ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇನ್ನೊಂದು ವಾರ ಬಿಸಿಲ ಝಳ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಈಗಾಗಲೇ ಕರುನಾಡು ಬಿಸಿಲ ಧಗೆಗೆ ಬಳಲಿ ಬೆಂಡಾಗಿದ್ದು, ರಣಬೇಸಿಗೆಗೆ ಜನ ಹೈರಾಣಾಗಿದ್ದಾರೆ. ರಾಯಚೂರು ಹಾಗೂ ಕಲಬುರಗಿಯಲ್ಲಿ ಉಷ್ಣಾಂಶ 41 ಡಿಗ್ರಿ ದಾಟಿದೆ. ಬೆಂಗಳೂರಿನಲ್ಲಿ 36-37 ಡಿಗ್ರಿ ಉಷ್ಣಾಂಶವಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇನ್ನೊಂದು ವಾರ 40-42 ಡಿಗ್ರಿ ಉಷ್ಣಾಂಶ ಇರಲಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.



ನಗರಗಳ ಹವಾಮಾನ ವರದಿ
ಬೆಂಗಳೂರು: 35-22
ಮಂಗಳೂರು: 33-27
ಶಿವಮೊಗ್ಗ: 37-23
ಬೆಳಗಾವಿ: 36-24
ಮೈಸೂರು: 36-23

ಮಂಡ್ಯ: 37-23
ಮಡಿಕೇರಿ: 33-21
ರಾಮನಗರ: 36-23
ಹಾಸನ: 34-22
ಚಾಮರಾಜನಗರ: 36-22
ಚಿಕ್ಕಬಳ್ಳಾಪುರ: 36-22

ಕೋಲಾರ: 34-22
ತುಮಕೂರು: 36-23
ಉಡುಪಿ: 33-27
ಕಾರವಾರ: 31-28
ಚಿಕ್ಕಮಗಳೂರು: 33-22
ದಾವಣಗೆರೆ: 37-24

ಹುಬ್ಬಳ್ಳಿ: 38-24
ಚಿತ್ರದುರ್ಗ: 37-24
ಹಾವೇರಿ: 37-24
ಬಳ್ಳಾರಿ: 39-27
ಗದಗ: 38-26
ಕೊಪ್ಪಳ: 38-26

ರಾಯಚೂರು: 40-28
ಯಾದಗಿರಿ: 39-28
ವಿಜಯಪುರ: 39-28
ಕಲಬುರಗಿ: 39-28
ಬಾಗಲಕೋಟೆ: 39-27

