ಹೆಚ್‌ಡಿಕೆಗೆ ಚಕ್ರವ್ಯೂಹ, ಪುತ್ರ ನಿಖಿಲ್‌ಗೆ ಪದ್ಮವ್ಯೂಹ – ಏನಿದು ಬಿಜೆಪಿ ಗೇಮ್?

Public TV
2 Min Read

ಬೆಂಗಳೂರು: ಅಲ್ಲಿ ಅಪ್ಪನಿಗೆ ಚಕ್ರವ್ಯೂಹ, ಇಲ್ಲಿ ಮಗನಿಗೆ ಪದ್ಮವ್ಯೂಹ. ಇದು ಬಿಜೆಪಿಯ (BJP) ಹೊಸ ತಂತ್ರ. ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಅವರ ಬ್ರಾಹ್ಮಣ ಬಾಣದ ಕೆಂಡಕ್ಕೆ ಬಿಜೆಪಿಯದ್ದು ಗೇಮ್ ಪ್ಲ್ಯಾನ್ ತಯಾರಾಗುತ್ತಿದೆ ಎನ್ನಲಾಗಿದೆ. ರಾಮನಗರದಲ್ಲಿ ಬಿಜೆಪಿ ಬ್ರಹ್ಮಾಸ್ತ್ರ ಸಿದ್ಧವಾಗುತ್ತಿದ್ದು, ನಾವು ಸೋತರೂ ಚಿಂತೆ ಇಲ್ಲ, ಅವರ ಮಗ ಗೆಲ್ಲಬಾರದು ಎಂದು ಬಿಜೆಪಿ ಹೊಸ ಆಟ ಶುರು ಮಾಡಿದೆ. ರಾಮನಗರದಲ್ಲಿ ಜೆಡಿಎಸ್ ಎದುರು ಒಕ್ಕಲಿಗ ಸ್ಪರ್ಧಾಳು ಪ್ರಯೋಗಕ್ಕೆ ಬಿಜೆಪಿಯಲ್ಲಿ ಒತ್ತಡ ಹೆಚ್ಚಾಗಿದೆ.

ಪದೇ ಪದೇ ಆರ್‌ಎಸ್‌ಎಸ್ ವಿರುದ್ಧ ಕೆಂಡಕಾರುತ್ತಿರುವ ಮಾಜಿ ಸಿಎಂ ಹೆಚ್‌ಡಿಕೆ ವಿರುದ್ಧ ಬಿಜೆಪಿ ಗುಂಪೊಂದು ಸಿಟ್ಟಾಗಿದೆ. ಬಿಜೆಪಿಯಲ್ಲಿ ಒಂದು ಗುಂಪು ಹೊಂದಾಣಿಕೆ ಬೇಡ, 2 ಕ್ಷೇತ್ರದಲ್ಲಿ ಕಟ್ಟಿ ಹಾಕಿ ಎಂಬ ಕೂಗು ವ್ಯಕ್ತಪಡಿಸಿದೆ ಎನ್ನಲಾಗಿದೆ. ಈಗಾಗಲೇ ಚನ್ನಪಟ್ಟಣ ಕ್ಷೇತ್ರದಲ್ಲಿ ಹೆಚ್‌ಡಿಕೆ ವಿರುದ್ಧ ಯೋಗೇಶ್ವರ್ ಪ್ರಬಲ ಸ್ಪರ್ಧಿ ಹೋರಾಟ ಆಗುತ್ತದೆ. ಆದರೆ ಪಕ್ಕದ ರಾಮನಗರ ಕ್ಷೇತ್ರದಲ್ಲೂ ಹೆಚ್‌ಡಿಕೆ ಪುತ್ರ ನಿಖಿಲ್ (Nikhil Kumaraswamy) ವಿರುದ್ಧ ಪ್ರಬಲ ಸ್ಪರ್ಧಿ ಕಣ್ಕಕಿಳಿಸಿ ಎಂಬ ಬೇಡಿಕೆ ಪಕ್ಷದ ವೇದಿಕೆಯಲ್ಲಿ ವ್ಯಕ್ತವಾಗಿದೆ. ಇದನ್ನೂ ಓದಿ: ಹಾಸನದ ಜೆಡಿಎಸ್ ಸಿಂಹಾಸನ – ಬಗೆಹರಿಯದ ಕುಟುಂಬದೊಳಗಿನ ಕದನ

 

ಈ ನಡುವೆ ಒಕ್ಕಲಿಗ ಸಮುದಾಯಕ್ಕೆ ಸೇರಿದ ಪ್ರಬಲ ನಾಯಕನೇ ಸ್ಪರ್ಧೆ ಮಾಡಲಿ, ಸೋತರೂ ಚಿಂತೆಯಿಲ್ಲ, ಹೋರಾಟ ಆಗಲಿ. ಅಲ್ಲಿ ಬಿಜೆಪಿ ಗೆಲ್ಲದಿದ್ದರೂ ಪರವಾಗಿಲ್ಲ, ಹೆಚ್‌ಡಿಕೆ ಪುತ್ರನೇ ಟಾರ್ಗೆಟ್ ಆಗಿರಲಿ, ಕಟ್ಟಿ ಹಾಕಬೇಕೆಂಬ ಕೂಗು ಜೋರಾಗಿದೆ. ಪದೇ ಪದೇ ಆರ್‌ಎಸ್‌ಎಸ್ ಬಗ್ಗೆ, ಬಿಜೆಪಿ ಬಗ್ಗೆ ಮಾತನಾಡುವಾಗ ನಾವು ಸುಮ್ಮನಿರುವುದು ಬೇಡ ಎಂಬ ಒತ್ತಡ ಇದೆ ಎನ್ನಲಾಗುತ್ತಿದೆ.

ಬಿಜೆಪಿಯೊಳಗಿನ ಕೂಗಿಗೆ ಬಿಜೆಪಿ ಹೈಕಮಾಂಡ್ ಸ್ಪಂದಿಸುತ್ತಾ? ಹೆಚ್‌ಡಿಕೆ ವಿರುದ್ಧ ರಿಯಲ್ ಪೊಲಿಟಿಕಲ್ ವಾರ್ ಏನು ಎಂಬ ಬಗ್ಗೆ ಕುತೂಹಲ ಹೆಚ್ಚಿದೆ. ಚನ್ನಪಟ್ಟಣ ಚಕ್ರವ್ಯೂಹ, ರಾಮನಗರ ಪದ್ಮವ್ಯೂಹ, ನಿಜಕ್ಕೂ ರಚನೆಯಾದರೆ ರಾಜ್ಯದ ಸ್ಟಾರ್ ವಾರ್ ಕ್ಷೇತ್ರವಾಗುವುದಂತೂ ಸತ್ಯ. ಇದನ್ನೂ ಓದಿ: ಯುಪಿಎ ಅವಧಿಯದ್ದು ಭ್ರಷ್ಟಾಚಾರದ ದಶಕ, ನಮ್ಮದು ಭಾರತದ ದಶಕ: ನರೇಂದ್ರ ಮೋದಿ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *