ಸಿಎಂ ಸೂಚನೆ ಪಾಲನೆ – ಆಂಜನೇಯ ದೇವಾಲಯಕ್ಕೆ ಉಡುಗೊರೆ ಸಮರ್ಪಣೆ

Public TV
1 Min Read

ವಿಜಯಪುರ: ಸಿಎಂ ಬಸವರಾಜ ಬೊಮ್ಮಾಯಿ ಸೂಚನೆಯಂತೆ ಬೆಳ್ಳಿ ಗದೆಯನ್ನು ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ನಿಗಮ ಅಧ್ಯಕ್ಷ ವಿಜ್ಜುಗೌಡಾ ಪಾಟೀಲ್ ದೇವಸ್ಥಾನಕ್ಕೆ ಹಸ್ತಾಂತರಿಸಿದ್ದಾರೆ.

ಜಿಲ್ಲೆಯ ವಿಜಯಪುರ, ಬಬಲೇಶ್ವರ, ಸಿಂದಗಿ ಮತಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದರು. ಇದೇ ವೇಳೆ ಬೊಮ್ಮಾಯಿ ಅವರಿಗೆ ವಿಜ್ಜುಗೌಡಾ ಪಾಟೀಲ್ ಅವರು ಬೆಳ್ಳಿಯ ಗದೆ ಉಡುಗೊರೆ ನೀಡಿದ್ದರು. ಇದನ್ನೂ ಓದಿ: ಕೊರೊನಾದೊಂದಿಗೆ ಪ್ರತಿಪಕ್ಷಗಳು ಸ್ನೇಹ ಬೆಳೆಸುತ್ತಿದೆ: ಯೋಗಿ ಆದಿತ್ಯನಾಥ್

ಬೊಮ್ಮಾಯಿ ಅವರು, ನಾನು ಯಾವುದೇ ಕಾರ್ಯಕ್ರಮದಲ್ಲಿ ನೀಡಿದ ಬೆಳ್ಳಿಯ ಉಡುಗೊರೆಯನ್ನು ಕೊಂಡೊಯ್ಯೋಲ್ಲ. ಅದಕ್ಕೆ ಇದನ್ನು ಯಾವುದಾದರು ಆಂಜನೇಯ ದೇವಸ್ಥಾನಕ್ಕೆ ನೀಡಿ ಎಂದು ಸೂಚಿಸಿದ್ದರು.

ಸಿಎಂ ಸೂಚನೆಯನ್ನ ಚಾಚು ತಪ್ಪದೆ ವಿಜ್ಜುಗೌಡಾ ಪಾಟೀಲ್ ಅವರು ಪಾಲಿಸಿದ್ದು, ಆ ಗದೆಯನ್ನು ವಿಜಯಪುರ ನಗರದ ಮದಲಾ ಮಾರುತಿ ದೇವಸ್ಥಾನಕ್ಕೆ ಹಸ್ತಾಂತರಿಸಿದರು. ಇದನ್ನೂ ಓದಿ: ಹಾಡಿನ ಚಿತ್ರೀಕರಣದ ವೇಳೆ ಗಾಯಕಿಯ ಮುಖಕ್ಕೆ ಕಚ್ಚಿದ ಹಾವು!

ಈ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಭೀಮಾಶಂಕರ ಹದನೂರ, ವಿಜಯ ಜೋಶಿ, ವಿನಾಯಕ್ ದಹಿಂದೆ, ಶಾಶ್ವತಗೌಡ ಪಾಟೀಲ್ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *