ವಿಧಾನಸಭೆಯಿಂದ ಪೀಠೋಪಕರಣ ಮನೆಗೆ ಹೊತ್ತೊಯ್ದ ಮಾಜಿ ಸ್ಪೀಕರ್ ನೇಣಿಗೆ ಶರಣು

Public TV
1 Min Read

ಹೈದರಾಬಾದ್: ವಿಧಾನಸಭೆಯಿಂದ ಪೀಠೋಪಕರಣ ಮನೆಗೆ ಹೊತ್ತೊಕೊಂಡು ಹೋಗಿದ್ದಾರೆ ಎಂಬ ಆರೋಪ ಹೊತ್ತಿದ್ದ ಆಂಧ್ರ ಪ್ರದೇಶದ ಮಾಜಿ ವಿಧಾನಸಭೆ ಸ್ಪೀಕರ್ ಕೊಡೆಲ ಶಿವಪ್ರಸಾದ್ ರಾವ್ ಅವರು ತಮ್ಮ ಹೈದರಾಬಾದ್‍ನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

72 ವರ್ಷದ ಶಿವಪ್ರಸಾದ್ ಬೆಳಗ್ಗೆ ತಿಂಡಿ ತಿಂದು ತಮ್ಮ ರೂಮ್‍ಗೆ ಹೋಗಿದ್ದಾರೆ. ನಂತರ ಅವರ ರೂಮ್ ಬಿಟ್ಟು ಬಾರದೆ ಇರುವುದನ್ನು ಗಮನಿಸಿದ ಅವರ ಮನೆಯವರು ರೂಮ್ ಒಳಗೆ ಹೋಗಿ ನೋಡಿದಾಗ ಅವರು ಅವರ ರೂಮ್‍ನ ಸೀಲಿಂಗ್ ಫ್ಯಾನ್‍ಗೆ ನೇಣು ಹಾಕಿಕೊಂಡಿದ್ದಾರೆ. ತಕ್ಷಣ ಅವರನ್ನು ಹೈದರಾಬಾದ್‍ನ ಬಸವತಾರಕಂ ಆಸ್ಪತ್ರೆಗೆ ಸೇರಿಸಿದರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ವೈ.ಎಸ್‍.ಆರ್‍.ಪಿ ಪಕ್ಷದವರು ಶಿವಪ್ರಸಾದ್ ಅವರ ಕುಟುಂಬದ ಸದಸ್ಯರ ವಿರುದ್ಧ ದೂರು ನೀಡಿದ್ದ ಕಾರಣ ಅವರು ತುಂಬ ಅವಮಾನಕ್ಕೆ ಒಳಗಾಗಿದ್ದರು. ಅವರ ಕುಟುಂಬ ಸದಸ್ಯರಿಗೆ ಕೋರ್ಟ್ ಜಾಮೀನು ನೀಡಿದ್ದರೂ ಶಿವಪ್ರಸಾದ್ ಆ ವಿಚಾರದಲ್ಲಿ ತುಂಬಾ ಖಿನ್ನತೆಗೆ ಒಳಗಾಗಿದ್ದರು. ಈ ವಿಚಾರಕ್ಕೆ ಮನನೊಂದ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಇದನ್ನು ಓದಿ: ವಿಧಾನಸಭೆಯಲ್ಲಿನ ಕಂಪ್ಯೂಟರ್, ಎಸಿ, ಪೀಠೋಪಕರಣಗಳನ್ನು ಮನೆಗೆ ಹೊತ್ತೊಯ್ದ ಮಾಜಿ ಸ್ಪೀಕರ್

1983 ರಲ್ಲಿ ಎನ್.ಟಿ ರಾಮರಾವ್ ಅವರು ತೆಲುಗು ದೇಶಂ ಪಕ್ಷ (ಟಿಡಿಪಿ) ಪಕ್ಷ ಸ್ಥಾಪನೆ ಮಾಡಿದಾಗ ಶಿವಪ್ರಸಾದ್ ರಾಜಕೀಯಕ್ಕೆ ಕಾಲಿಟ್ಟಿದ್ದರು ಮತ್ತು ಪಕ್ಷದಲ್ಲಿ ಹಿರಿಯ ನಾಯಕ ಎಂದು ಗುರುತಿಸಿಕೊಂಡಿದ್ದರು. ಆರು ಬಾರಿಯ ಶಾಸಕನಾಗಿ ಸೇವೆಸಲ್ಲಿಸಿರುವ ಅವರು ಐದು ಬಾರಿ ನರಸಾರೋಪೇಟೆ ಕ್ಷೇತ್ರದಿಂದ ಮತ್ತು 2014 ರಲ್ಲಿ ಒಂದು ಬಾರಿ ಸಟ್ಟೇನಪಳ್ಳಿಯಿಂದ ಗೆದ್ದಿದ್ದಾರೆ. ಅನೇಕ ಬಾರಿ ಸಚಿವರಾಗಿಯೂ ಸೇವೆ ಸಲ್ಲಿಸಿದ ಶಿವಪ್ರಸಾದ್ 2014 ರ ಅವಧಿಯಲ್ಲಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದಾರೆ.

ಸ್ಪೀಕರ್ ಆಗಿ ತಮ್ಮ ಅವದಿ ಮುಗಿದ ನಂತರ ಅವರು ವಿಧಾನಸಭೆಯಲ್ಲಿರುವ ಕಂಪ್ಯೂಟರ್ ಮತ್ತು ಎಸಿ ಹಾಗೂ ಪೀಠೋಪಕರಣಗಳನ್ನು ಮನೆಗೆ ಹೊತ್ತೊಯ್ದಿದ್ದಾರೆ ಎಂಬ ಆರೋಪವು ಶಿವಪ್ರಸಾದ್ ರಾವ್ ವಿರುದ್ಧ ಕೇಳಿ ಬಂದಿತ್ತು.

Share This Article
Leave a Comment

Leave a Reply

Your email address will not be published. Required fields are marked *