ಗರಂ ಆದ ಸಮಂತಾ: ಶಾಂತ ಸ್ವಭಾವ ಕೆಣಕಿದವರಿಗೆ ಖಡಕ್ ಉತ್ತರ

Public TV
1 Min Read

ಟಿ ಸಮಂತಾ ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿದ್ದರೂ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಅವರನ್ನು ಪ್ರತಿಕ್ಷಣವೂ ಒಂದಿಲ್ಲೊಂದು ಕಾರಣಕ್ಕಾಗಿ ಟೀಕೆ ಮಾಡುತ್ತಲೇ ಇರುತ್ತಾರೆ. ನಾಗಚೈತನ್ಯರಿಂದ ದೂರವಾದ ನಂತರ ಇದೆಲ್ಲವೂ ಆಗುತ್ತಿರುವುದರಿಂದ ಈವರೆಗೂ ಅವರೂ ಯಾವುದಕ್ಕೂ ಪ್ರತಿಕ್ರಿಯಿಸಿದೇ ತಮ್ಮ ಪಾಡಿಗೆ ತಾವು ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ. ಇದನ್ನೂ ಓದಿ : ಪ್ಲಾಸ್ಟಿಕ್ ಸುತ್ತಿಕೊಂಡು ಬಂದ ಉರ್ಫಿ ಜಾವೇದ್ : ಕಾಸ್ಟ್ಯೂಮ್ ಡಿಸೈನರ್ ಹುಡುಕುತ್ತಿದ್ದಾರೆ ನೆಟ್ಟಿಗರು

ಈ ನಡುವೆ ಅವರ ಮಾಡುತ್ತಿರುವ ಪಾತ್ರಗಳು, ಅವರು ಕಳೆಯುತ್ತಿರುವ ಖಾಸಗಿ ಕ್ಷಣಗಳನ್ನು ಗುರಿಯಾಗಿಟ್ಟುಕೊಂಡು ಟ್ರೋಲ್ ಮಾಡಲಾಗುತ್ತಿದೆ. ಅವರು ಧರಿಸುವ ಕಾಸ್ಟ್ಯೂಮ್ ಬಗ್ಗೆಯೂ ಕೆಟ್ಟದ್ದಾಗಿ ಕಾಮೆಂಟ್ ಮಾಡಲಾಗುತ್ತಿದೆ. ಇಷ್ಟೆಲ್ಲ ಅವರನ್ನು ಟಾರ್ಗೆಟ್ ಮಾಡುತ್ತಿದ್ದರೂ ಈವರೆಗೂ ಯಾವುದಕ್ಕೂ ಅವರು ರಿಯ್ಯಾಕ್ಟ್ ಮಾಡಿರಲಿಲ್ಲ. ಇದನ್ನೂ ಓದಿ : ಕನ್ನಡ ಚಿತ್ರರಂಗವನ್ನು ರಾಷ್ಟ್ರಮಟ್ಟಕ್ಕೆ ತಗೆದುಕೊಂಡು ಹೋದ ಮೊದಲಿಗರಾರು? ಹೀಗಿದೆ ನಟ ಜಗ್ಗೇಶ್ ಉತ್ತರ

ನಾಗಚೈತನ್ಯರಿಂದ ದೂರವಾದ ನಂತರ ಅತೀ ಹೆಚ್ಚು ಮಾನಸಿಕ ಹಿಂಸೆಯನ್ನು ಅನುಭವಿಸಿದ ಈ ನಟಿ ಅದರಿಂದ ಆಚೆ ಬರುವುದಕ್ಕಾಗಿ ಏನೆಲ್ಲ ಕಸರತ್ತು ಮಾಡಿದರು. ಅದಕ್ಕೂ ಅವರು ಟೀಕೆಯನ್ನು ಎದುರಿಸಬೇಕಾಯಿತು. ಪುಷ್ಪಾ ಸಿನಿಮಾದ ಹಾಡು ಬಂದಾಗಲಂತೂ ಮುಗಿಬಿದ್ದು ಕೆಟ್ಟದಾಗಿ ಕೆಲವರು ಕಾಮೆಂಟ್ ಮಾಡಿದರು. ಇದನ್ನೂ ಓದಿ :  ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕನ ವಿರುದ್ಧ ಕಿಡಿಕಾರಿದ ಸಿಖ್ ಸಂಘ

ಇಷ್ಟೆಲ್ಲ ಹಿಂಸೆಗಳನ್ನು ಈವರೆಗೂ ತಡೆದುಕೊಂಡಿದ್ದ ಸಮಂತಾ, ಇದೀಗ ಏಕಾಏಕಿಯಾಗಿ ಗರಂ ಆಗಿದ್ದಾರೆ. ಏಪ್ರಿಲ್ 22 ರಂದು ಸಂಜೆ 5.30ಕ್ಕೆ ಟ್ವಿಟ್ ಮಾಡಿರುವ ಅವರು, ‘ಮೌನ ಮತ್ತು ತಾಳ್ಮೆಯನ್ನು ಅಜ್ಞಾನ ಎಂದು ತಿಳಿದುಕೊಳ್ಳಬಾರದು. ಅದು ದೌರ್ಬಲ್ಯ ಕೂಡ ಅಲ್ಲ. ನನ್ನೀ ಮೌನವನ್ನು ಅಜ್ಞಾನವೆಂದು ತಿಳಿದುಕೊಂಡಿದ್ದರೆ, ನನ್ನ ಶಾಂತ ಸ್ವಭಾವವನ್ನೂ ಸ್ವೀಕಾರವೆಂದು, ದಯೆಯನ್ನು ದೌರ್ಬಲ್ಯ ಎಂದು ತಪ್ಪಾಗಿ ಭಾವಿಸಬೇಡಿ’ ಎಂದು ಖಡಕ್ಕಾಗಿಯೇ ಸಂದೇಶ ರವಾನಿಸಿದ್ದಾರೆ. ಈ ಖಡಕ್ ಸಂದೇಶ ಯಾರಿಗೆ ಎಂದು ಅವರು ಹೇಳದೇ ಇದ್ದರೂ, ಅರ್ಥ ಮಾಡಿಕೊಳ್ಳುವವರು ಖಂಡಿತಾ ಅರ್ಥ ಮಾಡಿಕೊಳ್ಳುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *