ರಿಲ್ಯಾಕ್ಸ್ ಮೂಡ್‍ನಲ್ಲಿದ್ದ ರೌಡಿಗಳ ಚಳಿ ಬಿಡಿಸಿದ ಕೋಟೆನಾಡಿನ ಲೇಡಿ ಸಿಂಗಂ

Public TV
1 Min Read

– ಅಡ್ಡದಾರಿ ಬಿಟ್ಟು ಕಷ್ಟಪಟ್ಟು ದುಡಿದು ಜೀವನ ಕಟ್ಟಿಕೊಳ್ಳಿ

ಚಿತ್ರದುರ್ಗ: ಕೋಟೆನಾಡಿನಲ್ಲಿ ನಡೆಯುತಿದ್ದ ಮರಳು ದಂಧೆ, ಓಸಿ, ಮಟ್ಕಾ ಹಾಗೂ ಜೂಜುಕೋರರ ಸಿಂಹ ಸ್ವಪ್ನ ಎನಿಸಿದ್ದ ಎಸ್‍ಪಿ ಡಾ. ಅರುಣ್ ವರ್ಗಾವಣೆಯಾಗುತ್ತಿದ್ದಂತೆ ದಂಧೆಕೋರರು ಹಾಗೂ ರೌಡಿಶೀಟರ್‌ಗಳು ಫುಲ್ ರಿಲಾಕ್ಸ್ ಮೂಡ್‍ನಲ್ಲಿದ್ದರು. ಇದೀಗ ಕೋಟೆನಾಡಿನ ಲೇಡಿ ಸಿಂಗಂ ರಾಧಿಕಾ ಅವರ ಚಳಿ ಬಿಡಿಸಿದ್ದಾರೆ.

ಕಳೆದ ಒಂದು ವಾರದ ಹಿಂದೆಯಷ್ಟೇ ಡ್ಯೂಟಿ ರಿಪೋರ್ಟ್ ಮಾಡಿಕೊಂಡಿರುವ ಚಿತ್ರದುರ್ಗದ ನೂತನ ಎಸ್‍ಪಿ ರಾಧಿಕಾ ಅವರು ಇಂದು ರೌಡಿಶೀಟರ್‌ಗಳ ಪರೇಡ್ ನಡೆಸಿದರು. ಈ ವೇಳೆ ರೌಡಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನೀವು ಸರಿ ದಾರಿಯಲ್ಲಿ ನಡೆದರೆ ಸರಿ, ಇಲ್ಲಾಂದ್ರೆ ನಾನು ಮಾತ್ರ ನಿಮ್ಮನ್ನು ಸುಮ್ಮನೆ ಬಿಡಲ್ಲ ಎಂದು ಖಡಕ್ ವಾರ್ನ್ ಕೊಟ್ಟಿದ್ದಾರೆ.

ನಗರದ ಡಿ.ಆರ್.ಗ್ರೌಂಡ್‍ನಲ್ಲಿ ಹಮ್ಮಿಕೊಂಡಿದ್ದ ರೌಡಿಗಳ ಪರೇಡ್‍ನಲ್ಲಿ ಭಾಗವಹಿಸಿ ರೌಡಿಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಒಳ್ಳೆತನದಿಂದ ಇದ್ದು ಸರಿ ದಾರಿಯಲ್ಲಿ ನಡೆಯುತ್ತೀನಿ ಅಂದರೆ ನಮ್ಮ ಸಪೋರ್ಟ್ ಇರುತ್ತೆ. ಮತ್ತೆ ಏನಾದರು ಬಾಲ ಬಿಚ್ಚಿ ತಮ್ಮ ಹಳೆ ಕಸುಬನ್ನು ಮುಂದವರಿಸಿದರೆ, ನಾನು ಮಾತ್ರ ನಿಮ್ಮನ್ನು ಸುಮ್ಮನೆ ಬಿಡಲ್ಲ. ಹಾಗೆಯೇ ಅಡ್ಡದಾರಿಗಳನ್ನೆಲ್ಲಾ ಬಿಟ್ಟು ಕಷ್ಟಪಟ್ಟು ದುಡಿದು ತಮ್ಮ ಜೀವನವನ್ನು ಕಟ್ಟಿಕೊಳ್ಳಿ ಎಂದು ಸೂಚಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *