ಬೆಂಗಳೂರು: ಬೈಕ್ ಟ್ಯಾಕ್ಸಿ (Bike Taxis) ಸೇವೆ ನಿಷೇಧಿಸಿದ್ದ ಹೈಕೋರ್ಟ್ (High Court) ಏಕಸದಸ್ಯ ಪೀಠದ ಆದೇಶಕ್ಕೆ ತಡೆನೀಡಲು ದ್ವಿಸದಸ್ಯ ಪೀಠ ನಿರಾಕರಿಸಿದ್ದು, ಜೂ.16ರಿಂದ ರಾಜ್ಯದಲ್ಲಿ (Karnataka) ಬೈಕ್ ಟ್ಯಾಕ್ಸಿಗಳು ಬಂದ್ ಆಗಲಿವೆ.
ಬೈಕ್ ಟ್ಯಾಕ್ಸಿಗಳನ್ನು ರದ್ದುಪಡಿಸಿ ಏಕಸದಸ್ಯ ಪೀಠ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿಯನ್ನು ಹಂಗಾಮಿ ನ್ಯಾ. ಕಾಮೇಶ್ವರ ರಾವ್, ನ್ಯಾ. ಶ್ರೀನಿವಾಸ್ ಹರೀಶ್ ಕುಮಾರ್ ದ್ವಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು. ಈ ವೇಳೆ, ಮುಂದಿನ ವಿಚಾರಣೆವರೆಗೂ ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ ಕೋರಿ ಅರ್ಜಿದಾರರ ಪರ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ಮನವಿ ಮಾಡಿದ್ರು. ಬೈಕ್ ಟ್ಯಾಕ್ಸಿ ಬಗ್ಗೆ ನಿಯಮ ರೂಪಿಸಲು ಸಮಯ ತೆಗೆದುಕೊಳ್ಳುತ್ತಿರುವ ಬಗ್ಗೆ ಸರ್ಕಾರಕ್ಕೆ ದ್ವಿಸದಸ್ಯ ಪೀಠ ಪ್ರಶ್ನೆ ಮಾಡಿತು. ಅಲ್ಲದೇ, ಹೊಸ ನಿಯಮ ರೂಪಿಸದ ಕಾರಣ ತಡೆಯಾಜ್ಞೆ ಸಾಧ್ಯ ಇಲ್ಲ ಎಂದು ಪೀಠ ಹೇಳಿತು. ನ್ಯಾಯಾಲಯ 10 ದಿನಗಳ ಕಾಲ ವಿಚಾರಣೆಯನ್ನ ಮುಂದೂಡಿದೆ. ಇದ್ನನೂ ಓದಿ: Plane Crash | ಟಾಟಾ ಗ್ರೂಪ್ ಇತಿಹಾಸದ ಕರಾಳ ದಿನಗಳಲ್ಲಿ ಇದೂ ಒಂದು – ಸಂಸ್ಥೆಯ ಅಧ್ಯಕ್ಷರಿಂದ ಭಾವುಕ ಪತ್ರ
ಏಪ್ರಿಲ್ 2 ರ ಆದೇಶದದಲ್ಲಿ, ಎಲ್ಲಾ ಬೈಕ್ ಟ್ಯಾಕ್ಸಿ ಸೇವೆಗಳನ್ನು ಆರು ವಾರಗಳ ಒಳಗೆ ಸ್ಥಗಿತಗೊಳಿಸಲು ಕೋರ್ಟ್ ಆದೇಶಿಸಿತ್ತು. ಬೈಕ್ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಬೇಕಾದ ಆರು ವಾರಗಳ ಗಡುವು ಮೇ ತಿಂಗಳಲ್ಲಿ ಮುಕ್ತಾಯಗೊಳ್ಳಬೇಕಿತ್ತು. ಆದಾಗ್ಯೂ, ರ್ಯಾಪಿಡೋ, ಓಲಾ ಮತ್ತು ಉಬರ್ ಸೇರಿದಂತೆ ಬೈಕ್ ಟ್ಯಾಕ್ಸಿ ನಿರ್ವಾಹಕರು ಈ ಗಡುವನ್ನು ವಿಸ್ತರಿಸುವಂತೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ವೇಳೆ ವಿನಂತಿಯನ್ನು ಪರಿಗಣಸಿದ್ದ ನ್ಯಾಯಾಧೀಶರು, ಅಂತಿಮವಾಗಿ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗಳನ್ನು ಮುಕ್ತಾಯಗೊಳಿಸುವ ಗಡುವನ್ನು ಜೂನ್ 15 ರವರೆಗೆ ವಿಸ್ತರಿಸಿದ್ದರು.
ಏಪ್ರಿಲ್ 2ರ ತೀರ್ಪನ್ನು ಪ್ರಶ್ನಿಸಿ ಜೂನ್ 11 ರಂದು ಎಎನ್ಐ ಟೆಕ್ನಾಲಜೀಸ್ (ಓಲಾ ಮಾಲೀಕತ್ವ), ಜೂನ್ 2 ರಂದು ಉಬರ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದವು. ಇದ್ನನೂ ಓದಿ: ಏರ್ ಇಂಡಿಯಾ ವಿಮಾನ ಪತನ: ಬ್ಲ್ಯಾಕ್ ಬಾಕ್ಸ್ ಪತ್ತೆ – ಬೆಂಕಿ ಬಿದ್ದರೂ ಸುಟ್ಟು ಹೋಗಿಲ್ಲ ಯಾಕೆ?