IPL 2026 – ಚೆನ್ನೈ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಸೋಲಿಗೆ ಅಂಪೈರ್ ನಿರ್ಣಯ ಕಾರಣವಾಯ್ತಾ?

2 Min Read

ಚೆನ್ನೈ: ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ 2026ರ ಐಪಿಎಲ್ ಲೀಗ್‌ನ 18ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆಲುವು ಸಾಧಿಸಿದೆ. ಈ ಪಂದ್ಯದ ಕೊನೆಯ ಹಂತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಟ್ರಿಸ್ಟನ್ ಸ್ಟಬ್ ಬ್ಯಾಟಿಂಗ್ ವೇಳೆ ಗ್ಲೌಸ್‌ ಬದಲಿಸಲು ಮನವಿ ಮಾಡಿದ್ದರು. ಆದರೆ ಇದಕ್ಕೆ ಅಂಪೈರ್ ಒಪ್ಪಿರಲಿಲ್ಲ. ಇದೀಗ ವಿವಾದಕ್ಕೆ ಕಾರಣವಾಗಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಸೋಲಿಗೆ ಅಂಪೈರ್ ನಿರ್ಣಯ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ.

- Advertisement -

- Advertisement -

ಪಂದ್ಯದಲ್ಲಿ ಸಿಎಸ್‌ಕೆ ನೀಡಿದ್ದ 213 ರನ್‌ಗಳ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಉತ್ತಮ ಆರಂಭ ಪಡೆಯಿತು. ಟ್ರಿಸ್ಟನ್ ಸ್ಟಬ್ ಅವರು ಆಕ್ರಮಣಕಾರಿ ಬ್ಯಾಟಿಂಗ್‌ನಿಂದಾಗಿ ಡೆಲ್ಲಿ ಗೆಲುವಿನತ್ತ ಸಮೀಪಿಸುತ್ತಿತ್ತು. ಇದೇ ಸಮಯದಲ್ಲಿ ಗೆಲುವಿಗೆ 10 ಎಸೆತಗಳಿಗೆ 29 ರನ್‌ಗಳ ಅಗತ್ಯವಿತ್ತು. ಈ ಸಮಯದಲ್ಲಿ ಸ್ಟಬ್ ಗ್ಲೌಸ್ ಬದಲಾಯಿಸಲು ಅಂಪೈರ್ ಬಳಿ ಮನವಿ ಮಾಡಿದ್ದರು. ಇದಕ್ಕೆ ಅಂಪೈರ್‌ ನಿರಾಕರಿಸಿದ್ದರು. ಬಳಿಕ ಮುಂದಿನ ಎಸೆತದಲ್ಲಿ ಸ್ಪಬ್ ಔಟ್ ಆಗಿದ್ದರು. ಇದನ್ನೂ ಓದಿ: IPL 2026 | ಸಂಜು ಸಿಡಿಲಬ್ಬರದ ಶತಕ – ಹ್ಯಾಟ್ರಿಕ್‌ ಸೋಲಿನ ಬಳಿಕ ಗೆಲುವಿನ ಖಾತೆ ತೆರೆದ ಚೆನ್ನೈ

- Advertisement -

ಇದನ್ನು ಪೆವಿಲಿಯನ್‌ನಲ್ಲಿದ್ದ ನಿತೀಶ್ ರಾಣಾ ಹಾಗೂ ಬ್ಯಾಟಿಂಗ್ ಕೋಚ್ ವೇಣುಗೋಪಾಲ್ ಗಮನಿಸಿ ಅಂಪೈರ್‌ ಜೊತೆ ಚರ್ಚಿಸಿದ್ದರು. ಅಂಪೈರ್ ಅವರ ಈ ನಿರ್ಣಯ ಸೋಲಿಗೆ ಕಾರಣವಾಯಿತಾ ಎಂಬ ಪ್ರಶ್ನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಸಿಎಸ್‌ಕೆ ಅಭಿಮಾನಿಗಳು ಎತ್ತಿದ್ದಾರೆ.

- Advertisement -

ಸ್ಟಬ್ 38 ಎಸೆತಗಳಲ್ಲಿ 4 ಬೌಂಡರಿ 3 ಸಿಕ್ಸರ್ ಸಹಿತ 60 ರನ್‌ ಗಳನ್ನು ಸಿಡಿಸಿ, ಔಟಾದರು. ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡವು 189 ರನ್‌ ಗಳಿಗೆ ಆಲೌಟ್ ಆಯಿತು. ಈ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆಲ್ಲುವ ಮೂಲಕ ಆವೃತಿಯ ಮೊದಲ ಜಯ ಸಾಧಿಸಿದೆ. ಇದನ್ನೂ ಓದಿ: ಅಯ್ಯರ್‌ ನಾಯಕನ ಆಟಕ್ಕೆ ಒಲಿದ ಜಯ – ಐಪಿಎಲ್‌ನಲ್ಲಿ ವಿಶೇಷ ದಾಖಲೆ ಬರೆದ ಪಂಜಾಬ್‌

ಐಪಿಎಲ್‌ ನಿಯಮದ ಪ್ರಕಾರ ಅಂಪೈರ್‌ ನಿರ್ಧಾರ ಕೈಗೊಂಡಿದ್ದಾರೆ. ನಿಯಮದ ಪ್ರಕಾರ ಒಂದು ಓವರ್‌ನ ಮಧ್ಯದಲ್ಲಿ ಗ್ಲೌಸ್‌ ಹರಿದು ಹೋದರೆ, ಬ್ಯಾಟ್‌ ತುಂಡಾದರೆ ಮಧ್ಯದಲ್ಲಿ ಬದಲಾವಣೆ ಮಾಡಲು ಅನುಮತಿ ನೀಡಲಾಗುತ್ತದೆ. ಮಧ್ಯದಲ್ಲಿ ಕಾರಣವೇ ಇಲ್ಲದೇ ಬ್ಯಾಟ್‌ ಅಥವ ಗ್ಲೌಸ್‌ ಏನನ್ನೂ ಬದಲಾಯಿಸಲು ಅವಕಾಶ ಇರುವುದಿಲ್ಲ.

ಬ್ಯಾಟರ್‌ ಡ್ರಿಂಕ್ಸ್‌ ಬೇಡಿಕೆ ಇಟ್ಟಾಗಲೂ ಅವರು ಫೀಲ್ಡ್‌ ಅಂಪೈರ್‌ಗೆ ಮನವಿ ಮಾಡಿದ ಬಳಿಕ ಓವರ್‌ ಮಗಿದ ಬಳಿಕ ನೀಡಲಾಗುತ್ತದೆ. ಬೌಲಿಂಗ್‌ ತಂಡ 4 ನಿಮಿಷದ ಒಳಗಡೆ ಬೌಲಿಂಗ್‌ ಮಾಡಬೇಕಾಗುತ್ತದೆ.

Share This Article