ಮಂಡ್ಯ: ಕುರಿ ಕೊಟ್ಟಿಗೆಗೆ ಚಿರತೆಗಳು ನುಗ್ಗಿ 6 ಮೇಕೆಗಳನ್ನು ಕೊಂದು ಅದರಲ್ಲಿ 4 ಮೇಕೆಗಳನ್ನು ಹೊತ್ತು ಹೊಯ್ದುರುವ ಘಟನೆ ಮಂಡ್ಯ (Mandya) ಜಿಲ್ಲೆಯ ಪಾಂಡವಪುರ ತಾಲೂಕಿನ ಗಿರಿಯಾರಹಳ್ಳಿಯಲ್ಲಿ ಜರುಗಿದೆ.
ಭಾನುವಾರ ರಾತ್ರಿ ಗಿರಿಯಾರಗಳ್ಳಿಯ ನಾಗೇಗೌಡ ಎಂಬ ರೈತ ಕೊಟ್ಟಿಗೆಯಲ್ಲಿ 18 ಮೇಕೆ (Goat) ಗಳನ್ನು ಕಟ್ಟಿದ್ದರು. ಮಧ್ಯರಾತ್ರಿ ಚಿರತೆಗಳು ಕೊಟ್ಟಿಗೆ ಬಂದಿದ್ದು, ಅಲ್ಲಿದ್ದ 18 ಮೇಕೆಗಳ ಪೈಕಿ 6 ಮೇಕೆಗಳಿಗೆ ಕಚ್ಚಿ ಅವುಗಳ ರಕ್ತ ಕುಡಿದು ಅರ್ಧ ಮಾಂಸವನ್ನು ತಿಂದಿವೆ. ಅಲ್ಲದೇ ಇನ್ನೂ 4 ಮೇಕೆಗಳನ್ನು ಚಿರತೆ (Cheetah) ಗಳು ಹೊತ್ತೊಯ್ದಿವೆ. ಬೆಳಗ್ಗೆ ನಾಗೇಗೌಡ ಎಂದಿನಂತೆ ಕೊಟ್ಟಿಗೆ ಬಳಿ ನೋಡಿದಾಗ ಚಿರತೆ ದಾಳಿ ನಡೆಸಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬಜ್ಜಿ, ಬೋಂಡಾ ತಿನ್ನಲು ಬಂದಿದ್ದ ಮಹಿಳಾ ‘ಪೊಲೀಸ್’ ಮೇಲೆ ದೂರು ದಾಖಲು!
ಎರಡರಿಂದ ಮೂರು ಚಿರತೆಗಳು ದಾಳಿ ನಡೆಸಿರುವ ಶಂಕೆಯನ್ನು ಗ್ರಾಮಸ್ಥರು ವ್ಯಕ್ತಪಡಿಸುತ್ತಿದ್ದಾರೆ. ಸ್ಥಳಕ್ಕೆ ಶಾಸಕ ಪುಟ್ಟರಾಜು ಭೇಟಿ ನೀಡಿ, ಆರ್ಥಿಕ ಸಹಾಯ ಮಾಡಿ ಸರ್ಕಾರದಿಂದ ಹೆಚ್ಚಿನ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು. ಈ ವೇಳೆ ಸ್ಥಳೀಯರು, ಕೂಡಲೇ ಇಲ್ಲಿ ಚಿರತೆ ಸೆರೆಗಾಗಿ ಬೋನ್ ಇರಿಸಬೇಕು, ನಮಗೆ ಜಮೀನಿಗೆ ಹೋಗಲು ಸಹ ಭಯವಾಗುತ್ತಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕೆಂದು ಆಗ್ರಹಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k