‘ಬಿಗ್ ಬಾಸ್’ ಮನೆಯಿಂದ ಅರುಣ್ ಸಾಗರ್ ದಿಢೀರ್ ನಾಪತ್ತೆ: ಪ್ರೇಕ್ಷಕರಲ್ಲಿ ಗೊಂದಲ

Public TV
2 Min Read

ನ್ನಡದ ಬಿಗ್ ಬಾಸ್ ಮನೆಯಿಂದ ನಟ, ಕಲಾ ನಿರ್ದೇಶಕ ಅರುಣ್ ಸಾಗರ್ ದಿಢೀರ್ ನಾಪತ್ತೆ ಆಗಿರುವ ಸುದ್ದಿ ಬಂದಿದೆ. ವಾರದ ಕಿಚ್ಚನ ಕಾರ್ಯಕ್ರಮದಲ್ಲಿ ಇದ್ದವರು, ಒಂದಷ್ಟು ಮಾತನಾಡಿದವರು, ಸೋಮವಾರ ಮನೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಅದಕ್ಕೆ ಕಾರಣವನ್ನೂ ಬಿಗ್ ಬಾಸ್ ಆಗಲಿ ಅಥವಾ ಮನೆಯಲ್ಲಿರುವ ಸದಸ್ಯರಾಗಲಿ ಕೊಟ್ಟಿಲ್ಲ. ಅರುಣ್ ಸಾಗರ್ ಕುರಿತು ನಿನ್ನೆಯ ಎಪಿಸೋಡ್ ನಲ್ಲಿ ಒಂದೇ ಒಂದು ಮಾತನ್ನೂ ಯಾರೂ ಆಡದೇ ಇರುವುದು ಅಚ್ಚರಿಗೆ ಕಾರಣವಾಗಿದೆ.

ಬಿಗ್ ಬಾಸ್ ಮನೆಯೆಂದರೆ ಅಲ್ಲಿ ಅರುಣ್ ಸಾಗರದ್ದೇ ಅಬ್ಬರ, ಆರ್ಭಟ. ಟಾಸ್ಕ್ ಯಾವುದೇ ಆಗಿರಲಿ ಅಲ್ಲಿ ಅವರ ಉಪಸ್ಥಿತಿ ಇದ್ದೇ ಇರುತ್ತದೆ. ಅಲ್ಲದೇ, ದಿನಕ್ಕೊಂದು ವೇಷ ಹಾಕಿಕೊಂಡು ಬಂದು ಪ್ರೇಕ್ಷಕರಿಗೆ ಮನರಂಜನೆಯನ್ನು ಕೊಡುತ್ತಲೇ ಇರುತ್ತಾರೆ. ಎಲ್ಲರೊಂದಿಗೆ ಬೆರೆಯುವುದು, ನಗಿಸೋದು, ಅಳಿಸೋದು ಇದು ಅರುಣ್ ಸಾಗರ್ ಗುಣ. ಆದರೆ ಸೋಮವಾರ ಇದಾವುದೂ ಕಾಣಿಸಿಕೊಳ್ಳಲೇ ಇಲ್ಲ. ಹಾಗಾಗಿ ಅರುಣ್ ಸಾಗರ್ ಅನುಪಸ್ಥಿತಿ ಬಿಗ್ ಬಾಸ್ ಮನೆಯಲ್ಲಿ ಎದ್ದು ಕಾಣುತ್ತಿತ್ತು. ಇದನ್ನೂ ಓದಿ: ಭಾರತದಲ್ಲಿ 150 ಕೋಟಿಗೂ ಅಧಿಕ ಗಳಿಕೆ ಮಾಡಿದ ‘ಅವತಾರ್ 2’ ಸಿನಿಮಾ

ಈ ವಾರ ಬಿಗ್ ಬಾಸ್ ಮನೆಯಿಂದ ಇಬ್ಬರು ಎಲಿಮಿನೇಟ್ ಆಗುತ್ತಾರೆ ಎನ್ನುವ ಮಾಹಿತಿ ಇತ್ತು. ಈಗಾಗಲೇ ಅನುಪಮಾ ಗೌಡ ಮನೆಯಿಂದ ಬಂದಾಗಿದೆ. ಸಿಕ್ರೇಟ್ ಆಗಿ ಅರುಣ್ ಸಾಗರ್ ಅವರನ್ನೂ ಮನೆಯಿಂದ ಕಳುಹಿಸಿ ಬಿಟ್ಟರಾ ಅನ್ನುವ ಅನುಮಾನ ಕೂಡ ಮೂಡಿದೆ. ಆದರೆ, ಸಿಕ್ಕಿರುವ ಮಾಹಿತಿ ಪ್ರಕಾರ ಅರುಣ್ ಸಾಗರ್ ಮನೆಗೂ ಬಂದಿಲ್ಲ. ಹಾಗಾಗಿ ಅವರು ಆರೋಗ್ಯದಲ್ಲಿ ಏರುಪೇರು ಆಗಿದೆ ಎನ್ನುವ ಚರ್ಚೆ ಕೂಡ ಶುರುವಾಗಿದೆ. ಅಥವಾ ಸಿಕ್ರೇಟ್ ರೂಮ್ ನಲ್ಲಿ ಅವರನ್ನು ಇಡಲಾಗಿದೆ ಎನ್ನುವ ಮಾಹಿತಿಯೂ ಸಿಕ್ಕಿಲ್ಲ.

ಒಂದೊಂದು ಸಾರಿ ಬಿಗ್ ಬಾಸ್ ಭಾರೀ ಗೇಮ್ ಪ್ಲ್ಯಾನ್ ಮಾಡಲಾಗುತ್ತದೆ. ಇದ್ದಕ್ಕಿದ್ದಂತೆಯೇ ಮನೆ ಒಬ್ಬರ ಸದಸ್ಯರನ್ನು ಅರ್ಧಕ್ಕೆ ಮನೆಯಿಂದ ಕಳುಹಿಸಿ, ಅವರನ್ನು ಸಿಕ್ರೇಟ್ ರೂಮ್ ನಲ್ಲಿ ಇಡಲಾಗುತ್ತದೆ. ಆದರೆ, ಅದನ್ನು ಪ್ರೇಕ್ಷಕರಿಗೆ ತೋರಿಸುತ್ತಾರೆ. ಅರುಣ್ ಸಾಗರ್ ವಿಷಯದಲ್ಲಿ ಏನಾಯಿತು ಎನ್ನುವ ಗೊಂದಲ ನೋಡುಗರದ್ದು. ಅರುಣ್ ಸಾಗರ್ ಎಲ್ಲಿ ಹೋದರು? ಏನು ಆಯಿತು ಎನ್ನುವ ಕುರಿತು ಬಹುಶಃ ಇವತ್ತು ಸ್ಪಷ್ಟತೆ ಸಿಗಬಹುದು. ಮಗಳಿಗೆ ಹುಷಾರಿಲ್ಲದ ಕಾರಣ, ಮಗಳನ್ನು ನೋಡಲು ಹೋಗಿರಬಹುದಾ ಎಂದು ಹೇಳಲಾಗುತ್ತಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *