ದೇವೇಗೌಡ್ರ ಮನೆಗೆ ಬೊಮ್ಮಾಯಿ ಭೇಟಿ – ಆರೋಗ್ಯ ವಿಚಾರಿಸಿ, ಈಗ್ಲೂ ಮುದ್ದೆ ತಿಂತೀರಾ ಸರ್ ಎಂದ ಸಿಎಂ

Public TV
1 Min Read

ಬೆಂಗಳೂರು: ಸಿದ್ದರಾಮಯ್ಯ, ಬಿಎಸ್. ಯಡಿಯೂರಪ್ಪ ಬಳಿಕ ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಅವರು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನು ಭೇಟಿಯಾದರು.

ವಿಧಾನಸೌಧದಿಂದ ನೇರವಾಗಿ ಪದ್ಮನಾಭ ನಗರ ನಿವಾಸಕ್ಕೆ ತೆರಳಿ ಮಾಜಿ ಪ್ರಧಾನಿಯ ಆರೋಗ್ಯ (Health) ವಿಚಾರಿಸಿದರು. ಈ ವೇಳೆ ಸಿಎಂಗೆ ಆರ್.ಅಶೋಕ್, ಮುನಿರತ್ನ, ಬೈರತಿ ಬಸವರಾಜ್ ಸಾಥ್, ಮಾಧುಸ್ವಾಮಿ, ಗೋಪಾಲಯ್ಯ, ವಿ ಸೋಮಣ್ಣ ಮೊದಲಾದವರು ಸಾಥ್ ನೀಡಿದರು.

ಭೇಟಿ ವೇಳೆ ಸಿಎಂ ಬೊಮ್ಮಾಯಿಯವರು, ನೀವು ಈಗಲೂ ಮುದ್ದೆ ಊಟ ಮಾಡ್ತೀರಾ ಎಂದು ದೇವೆಗೌಡರನ್ನು ಕೇಳಿದರು. ಬಳಿಕ ಸಿಎಂ, ಸಚಿವರು ದೇವೇಗೌಡರ ನಿವಾಸದಲ್ಲಿ ಮುದ್ದೆ ಊಟ ಸೇವಿಸಿದರು. ಇದನ್ನೂ ಓದಿ: ದೇವೇಗೌಡರನ್ನು ಭೇಟಿಯಾಗಿ ಕಾಲು ಮುಟ್ಟಿ ನಮಸ್ಕರಿಸಿದ ಬಿಎಸ್‌ವೈ

ನಿನ್ನೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ (B S Yediyurappa), ಸೋಮವಾರ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಪದ್ಮನಾಭ ನಗರದ ನಿವಾಸಕ್ಕೆ ತೆರಳಿ ಹೆಚ್‍ಡಿಡಿ ಆರೋಗ್ಯ ವಿಚಾರಿಸಿದ್ದರು. ಇದನ್ನೂ ಓದಿ: ದೇವೇಗೌಡರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ರು ಸಿದ್ದರಾಮಯ್ಯ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *