ಮೋದಿ, ಬಿಜೆಪಿ ನಾಯಕರು ಬಡವರಿಗೆ ಆಹಾರ ಧಾನ್ಯ ನಿರಾಕರಿಸುವಷ್ಟು ಕುರುಡರಾಗಬಹುದೇ?: ಸುರ್ಜೆವಾಲ ವಾಗ್ದಾಳಿ

Public TV
2 Min Read

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಬಡವರ ವಿರೋಧಿ ಮತ್ತು ದ್ವೇಷಪೂರಿತ ನಿಲುವು ಬಹಿರಂಗವಾಗಿದೆ. ಕರ್ನಾಟಕಕ್ಕೆ (Karnataka) ಅಕ್ಕಿ ನೀಡಲು ಎಫ್‌ಸಿಐ (FCI) ನಿರಾಕರಿಸಿದೆ. ಪ್ರಧಾನಿ ಮೋದಿ ಮತ್ತು ಬಿಜೆಪಿ (BJP) ನಾಯಕರು ಸೋಲಿನ ಬಳಿಕ ಬಡವರಿಗೆ ಆಹಾರ ಧಾನ್ಯವನ್ನು ನಿರಾಕರಿಸುವಷ್ಟು ಕುರುಡರಾಗಬಹುದಾ? ಎಂದು ಕಾಂಗ್ರೆಸ್ (Congress) ಉಸ್ತುವಾರಿ ರಣದೀಪ್ ಸುರ್ಜೆವಾಲ (Randeep Surjewala) ವಾಗ್ದಾಳಿ ನಡೆಸಿದ್ದಾರೆ.

ದೆಹಲಿಯಲ್ಲಿ (Delhi) ಮಾತನಾಡಿದ ಸುರ್ಜೆವಾಲ, ಅನ್ನ ಭಾಗ್ಯ ನೀಡುವುದು ಕಾಂಗ್ರೆಸ್ ಸರ್ಕಾರದ ಆಶಯವಾಗಿತ್ತು. ಸುಮಾರು 4.42 ಕೋಟಿ ಜನರಿಗೆ ಅಕ್ಕಿ ನೀಡುವ ಉದ್ದೇಶ ಹೊಂದಿತ್ತು. ಕೇಂದ್ರ ಸರ್ಕಾರಕ್ಕೆ ಖಾಸಗಿ ಅವರಿಗೆ ಅಕ್ಕಿ ನೀಡಲು ಸಮಸ್ಯೆ ಇಲ್ಲ. ಆದರೆ ರಾಜ್ಯ ಸರ್ಕಾರಗಳಿಗೆ ಅಕ್ಕಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಈ ಮೂಲಕ ಬಿಜೆಪಿ ಬಡವರ ವಿರೋಧಿಸಿ ಎನ್ನುವುದು ಸಾಬೀತಾಗಿದೆ ಎಂದರು.

ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರು ಸೋಲಿನ ಬಳಿಕ ಬಡವರಿಗೆ ಆಹಾರ ಧಾನ್ಯವನ್ನು ನಿರಾಕರಿಸುವಷ್ಟು ಕುರುಡರಾಗಬಹುದಾ? ಎಫ್‌ಸಿಐ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿಯನ್ನು ವ್ಯಾಪಾರಿಗಳಿಗೆ ಮಾರಾಟ ಮಾಡಲು ಅನುಮತಿ ಇದೆ. ಆದರೆ ಸರಿಯಾದ ಹಣ ಪಾವತಿಯ ನಂತರ ರಾಜ್ಯಗಳಿಗೆ ಮಾರಾಟ ಮಾಡುವುದನ್ನು ಏಕೆ ನಿಷೇಧಿಸಲಾಗಿದೆ? ಕಾಂಗ್ರೆಸ್ ಸರ್ಕಾರವು ಬಡವರಿಗೆ ಅಕ್ಕಿಯನ್ನು ನೀಡುವಂತೆ ಎಫ್‌ಸಿಐಗೆ ಕೇಳಿದ ಮರುದಿನವೇ ಮೋದಿ ಸರ್ಕಾರವು ಎಫ್‌ಸಿಐ ಅಕ್ಕಿಯನ್ನು ರಾಜ್ಯಗಳಿಗೆ ಮಾರಾಟ ಮಾಡಬಾರದು ಆದರೆ ವ್ಯಾಪಾರಿಗಳಿಗೆ ಮಾತ್ರ ಮಾರಾಟ ಮಾಡಬಹುದು ಎಂದು ನಿರ್ದೇಶಿಸಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮದ್ಯ ಸಾಗಿಸುತ್ತಿದ್ದ ಆರ್ಮಿ ಫ್ಯಾಮಿಲಿಯನ್ನು ಬಸ್‌ನಿಂದ ಇಳಿಸಿದ್ದಕ್ಕೆ ಕಿರಿಕ್

ಕಾಂಗ್ರೆಸ್ ಸರ್ಕಾರ ಬಿಪಿಎಲ್ ಕುಟುಂಬಗಳು, ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಬಡವರಿಗೆ ಉಚಿತ ಅಕ್ಕಿ ನೀಡುವುದನ್ನು ತಡೆಯುವುದು ಇದರ ಹುನ್ನಾರ ಅಲ್ಲವೇ? ಖಾಸಗಿ ಅವರಿಗೆ ಮಾರಾಟ ಮಾಡಿ ಲಾಭ ಗಳಿಸಲು ಅವಕಾಶ ನೀಡುತ್ತಿದ್ದಿಯೇ? ಕರ್ನಾಟಕದ ಜನರಿಗೆ ಅನ್ಯಾಯವಾಗುವಾಗ ಸಂಸದರು ಯಾಕೆ ಸುಮ್ಮನೆ ಕೂತಿದ್ದಾರೆ? ಅವರು ಯಾಕೆ ರಾಜೀನಾಮೆ ನೀಡಬಾರದು? ಮೋದಿ ಸರ್ಕಾರದ ನೀತಿ ಬಗ್ಗೆ ಜೆಡಿಎಸ್ ಯಾಕೆ ಮೌನವಾಗಿದೆ? ಮೋದಿ ಸರ್ಕಾರ ಅನ್ನಭಾಗ್ಯ ತಡೆಯಲು ಏನೇ ಮಾಡಿದರು ಅದು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.

ಬಿಜೆಪಿ, ಜೆಡಿಎಸ್ ಒತ್ತಡಕ್ಕೆ ಒಳಗಾಗಿವೆ. ನಾನು ಹೋಟೆಲ್‌ನಲ್ಲಿದ್ದೆ. ಅದೇ ಹೋಟೆಲ್‌ನಲ್ಲಿ ನಮ್ಮ ಪಿಸಿಸಿ ಅಧ್ಯಕ್ಷರು, ಸಚಿವರು ಸಭೆ ನಡೆಸುತ್ತಿದ್ದರು. ಸಭೆ ಬಳಿಕ ನಾನು ಕಾಫಿ ಕುಡಿಯಲು ಅಲ್ಲಿಗೆ ತೆರಳಿದ್ದೆ. ನಾನು ನಮ್ಮ ಪಕ್ಷದ ನಾಯಕರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿದೆ? ಜೆಪಿ ನಡ್ಡಾ ಯಾವುದೇ ರಾಜ್ಯದ ಸಿಎಂ ಭೇಟಿಯಾದರೆ ಸಮಸ್ಯೆ ಇಲ್ಲ. ನಾನು ನಮ್ಮ ನಾಯಕರನ್ನು ಭೇಟಿಯಾದರೆ ಅದರಲ್ಲಿ ಅಪರಾಧ ಏನಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ವಾಪಸ್ – ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ

Share This Article