ನನ್ನ ಮೇಲೆ ಅಭಿಮಾನ ಇದ್ದರೆ ನಿಂಬೆ ಹಣ್ಣು ಕೊಡಿ ಸಾಕು: ಡಿಕೆಶಿ ಮನವಿ

Public TV
1 Min Read

ಬೆಂಗಳೂರು: ನನ್ನ ಮೇಲೆ ಅಭಿಮಾನ ಇದ್ದರೆ ನೀವು ನನಗೆ ಒಂದು ನಿಂಬೆ ಹಣ್ಣು ಕೊಡಿ ಸಾಕು ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಮನವಿ ಮಾಡಿಕೊಂಡಿದ್ದಾರೆ.

ಇಂದು ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಹೂವಿನ ಹಾರ ಹಾಕದಿದ್ದರೂ ಬೇಜಾರಿಲ್ಲ. ಆದರೆ ಸುಗಂಧರಾಜ ಹೂವಿನ ಹಾರವನ್ನು ಮಾತ್ರ ಹಾಕಬೇಡಿ. ಅದರ ಬದಲಿಗೆ ಒಂದು ನಿಂಬೆ ಹಣ್ಣು ಕೊಟ್ಟರೂ ನನಗೆ ಸಂತೋಷ ಎಂದು ಅಭಿಮಾನಿಗಳು ಮತ್ತು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸುಗಂಧರಾಜದ ಹೂವಿನ ಹಾರ ಹಾಕಿದರೆ ನನಗೆ ಅಲರ್ಜಿಯಾಗುತ್ತದೆ. ಸುಗಂಧರಾಜ ಹೂ ನನ್ನ ಚರ್ಮಕ್ಕೆ ಟಚ್ ಆದರೆ ನನ್ನ ಮುಖ ಮೈಯಲ್ಲ ಊದುತ್ತದೆ. ಆದ್ದರಿಂದ ಅಭಿಮಾನಿಗಳು ಮತ್ತು ಕಾರ್ಯಕರ್ತರು ನನಗೆ ಹಾರ ಹಾಕದೆ ಇದ್ದರೂ ಪರವಾಗಿಲ್ಲ. ಆದರೆ ಸುಗಂಧರಾಜ ಹೂವಿನ ಹಾರ ಹಾಕಬೇಡಿ. ಅದರ ಬದಲು ಒಂದು ನಿಂಬೆ ಹಣ್ಣು ಕೊಡಿ ಸಾಕು ಎಂದು ಮಾಧ್ಯಮಗಳ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಇದನ್ನು ಓದಿ: ಬೇಕಾದ್ರೆ ನನಗೊಂದು ಕಲ್ಲಿನ ಹಾರ ಹಾಕಿ, ಸುಗಂಧರಾಜ ಹಾರ ಬೇಡ : ಡಿಕೆಶಿ

ಇದೇ ವೇಳೆ ಗೌರಿ ಹಬ್ಬಕ್ಕೆ ನನ್ನ ಹಿರಿಯರಿಗೆ ಪೂಜೆ ಮಾಡೋಕೆ ಆಗಿಲ್ಲ. ಆದರೆ ದೀಪಾವಳೀಗೆ ಊರಿಗೆ ಹೋಗಿ ನನ್ನ ತಂದೆ ಸಮಾಧಿಗೆ ಪೂಜೆ ಮಾಡುತ್ತೇನೆ. ಕುಟುಂಬದವರು ಎಲ್ಲರೂ ಹೋಗಿ ಪೂಜೆ ಮಾಡಿ ಬರುತ್ತೇವೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *