ಸಾನ್ಯ ಐಯ್ಯರ್ ವಿಚಾರವಾಗಿ ಭದ್ರಕಾಳಿ ಮೇಲೆ ಶಪಥ ಮಾಡಿದ ಆರ್ಯವರ್ಧನ್ ಗುರೂಜಿ

Public TV
1 Min Read

ಬಿಗ್ ಬಾಸ್ (Bigg Boss) ಮನೆಯ ಕೆಲವರನ್ನು ‘ಮಗ’, ‘ಮಗಳು’ ಎಂದು ಪ್ರೀತಿಯಿಂದ ಕರೆಯುತ್ತಾರೆ ಆರ್ಯವರ್ಧನ್ ಗುರೂಜಿ. ಅಂತಹ ಮಕ್ಕಳೇ ಇಂದು ತಿರುಗಿ ಬೀಳುವಂತಹ ಪ್ರಸಂಗಗಳು ದೊಡ್ಮನೆಯಲ್ಲಿ ನಡೆಯುತ್ತಿವೆ. ಅದರಲ್ಲೂ ಗುರೂಜಿ (Aryavardhan Guruji) ಯಾರನ್ನೂ ಅಭಿಮಾನದಿಂದ, ಅಕ್ಕರೆಯಿಂದ ಕರೆಯುತ್ತಿದ್ದರೋ ಅಂಥವರು ಗುರೂಜಿ ಬೆನ್ನಿಗೆ ಚೂರಿ ಹಾಕುತ್ತಿದ್ದಾರಂತೆ. ಹಾಗಾಗಿ ಬಿಗ್ ಬಾಸ್ ಮನೆಯಲ್ಲಿ ನನಗೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಬೇಜಾರಾಗಿದೆ ಎಂದಿದ್ದಾರೆ.

ದಿನವೂ ಒಂದೇ ತಟ್ಟೆಯಲ್ಲಿ ತಿಂದರೂ, ನಾಮಿನೇಷನ್ (nominated) ವಿಚಾರದಲ್ಲಿ ಬಿಗ್ ಬಾಸ್ ಮನೆಯ ಸದಸ್ಯರು ವಿಭಿನ್ನವಾಗಿಯೇ ಯೋಚಿಸುತ್ತಾರೆ. ತಾನು ಸೇಫ್ ಆಗಿ ಇದ್ದರೆ ಸಾಕು ಎಂದೇ ಯೋಚನೆ ಮಾಡುತ್ತಾರೆ. ಸಾನ್ಯ ಅಯ್ಯರ್ (Sanya Iyer) ಮತ್ತು ಆರ್ಯವರ್ಧನ್ ಗುರೂಜಿ ವಿಚಾರದಲ್ಲೂ ಅದೇ ಆಯಿತು. ನಾಮಿನೇಷನ್ ಪ್ರಕ್ರಿಯೆ ನಡೆದಾಗ, ನೇರವಾಗಿ ನಾನು ಆರ್ಯವರ್ಧನ್ ಗುರೂಜಿಯನ್ನು ನಾಮಿನೇಟ್ ಮಾಡುವೆ ಎಂದು ಸಾನ್ಯ ಹೇಳಿದರು. ನಿಜಕ್ಕೂ ಇದು ಶಾಕಿಂಗ್ ವಿಚಾರವಾಗಿತ್ತು ಗುರೂಜಿಗೆ. ಇದನ್ನೂ ಓದಿ:ಚೇತನ್ ಕಾಂಟ್ರವರ್ಸಿಗೆ ಪ್ರಗತಿ ರಿಷಬ್ ಶೆಟ್ಟಿ ಪ್ರತಿಕ್ರಿಯೆ

ಮನೆಯ ಕ್ಯಾಪ್ಟನ್ ಆಗಿದ್ದ ಸಾನ್ಯಗೆ ನೇರವಾಗಿ ಒಬ್ಬರನ್ನು ನಾಮಿನೇಟ್ ಮಾಡಲು ಅವಕಾಶ ನೀಡಲಾಗಿತ್ತು. ಅದರಂತೆ ಗುರೂಜಿಯನ್ನು ಅವರು ಆಯ್ಕೆ ಮಾಡಿಕೊಂಡರು. ಇದರಿಂದ ಕೋಪ ಮಾಡಿಕೊಂಡ ಗುರೂಜಿ, ‘ಈ ಸೇಡನ್ನು ನಾನು ತೀರಿಸಿಕೊಳ್ಳದೇ ಬಿಡುವುದಿಲ್ಲ. ಮುಂದೊಂದು ದಿನ ನನಗೆ ಅಧಿಕಾರ ಬಂದರೆ, ಸಾನ್ಯರನ್ನು ನಾಮಿನೇಟ್ ಮಾಡುತ್ತೇನೆ ಎಂದು ಭದ್ರಕಾಳಿ ಮೇಲೆ ಶಪಥ ಮಾಡಿದರು ಆರ್ಯವರ್ಧನ್ ಗುರೂಜಿ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *