ಸ್ಮಶಾನದಲ್ಲಿ ಗುಂಡು, ತುಂಡು ಪಾರ್ಟಿ – ಸ್ನೇಹಿತರಿಂದಲೇ ಕೊಲೆಯಾದ ಯುವಕ

Public TV
2 Min Read

ಕೋಲಾರ: ಶುಕ್ರವಾರ ಇಡೀ ದಿನ ಸ್ನೇಹಿತರೊಂದಿಗೆ ಗುಂಡು-ತುಂಡು ಪಾರ್ಟಿ ಮಾಡಿ ಕುಡಿತದ ನಶೆ ನೆತ್ತಿಗೇರಿದ ಪರಿಣಾಮ ಕಳೆದ ರಾತ್ರಿ ಯುವಕನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಕಾರಹಳ್ಳಿಯ ರುದ್ರಭೂಮಿಯಲ್ಲಿ ಶುಕ್ರವಾರ ರಾತ್ರಿ ಕೆರೆಕೋಡಿ ಗ್ರಾಮದ ಯುವಕ 23 ವರ್ಷದ ಹರೀಶ್‍ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಶುಕ್ರವಾರ ದಿನವಿಡೀ ಸ್ಮಶಾನದಲ್ಲಿ ಪಾರ್ಟಿ, ಮೋಜು ಮಸ್ತಿ ಮಾಡಿರುವ 6 ಜನ ಯುವಕರು ತಡರಾತ್ರಿ ಕುಡಿದ ಅಮಲಿನಲ್ಲಿ ಸಂತೋಷ್ ತಲೆ ಮೇಲೆ ಕಲ್ಲು ಎತ್ತು ಹಾಕಿ ಕೊಲೆ ಮಾಡಿದ್ದಾರೆ. ಇದನ್ನೂ ಓದಿ: ವಿಧ್ವಂಸಕ ಕೃತ್ಯಗಳಿಗೆ ಕಾಂಗ್ರೆಸ್ ಹೊಣೆ: ಆರ್.ಅಶೋಕ್

ಏನಿದು ಘಟನೆ?
ಕೂಲಿ ಕೆಲಸ ಮಾಡುವ ವೆಂಕಟೇಶ್ ಮತ್ತು ಶಾಂತಮ್ಮ ದಂಪತಿಯ ಮಗ ಹರೀಶ್ ಗಾರೆ ಕೆಲಸ ಮಾಡಿಕೊಂಡು ಬಂದ ಹಣದಲ್ಲಿ ಗುಂಡು-ತುಂಡು ಪಾರ್ಟಿ ಮಾಡಿಕೊಂಡು ಸ್ನೇಹಿತರ ಜೊತೆ ಓಡಾಡಿಕೊಂಡಿದ್ದ. ಶುಕ್ರವಾರ ಬೆಳಗ್ಗೆ ಮನೆಯಿಂದ ಹರೀಶ್ ಪಾತ್ರೆ ತೆಗೆದುಕೊಂಡು ಹೋಗಿ ಸ್ಮಶಾನದಲ್ಲಿಯೇ ಸ್ನೇಹಿತರ ಜೊತೆ ಪಾರ್ಟಿಯನ್ನು ಮಾಡಿದ್ದಾನೆ.

ಸಂಜೆ 4 ಗಂಟೆಗೆ ಮನೆಗೆ ಪಾತ್ರೆ ಕೊಟ್ಟು, ಮನೆಯಿಂದ ಬಂದು ಮತ್ತೆ ಸ್ನೇಹಿತರ ಜೊತೆ ಹೋಗಿದ್ದಾನೆ. ರಾತ್ರಿ ವೇಳೆಗೆ ಸ್ನೇಹಿತರ ಜೊತೆ ಗಲಾಟೆ ಮಾಡಿಕೊಂಡು ಯಾರೋ ಬಿಯರ್ ಬಾಟಲ್‍ನಲ್ಲಿ ತಲೆಗೆ ಹೊಡೆದು ಕಲ್ಲನ್ನು ತಲೆ ಮೇಲೆ ಹಾಕಿ ಸಾಯಿಸಿದ್ದಾರೆ. ಇನ್ನೂ ರಾತ್ರಿ 7 ಗಂಟೆಯಲ್ಲಿ ತಾಯಿ ಶಾಂತಮ್ಮ ಮಗ ಮನೆಗೆ ಬಂದಿಲ್ಲವೆಂದು ಹರೀಶ್ ಮೊಬೈಲ್‍ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದೆ.

ಸ್ಮಶಾನದಲ್ಲಿ ಶವ
ರಾತ್ರಿ 10 ಗಂಟೆಯವರೆಗೂ ಹರೀಶ್ ಮೊಬೈಲ್‍ಗೆ ಫೋನ್ ಮಾಡಿದರೂ ಸಹ ಸಂಪರ್ಕಕ್ಕೆ ಸಿಗದ ಕಾರಣ ಸ್ನೇಹಿತರ ಜೊತೆ ಇರಬಹುದೆಂದು ಶಾಂತಮ್ಮ ಸುಮ್ಮನಾಗಿದ್ದಾಳೆ. ಆದ್ರೆ ಬೆಳಗ್ಗೆ ಸ್ಮಶಾನದಲ್ಲಿ ಕೊಲೆಯಾಗಿರುವ ಮಾಹಿತಿ ಸಿಕ್ಕಿದೆ. ಇತ್ತೀಚಿಗೆ ಹರೀಶ್ ಗ್ರಾಮದಲ್ಲಿ ಬೈಕ್ ಓಡಿಸುವಾಗ ಗ್ರಾಮಸ್ಥರ ಜೊತೆ ಆಗಾಗ್ಗೆ ಕಿರಿಕ್ ಮಾಡಿಕೊಳ್ಳುತ್ತಿದ್ದ, ಜೊತೆಗೆ ಯುವಕ ರತ್ನನ್, ಹರೀಶ್‍ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನುವುದು ಪೋಷಕರ ಆರೋಪವಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಕೆಜಿಎಫ್ ಎಸ್‍ಪಿ ಧರಣಿ ದೇವಿ ಪರಿಶೀಲನೆ ನಡೆಸಿದ್ದು, ನಿನ್ನೆ ದಿನವಿಡೀ ಹರೀಶ್ ಜೊತೆ ಗುಂಡು ತುಂಡು ಪಾರ್ಟಿ ಮಾಡಿದ ಸ್ನೇಹಿತರ ಪಟ್ಟಿ ಹಾಗೂ ಈ ಹಿಂದೆ ಬೆದರಿಕೆ ಹಾಕಿದ್ದ ಯುವಕನ ಜಾಡು ಹಿಡಿದು ಬಂಗಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಸೈನಿಕರಿಗಾಗಿ ವೈದ್ಯಕೀಯ ಸಲಕರಣೆ ರವಾನೆ ಮಾಡಿದ ಇನ್ಫೋಸಿಸ್ ಕಂಪನಿ ಸಹ-ಸಂಸ್ಥಾಪಕ ಕೆ.ದಿನೇಶ್ 

Share This Article
Leave a Comment

Leave a Reply

Your email address will not be published. Required fields are marked *