಡಿ ಭಯ- ರವಿ ಹತ್ರ ಸಿಡಿ ಇವೆಯಾ..!?

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *