ಬಿಗ್ ಬಿ ಅಮಿತಾಭ್ ಬಚ್ಚನ್ ಕಾಲಿಂದ ರಕ್ತಸ್ರಾವ: ಆತಂಕದಲ್ಲಿತ್ತು ಕುಟುಂಬ

Public TV
1 Min Read

ಬಾಲಿವುಡ್ ಖ್ಯಾತ ನಟ ಅಮಿತಾಭ್ ಬಚ್ಚನ್ (Amitabh Bachchan) ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಕೌನ್ ಬನೇಗಾ ಕರೋಡ್ ಪತಿ ಸೆಟ್ ನಲ್ಲಿ ಅವಘಡ ನಡೆದಿದ್ದು, ಕಾಲಿನಿಂದ ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ. ಗಾಯಕ್ಕೆ (Injury) ಹೊಲಿಗೆ ಹಾಕಿ ಚಿಕಿತ್ಸೆ ನೀಡಿದ್ದಾರೆ ವೈದ್ಯರು. ಸದ್ಯ ಅಮಿತಾಭ್ ಆರೋಗ್ಯವಾಗಿದ್ದು, ಮನೆಯಲ್ಲಿ ರೆಸ್ಟ್ ಮಾಡುತ್ತಿದ್ದಾರೆ.

ಕೌನ್ ಬನೇಗಾ ಕರೋಡ್ ಪತಿ ಶೋ ಶೂಟಿಂಗ್ ನಲ್ಲಿ (Shooting) ಭಾಗಿಯಾಗಿದ್ದ ಅಮಿತಾಭ್, ಚಿತ್ರೀಕರಣ ನಡೆಯುವ ಸ್ಥಳದಲ್ಲಿ ಬಿದ್ದಿದ್ದ ಕಬ್ಬಿಣದ ರಾಡ್ ತುಳಿದಿದ್ದರು ಎಂದು ಹೇಳಲಾಗುತ್ತಿದೆ. ರಾಡ್ ಮೇಲೆ ಬಲವಾಗಿ ಕಾಲು ಇಟ್ಟಿದ್ದರಿಂದ ಅದು ಚುಚ್ಚಿ, ರಕ್ತಸ್ರಾವ ಆಗಿದೆ. ರಕ್ತಸ್ರಾವ  (Bleeding)ನಿಲ್ಲದೇ ಇರುವ ಕಾರಣಕ್ಕಾಗಿ ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ (Hospital) ದಾಖಲಿಸಲಾಗಿತ್ತು. ಆಳವಾದ ಗಾಯವಾಗಿದ್ದರಿಂದ ಹೊಲಿಗೆ ಹಾಕಲಾಗಿದೆ. ಇದನ್ನೂ ಓದಿ:ಚೇತನ್ ಕಾಂಟ್ರವರ್ಸಿಗೆ ಪ್ರಗತಿ ರಿಷಬ್ ಶೆಟ್ಟಿ ಪ್ರತಿಕ್ರಿಯೆ

ಗಾಯಕ್ಕೆ ಹೊಲಿಗೆ ಹಾಕಿದ ನಂತರ ಮತ್ತೆ ಅಮಿತಾಭ್ ಶೂಟಿಂಗ್ ಗೆ ತೆರಳಲು ಸಿದ್ಧರಾಗಿದ್ದರಂತೆ. ಆದರೆ, ಆಯೋಜಕರು ಅದಕ್ಕೆ ಒಪ್ಪದೇ ಮನೆಯಲ್ಲಿ ವಿಶ್ರಾಂತಿ ತಗೆದುಕೊಳ್ಳುವಂತೆ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಕುಟುಂಬಕ್ಕೆ ಆತಂಕವಾಗಿ , ಪದೇ ಪದೇ ಆರೋಗ್ಯ ವಿಚಾರಿಸಿಕೊಂಡಿದ್ದಾರೆ. ಸದ್ಯ ಅಮಿತಾಭ್ ಆರೋಗ್ಯವಾಗಿದ್ದು ,ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *