ಆಹಾರ ನೀರು ಬಿಟ್ಟು ದೇವಸ್ಥಾನ ಸುತ್ತುತ್ತಿರುವ ಶ್ವಾನ

Public TV
1 Min Read

ಬೆಂಗಳೂರು: ಶ್ವಾನವೊಂದು ಆಹಾರ ನೀರು ಬಿಟ್ಟು ದೇವರ ಗುಡಿಯನ್ನು ಸುತ್ತುವ ಮೂಲಕ ಅಚ್ಚರಿಗೆ ಕಾರಣವಾಗಿರುವ ಘಟನೆ ನಗರದ ಹೊರವಲಯ ಬನ್ನೇರುಘಟ್ಟದಲ್ಲಿ ನಡೆದಿದೆ.

ಬನ್ನೇರುಘಟ್ಟದ ಶ್ರೀ ಚಂಪಕಧಾಮಸ್ವಾಮಿ ದೇವಾಲಯದ ಮುಂದೆ ಇರುವ ಬಿಸಿಲು ಮಾರಮ್ಮನ ಗುಡಿ ಹಾಗೂ ಗರುಡಗಂಬವನ್ನು ಶ್ವಾನವೊಂದು ಕಳೆದ ಮೂರು ದಿನಗಳಿಂದ ಸತತವಾಗಿ ಆಹಾರ ನೀರು ಬಿಟ್ಟು ಸುತ್ತುತ್ತಿರುವುದು ಸ್ಥಳೀಯರ ಆಚ್ಚರಿಗೆ ಕಾರಣವಾಗಿದೆ. ಶ್ವಾನ ಯಾವ ಕಾರಣಕ್ಕಾಗಿ ಈ ರೀತಿ ಸುತ್ತುತ್ತಿದೆ ಎಂಬುದು ಮಾತ್ರ ತಿಳಿದು ಬಂದಿಲ್ಲ. ಇದನ್ನೂ ಓದಿ: 5 ದಿನಗಳಿಂದ ಅರಳಿಕಟ್ಟೆ ಸುತ್ತುತ್ತಿದೆ ನಾಯಿ-ಬೈಯಪ್ಪನ ಹಳ್ಳಿಯಲ್ಲಿ ಅಚ್ಚರಿಯ ಘಟನೆ-ವಿಡಿಯೋ ನೋಡಿ

ಶ್ವಾನವನ್ನು ನೋಡಲು ಅಕ್ಕಪಕ್ಕದ ಗ್ರಾಮಸ್ಥರು ಅಗಮಿಸುತ್ತಿದ್ದಾರೆ. ಇನ್ನು ಬನ್ನೇರುಘಟ್ಟದ ಶ್ರೀ ಚಂಪಕಧಾಮಸ್ವಾಮಿ ಜಾತ್ರೆ ಮುಗಿದು ಕೆಲವೇ ದಿನಗಳಾಗಿದ್ದು ಇದೀಗ ಶ್ವಾನ ದೇವರ ಗುಡಿ ಸುತ್ತುತ್ತಿರುವುದು ಸ್ಥಳೀಯರಲ್ಲಿ ಒಂದು ರೀತಿಯ ಆತಂಕಕ್ಕೆ ಕಾರಣವಾಗಿದೆ.

https://youtu.be/cb5PPuAu07s

Share This Article
Leave a Comment

Leave a Reply

Your email address will not be published. Required fields are marked *