ವೈರಿಗಳ ಕಾಟದಲ್ಲಿ ಬದ್ಕೋಕಾಗ್ತಿಲ್ಲ: ಹೆಚ್‍.ಡಿ.ರೇವಣ್ಣ

Public TV
1 Min Read

ಹಾಸನ: ನಮಗೆ ವೈರಿಗಳ ಕಾಟ ಹೆಚ್ಚು. ದೇವರ ದರ್ಶನ ಮಾಡದಿದ್ರೆ ವೈರಿಗಳ ಕಾಟಕ್ಕೆ ಬದುಕಲು ಆಗಲ್ಲ. ಹೀಗಾಗಿ ಬೆಳಗ್ಗೆ ಎದ್ದು ದೇವರ ದರ್ಶನ ಮಾಡುತ್ತೇನೆ ಎಂದು ಮಾಜಿ ಸಚಿವ ಹೆಚ್‍ಡಿ.ರೇವಣ್ಣ ಹೇಳಿದ್ದಾರೆ. ಇದನ್ನೂ ಓದಿ: ಉಪ ಚುನಾವಣೆ ಗೆಲ್ಲುವ ವಿಶ್ವಾಸ ಇದೆ: ದೇವೇಗೌಡ

ಹಾಸನದಲ್ಲಿ ಮಾತನಾಡಿದ ಅವರು, ತಾವು ಯಾಕೆ ದೇವರ ಮೇಲೆ ಅಪಾರ ನಂಬಿಕೆ ಇಟ್ಟಿದ್ದೇವೆ ಎಂಬ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ದೇವರ ದರ್ಶನ ಮಾಡದೆ ಹೋದರೆ ನಮಗೆ ವೈರಿಗಳ ಕಾಟ. ವೈರಿಗಳ ಕಾಟದಲ್ಲಿ ಬದುಕಲು ಆಗಲ್ವಲಾ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೆಜಿಎಫ್ 2 ಚಿತ್ರೀಕರಣದ ಫೋಟೋ ವೈರಲ್ 

Revanna

ಬೆಳಿಗ್ಗೆ ಎದ್ದು ಲಕ್ಷ್ಮೀನರಸಿಂಹ ನೋಡಿಕೊಂಡು ಬಂದೆ. ಲಕ್ಷ್ಮೀನರಸಿಂಹ ಅಂದರೆ ಯಾರೇ ಏನೇ ಮಾಟ ಮಾಡಿದರೆ ಅವರಿಗೆ ರಿವರ್ಸ್ ಆಗುತ್ತದೆ. ಇವತ್ತು ಸಾಯಂಕಾಲ ಚಾಮುಂಡಿ ಬೆಟ್ಟಕ್ಕೆ ಹೋಗಿ ಬರೋಣ ಅಂಥಾ ಮಾಡಿದ್ದೀನಿ ಎಂದು ರೇವಣ್ಣ ತಿಳಿಸಿದ್ದಾರೆ. ಇದನ್ನೂ ಓದಿ: ಡಿಎಪಿ,ಪೊಟ್ಯಾಷ್‍ಗಾಗಿ ರಾಜ್ಯದಿಂದ ಕೇಂದ್ರಕ್ಕೆ ಬೊಮ್ಮಾಯಿ ಮನವಿ

Share This Article
Leave a Comment

Leave a Reply

Your email address will not be published. Required fields are marked *