ಇರಾನ್‌ ಯುದ್ಧ| ಕಾಂಗ್ರೆಸ್‌ನಲ್ಲಿ ಬಿರುಕು – ತರೂರ್‌ ಬಳಿಕ ಕೇಂದ್ರದ ನಡೆಯನ್ನು ಬೆಂಬಲಿಸಿದ ಮನೀಶ್‌ ತಿವಾರಿ

3 Min Read

ನವದೆಹಲಿ: ಇರಾನ್‌ (Iran) ವಿರುದ್ಧ ಯುದ್ಧದ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ (Congress) ಬಿರುಕು ಮೂಡಿದೆ. ತಿರುವನಂತಪುರದ ಸಂಸದ ಶಶಿ ತರೂರ್‌(Shashi Tharoor) ಬಳಿಕ ಈಗ ಚಂಡೀಗಢದ ಸಂಸದ, ಹಿರಿಯ ನಾಯಕ ಮನೀಶ್‌ ತಿವಾರಿ(Manish Tewari) ಕೇಂದ್ರ ಸರ್ಕಾರದ ನಡೆಯನ್ನು ಬೆಂಬಲಿಸಿದ್ದಾರೆ.

- Advertisement -

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸಂಘರ್ಷದಲ್ಲಿ ಭಾರತ (India) ಸೀಮಿತ ಪಾಲನ್ನು ಹೊಂದಿದೆ ಮತ್ತು ಬಹಳ ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಬಹುಶಃ ನಾವು ಸರಿಯಾದ ಕೆಲಸವನ್ನು ಮಾಡುತ್ತಿದ್ದೇವೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

- Advertisement -

ಇಸ್ರೇಲ್, ಅಮೆರಿಕ ಮತ್ತು ಇರಾನ್‌ ನಡುವೆ ನಡೆಯುತ್ತಿರುವುದು ಕೇವಲ ಮಧ್ಯಪ್ರಾಚ್ಯದ ಚಲನಶೀಲತೆಯ ಬಗ್ಗೆ ಅಲ್ಲ. ಇದು ನಮ್ಮ ಯುದ್ಧವಲ್ಲ. ನಾವು ಯಾವಾಗಲೂ ಮಧ್ಯಪ್ರಾಚ್ಯದಲ್ಲಿ ಸೀಮಿತ ಪಾತ್ರವನ್ನು ಹೊಂದಿದ್ದೇವೆ. ಮಧ್ಯಪ್ರಾಚ್ಯದಲ್ಲಿನ ಬಹು-ಪದರದ ಪ್ರಾದೇಶಿಕ ಯುದ್ಧಗಳಲ್ಲಿ ಭಾರತ ಸಿಕ್ಕಿಹಾಕಿಕೊಳ್ಳಬಾರದು ಎಂದು ತಿವಾರಿ ವಾದಿಸಿದರು.

- Advertisement -

 

- Advertisement -

 

ಪಶ್ಚಿಮ ಏಷ್ಯಾದಲ್ಲಿ ಒಂದೇ ಒಂದು ಯುದ್ಧ ನಡೆಯುತ್ತಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಹಲವಾರು ಯುದ್ಧಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

ಶಶಿ ತರೂರ್‌ ಮಾಧ್ಯಮಕ್ಕೆ ಬರೆದ ಬರಹದಲ್ಲಿ, ಸಂಘರ್ಷವು ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಕಳವಳವನ್ನು ಹುಟ್ಟು ಹಾಕುತ್ತಿದೆಯಾದರೂ, ಭಾರತದ ಸಂಯಮವು ಕಾರ್ಯತಂತ್ರದ ವಿವೇಕ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ಸ್ಪಷ್ಟ ಮೌಲ್ಯಮಾಪನವನ್ನು ಪ್ರತಿಬಿಂಬಿಸುತ್ತದೆ ಎಂದು ಸರ್ಕಾರದ ನಡೆಯನ್ನು ಮೆಚ್ಚಿಕೊಂಡಿದ್ದರು. ಇದನ್ನೂ ಓದಿ: ಯುದ್ಧ ಆರಂಭವಾದ ಬಳಿಕವೂ ತೈಲ ರಫ್ತು ಮಾಡುತ್ತಿದ್ದ ಸೌದಿಯ ರಿಫೈನರಿ ಮೇಲೆಯೇ ಇರಾನ್‌ ಡ್ರೋನ್‌ ದಾಳಿ

ಮೌನವನ್ನು ಮಿಲಿಟರಿ ಕ್ರಮಕ್ಕೆ ನೀಡಿದ ಬೆಂಬಲ ಎಂದು ಪರಿಗಣಿಸಬಾರದು. ಜವಾಬ್ದಾರಿಯುತ ರಾಜ್ಯವಾಗಿ‌ ಸರ್ಕಾರ ನಿರ್ಧಾರವನ್ನು ಕೈಗೊಂಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ತರೂರ್‌ ಮತ್ತು ತಿವಾರಿ ಅವರ ನಡೆ ಕಾಂಗ್ರೆಸ್ ನಾಯಕತ್ವದ ನಿಲುವಿಗೆ ವಿರುದ್ಧವಾಗಿವೆ. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಜೈರಾಮ್ ರಮೇಶ್ ಮತ್ತು ಪವನ್ ಖೇರಾ ಅವರು ಇಸ್ರೇಲ್‌ ದಾಳಿಗೆ ಭಾರತ ಮೌನ ವಹಿಸಿದ್ದನ್ನು ಖಂಡಿಸಿ ಪ್ರತಿಕ್ರಿಯಿಸಿದ್ದರು. ಇದನ್ನೂ ಓದಿ: ಇಸ್ರೇಲ್‌ಗೆ ಬೆದರಿಕೆ ಹಾಕುವ ಯಾರನ್ನೂ ಬಿಡಲ್ಲ – ಮಿಲಿಟರಿ ವಕ್ತಾರ ಎಫಿ ಡೆಫ್ರಿನ್ ಶಪಥ

ಇಸ್ರೇಲಿನ ಏಕಪಕ್ಷೀಯ ಮಿಲಿಟರಿ ಕ್ರಮವನ್ನು ಭಾರತ ಸ್ಪಷ್ಟವಾಗಿ ವಿರೋಧಿಸಬೇಕು ಎಂದು ರಾಹುಲ್‌ ಗಾಂಧಿ ಹೇಳಿದ್ದರೆ ಇತರ ನಾಯಕರು ಮೌನವು ಭಾರತದ ದೀರ್ಘಕಾಲದ ವಿದೇಶಾಂಗ ನೀತಿ ತತ್ವಗಳನ್ನು ದುರ್ಬಲಗೊಳಿಸುವ ಅಪಾಯವಿದೆ ಎಂದು ತಿಳಿಸಿದ್ದರು.

ವಿದೇಶಾಂಗ ನೀತಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನೊಳಗೆ ಭಿನ್ನಾಭಿಪ್ರಾಯಗಳು ಉದ್ಭವಿಸಿರುವುದು ಇದೇ ಮೊದಲಲ್ಲ. ಈ ಹಿಂದೆ ಆಪರೇಷನ್ ಸಿಂಧೂರ್ ಸಮಯದಲ್ಲಿ ತರೂರ್ ಸರ್ಕಾರದ ರಾಜತಾಂತ್ರಿಕ ನಡೆಗೆ ಬೆಂಬಲ ನೀಡಿದ್ದರು.

Share This Article