ಹೆಜ್ಜೇನು ಕಡಿದು ವ್ಯಕ್ತಿ ದುರ್ಮರಣ

Public TV
1 Min Read

ಕಾರವಾರ: ಹೆಜ್ಜೇನು ಕಡಿದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಿನ್ನರ ಗ್ರಾಮದಲ್ಲಿ ನಡೆದಿದೆ.

ಕಿನ್ನರ ಗ್ರಾಮದ ನಿವಾಸಿ 59 ವರ್ಷದ ವಿಠೋಬ ಶಂಭಾ ನಾಯ್ಕ ಮೃತ ದುರ್ದೈವಿ. ಭಾನುವಾರ ಸಂಜೆ ಗದ್ದೆಗೆ ಕೆಲಸಕ್ಕೆ ಹೋದಾಗ ಹೆಜ್ಜೇನು ಕಚ್ಚಿದೆ. ನಂತರ ತೀವ್ರ ಅಸ್ವಸ್ಥರಾಗಿ ಮನೆಯಲ್ಲಿ ಬಿದ್ದಿದ್ದರು. ಕುಟುಂಬದವರು ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ.

ಬೆನ್ನು, ಹೊಟ್ಟೆ ಭಾಗದ ಸುತ್ತಲೂ ಕಚ್ಚಿದೆ. ಆದ್ದರಿಂದ ಎಲ್ಲಾ ರಿಪೋರ್ಟ್‍ಗಳನ್ನು ಕಳುಹಿಸಿದ್ದೇವೆ. ವರದಿ ಬಂದ ಮೇಲೆ ಖಚಿತ ಪಡಿಸಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಹಿಂದೆ ಇರುವೆ ಕಚ್ಚಿ ಅಂಗವಿಕಲ ಬಾಲಕನೊಬ್ಬ ಮೃತಪಟ್ಟಿದ್ದ. ಆದರೆ ಇದೇ ಮೊದಲ ಬಾರಿಗೆ ಹೆಜ್ಜೇನು ಕಡಿತಕ್ಕೆ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಜರುಗಿದೆ. ಸ್ಥಳಕ್ಕೆ ಕಿನ್ನರ ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದು, ಕಾರವಾರ ಗ್ರಾಮಾಂತರ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ಇದನ್ನು ಓದಿ: ಕಪ್ಪು ಇರುವೆ ಕಚ್ಚಿ ಯುವಕ ದುರ್ಮರಣ!

Share This Article
Leave a Comment

Leave a Reply

Your email address will not be published. Required fields are marked *