ಸ್ಮಶಾನಕ್ಕೆ ಹೋಗಿ ಪೂರ್ವಜರ ಅಸ್ಥಿಪಂಜರ ತಿಂತಾರೆ ಮಕ್ಕಳು, ಮೊಮ್ಮಕ್ಕಳು- ಕೋಲಾರದ ಗಡಿಯಲ್ಲಿ ವಿಚಿತ್ರ ಆಚರಣೆ

Public TV
1 Min Read

ಕೋಲಾರ: ಇದು ಜನ ಮರಳೋ ಜಾತ್ರೆ ಮರಳೋ ಗೊತ್ತಿಲ್ಲ. ಮಕ್ಕಳು, ಮರಿ ಮಕ್ಕಳು ಸ್ಮಶಾನಕ್ಕೆ ತೆರಳಿ ಪೂರ್ವಜರ ಅಸ್ಥಿಪಂಜರ ತಿನ್ನುವ ವಿಚಿತ್ರ ಆಚರಣೆ ಕೋಲಾರ ಜಿಲ್ಲೆಯ ಗಡಿಯಲ್ಲಿ ನಡೀತಿದೆ.

ಪ್ರತಿ ವರ್ಷ ಶಿವರಾತ್ರಿ ಅಮವಾಸ್ಯೆ ದಿನ ಗಡಿಯಲ್ಲಿ ಈ ಆಚರಣೆ ನಡೀತಿದೆ. ತಮಿಳುನಾಡು ಕೃಷ್ಣಗಿರಿ ಜಿಲ್ಲೆಯ ಕೊಲ್ಲಂ ಗ್ರಾಮದಲ್ಲಿ ಅಮವಾಸ್ಯೆ ದಿನ ಕುಟುಂಬಸ್ಥರೆಲ್ಲ ತೆರಳಿ ಪೂರ್ವಜರ ಸಮಾಧಿಗೆ ಪೂಜೆ ಸಲ್ಲಿಸಿ, ನಂತರ ಸಮಾಧಿಯಲ್ಲಿರುವ ಹಿರಿಯರ ಅಸ್ಥಿಪಂಜರ ತೆಗೆದು ಮೂಳೆ ಬುರಡೆ ತಿನ್ನುತ್ತಾರೆ.

ಯಾವುದೇ ದುಷ್ಟ ಶಕ್ತಿಗಳು ಬರದಂತೆ ಹಾಗೂ ಹಿರಿಯರು ಸದಾ ಕಾಪಾಡುತ್ತಾರೆ ಎಂಬುದು ಇವರ ನಂಬಿಕೆಯಾಗಿದ್ದು, ಪ್ರತಿವರ್ಷ ನಡೆಯುವ ಒಂದು ವಿಶಿಷ್ಟ ಜಾತ್ರೆಯಲ್ಲಿ ಹೀಗೊಂದು ಆಚರಣೆ ಮಾಡ್ತಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *