ಬೆಂಗಳೂರು: KSOU ನಲ್ಲಿ ಏಕತಾ ಮಾನವ ದರ್ಶನ ಅಂತಾರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನದ ಹೆಸರಿನಲ್ಲಿ ವಿಶ್ವವಿದ್ಯಾಲಯವು ಸರ್ಕಾರದ ಶಿಷ್ಟಾಚಾರ ಉಲ್ಲಂಘನೆ ಮಾಡಿದೆ ಎಂಬ ಆರೋಪಕ್ಕೆ KSOU ವಿಶ್ವವಿದ್ಯಾಲಯ ಕುಲಪತಿಗಳು ಸ್ಪಷ್ಟನೆ ನೀಡಿದ್ದಾರೆ. ಯಾವುದೇ ಶಿಷ್ಟಾಚಾರ ಉಲ್ಲಂಘನೆ ಅಗಿಲ್ಲ ಅಂತ ಸರ್ಕಾರಕ್ಕೆ ಪತ್ರ ಬರೆದು KSOU ಕುಲಪತಿಗಳು ಸ್ಪಷ್ಟನೆ ನೀಡಿದ್ದಾರೆ.
ನಿನ್ನೆ ವಿಧಾನ ಪರಿಷತ್ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ರಮೇಶ್ ಬಾಬು ವಿಷಯ ಪ್ರಸ್ತಾಪ ಮಾಡಿದ್ರು. KSOU ನಲ್ಲಿ ಅಂತಾರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನ ಮಾಡಲಾಗ್ತಿದೆ. ಈ ಸಮ್ಮೇಳನಕ್ಕೆ ರಾಜ್ಯ ಸರ್ಕಾರಕ್ಕೆ ಆಹ್ವಾನ ನೀಡಿಲ್ಲ. ಉದ್ದೇಶ ಪೂರ್ವಕವಾಗಿ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿದೆ. ರಾಜ್ಯ ಸರ್ಕಾರದ ಪ್ರತಿನಿಧಿಗಳಿಗೆ ಆಹ್ವಾನ ನೀಡಿಲ್ಲ. ಇದು ನಿಯಮ ಉಲ್ಲಂಘನೆ. ಕೂಡಲೇ KSOU ನಲ್ಲಿ ನಡೆಯುತ್ತಿರೋ ಕಾರ್ಯಕ್ರಮ ರದ್ದು ಮಾಡಬೇಕು. ಉಪ ಕುಲಪತಿಗಳ ವಿರುದ್ದ ಕ್ರಮ ಆಗಬೇಕು ಅಂತ ಒತ್ತಾಯ ಮಾಡಿದ್ರು.
ಇದಕ್ಕೆ ಸಚಿವ ಡಾ. ಸುಧಾಕರ್ ಉತ್ತರ ನೀಡಿ, ಕಾರ್ಯಕ್ರಮ ನಡೆಯೋ ಬಗ್ಗೆ ನಿನ್ನೆ ಮಧ್ಯಾಹ್ನ ನನ್ನ ಗಮನಕ್ಕೆ ಬಂದಿದೆ. ನಾನು ವಿಸಿಗೆ ಮಾಹಿತಿ ಕೇಳಿದಾಗ ನನಗೆ ಮಾಹಿತಿ ಇಲ್ಲ ಅಂತ ಹೇಳಿದ್ದಾರೆ. ಪ್ರಜ್ಞಾ ಪರ್ವ ಎಂಬ ಸಂಸ್ಥೆ ಮೂಲಕ ಇದು ಆಗ್ತಿದೆ. ಶ್ಯಾಮ್ ಪ್ರಸಾದ್ ಮುಖರ್ಜಿ ಸಂಸ್ಥೆಯಿಂದ ಇದನ್ನ ಮಾಡಲಾಗ್ತಿದೆ. ರಾಜ್ಯಪಾಲರನ್ನ ಉದ್ಘಾಟನೆಗೆ ಕರೆಯಲಾಗಿದೆ. ಕೇಂದ್ರ ಶಿಕ್ಷಣ ಸಚಿವರಿಗೆ ಆಹ್ವಾನ ನೀಡಲಾಗಿದೆ. ವಿಶ್ವವಿದ್ಯಾಲಯದಲ್ಲಿ ಈ ಕಾರ್ಯಕ್ರಮ ಮಾಡೋ ಅವಶ್ಯಕತೆ ಇರಲಿಲ್ಲ. ಇದು ನಿಯಮಗಳ ಉಲ್ಲಂಘನೆ ಆಗಿದೆ. ಶಿಷ್ಟಾಚಾರ ಉಲ್ಲಂಘನೆ ಆಗಿದೆ. ಕೇಂದ್ರ ಶಿಕ್ಷಣ ಸಚಿವರು ಬರೋ ಕಾರ್ಯಕ್ರಮ ಇದು. ನನಗೂ ಇದರ ಬಗ್ಗೆ ಮಾಹಿತಿ ಇಲ್ಲ. ಯುನಿವರ್ಸಿಟಿ ಯಲ್ಲಿ ಮಾಡೋ ಅವಶ್ಯಕತೆ ಇರಲಿಲ್ಲ. ಉದ್ದೇಶಪೂರ್ವಕವಾಗಿ ಈ ಕಾರ್ಯಕ್ರಮ ಮಾಡಲಾಗ್ತಿದೆ. ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡೋ ಕೆಲಸ ಆಗಿದೆ. ಹೀಗಾಗಿ ಇದರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಕಾರ್ಯಕ್ರಮ 25-27 ವರೆಗೆ ಇದೆ. ಕಾರ್ಯಕ್ರಮ ರದ್ದು ಆಗಬೇಕು. ನಮ್ಮ ಕ್ಯಾಂಪಸ್ ನಲ್ಲಿ ಈ ಕಾರ್ಯಕ್ರಮ ಮಾಡುವಂತೆ ಇಲ್ಲ. ಕಾರ್ಯಕ್ರಮ ರದ್ದು ಮಾಡುವಂತೆ KSOUಗೆ ಸೂಚನೆ ಕೊಡಲಾಗಿದೆ. ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿರೋ ಬಗ್ಗೆ ತನಿಖೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ತೀವಿ ಅಂತ ಭರವಸೆ ನೀಡಿದ್ರು.
ಸಚಿವರ ಸೂಚನೆ ಮೇರೆಗೆ ಉನ್ನತ ಶಿಕ್ಷಣ ಇಲಾಖೆ ವಿವಿ ಕುಲಪತಿಗಳಿಗೆ ವಿವರಣೆ ನೀಡುವಂತೆ ನೊಟೀಸ್ ನೀಡಿತ್ತು. ನೊಟೀಸ್ ಗೆ KSOU ಕುಲಪತಿಗಳು ವಿವರಣೆ ನೀಡಿದ್ದಾರೆ. ಇದನ್ನೂ ಓದಿ: ಅಜಿತ್ ಪವಾರ್ ಅವರದ್ದು ವಿಮಾನ ದುರಂತವಲ್ಲ ವ್ಯವಸ್ಥಿತ ಕೊಲೆ – ಬೆಂಗಳೂರಲ್ಲಿ ಝೀರೋ ಎಫ್ಐಆರ್ ದಾಖಲು
ಈ ಕಾರ್ಯಕ್ರಮಕ್ಕೂ KSOU ಗೂ ಯಾವುದೇ ಸಂಬಂಧವಿಲ್ಲ. ವಿವಿಯ ಆಡಿಟೋರಿಯಂ ಅನ್ನು ಬಾಡಿಗೆಗೆ ನೀಡಲಾಗಿದೆ. ಬಾಡಿಗೆ ಆಧಾರದಲ್ಲಿ ಆಡಿಟೋರಿಯಂ ನೀಡಿರೋದ್ರೀಂದ ಸಂಪೂರ್ಣ ಜವಾಬ್ದಾರಿ ಆಯೋಜಕರದ್ದೇ ಆಗಿರುತ್ತದೆ. ಹೀಗಾಗಿ ಈ ಕಾರ್ಯಕ್ರಮಕ್ಕೂ ವಿವಿಗೂ ಸಂಬಂಧವಿಲ್ಲ. ಕಾರ್ಯಕ್ರಮ ಖಾಸಗಿ ಆಗಿದ್ದು ವಿವಿಯ ಪಾತ್ರ ಇದರಲ್ಲಿ ಇಲ್ಲ. ಹೀಗಾಗಿ ವಿವಿಯಿಂದ ಯಾರಿಗೂ ಆಹ್ವಾನ ನೀಡಿಲ್ಲ. ಹೀಗಾಗಿ ಶಿಷ್ಟಾಚಾರ ಉಲ್ಲಂಘನೆ ಅನ್ನೋ ಆರೋಪ ಬರೋದಿಲ್ಲ ಅಂತ ಕುಲಪತಿಗಳಿಂದ ಸ್ಪಷ್ಟನೆ ನೀಡಲಾಗಿದೆ. ಇದನ್ನೂ ಓದಿ: ನಂದಿನಿ ಉತ್ಪನ್ನಗಳ ಪ್ರಚಾರಕ್ಕೆ RCB ಜೊತೆ ಒಪ್ಪಂದ – 1 ವರ್ಷಕ್ಕೆ 4.80 ಕೋಟಿ ಕೊಟ್ಟ KMF
ಇನ್ನು ಕಾರ್ಯಕ್ರಮದಲ್ಲಿ KSOU ಪಾತ್ರ ಏನು ಇಲ್ಲ ಮತ್ತು ಯಾವುದೇ ಸಹಕಾರ ನೀಡಿಲ್ಲ. ಸಂಪೂರ್ಣ ಕಾರ್ಯಕ್ರಮ ನಮ್ಮದೇ ಜವಾಬ್ದಾರಿ ಅಂತ ಏಕತಾ ಮಾನವ ದರ್ಶನ ಕಾರ್ಯಕ್ರಮ ಆಯೋಜಕರು ಮುಚ್ಚಳಿಕೆ ಪತ್ರ ಬರೆದುಕೊಟ್ಡಿದ್ದರು. ಇದಲ್ಲದೆ ಕಾರ್ಯಕ್ರಮದಲ್ಲಿ ಉಪ ರಾಷ್ಟ್ರಪತಿಗಳು, ರಾಜ್ಯಪಾಲರು, ಕೇಂದ್ರ ಸಚಿವರು ಕಾರ್ಯಕ್ರಮಕ್ಕೆ ಬರುವ ಕಾರಣ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು, ಪ್ರಾಧ್ಯಾಪಕರು ಭಾಗವಹಿಸಲು ಅವಕಾಶ ಕೊಡಬೇಕು ಅಂತ ಸಂಘಟಕರು ಫೆಬ್ರವರಿ 20 ಮತ್ತು ಮಾರ್ಚ್ 5 ರಂದು KSOU ಕುಲಪತಿಗಳು ಹಾಗೂ ಕಾಲೇಜು ಶಿಕ್ಷಣ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದ್ರು. ಅಲ್ಲದೇ, OOD ಮೇಲೆ ಉಪನ್ಯಾಸಕರು, ಅಧ್ಯಾಪಕರು, ಪ್ರಾಧ್ಯಾಪಕರಿಗೆ ಅವಕಾಶ ಮಾಡಿಕೊಡಬೇಕು ಅಂತ ಮನವಿ ಮಾಡಿದ್ರು. ಪತ್ರದ ಮನವಿ ಮೇಲೆಗೆ ಕಾಲೇಜು ಶಿಕ್ಷಣ ಇಲಾಖೆಯೂ ಪ್ರಾಧ್ಯಾಪಕರು, ಅಧ್ಯಾಪಕರಿಗೆ OOD ಮೇಲೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕೊಟ್ಟಿತ್ತು. ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ರಮೇಶ್ ಬಾಬು ಶಿಷ್ಟಾಚಾರ ಉಲ್ಲಂಘನೆ ಆಗಿದೆ ಅಂತ ಆರೋಪ ಮಾಡಿದ್ರು. ಆರೋಪಕ್ಕೆ ವಿವಿ ಕುಲಪತಿಗಳು ಸ್ಪಷ್ಟನೆ ನೀಡಿ ಯಾವುದೇ ಶಿಷ್ಟಾಚಾರ ಉಲ್ಲಂಘನೆ ಅಗಿಲ್ಲ ಅಂತ ವಿವರಣೆ ಕೊಟ್ಟಿದ್ದಾರೆ.



