ರಾಜ್ಯ ಅನ್‍ಲಾಕ್ ಆದ್ರೂ ದೇಗುಲ ತಕ್ಷಣ ತೆರೆಯಲ್ಲ: ಕೋಟ ಶ್ರೀನಿವಾಸ ಪೂಜಾರಿ

Public TV
1 Min Read

ಉಡುಪಿ: ಜೂನ್ 14ರ ನಂತರ ರಾಜ್ಯದಲ್ಲಿ ಅನ್ ಲಾಕ್ ಪ್ರಕ್ರಿಯೆಗಳು ಆರಂಭವಾಗುತ್ತದೆ. ಜನಜಂಗುಳಿ ಆಗುವ ಕಾರಣ ದೇಗುಲಗಳು ತಕ್ಷಣ ತೆರೆಯಲ್ಲ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ಕೊಟ್ಟು ದೇವರ ದರ್ಶನ ಮಾಡಿ ಬಳಿಕ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದರು. ಕೆಲವೇ ದಿನಗಳಲ್ಲಿ ಲಾಕ್ ಡೌನ್ ತೆರವಾಗುತ್ತದೆ ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ಹಂತ ಹಂತವಾಗಿ ಲಾಕ್​​ಡೌನ್ ಸಡಿಲಿಕೆ: ಸುಧಾಕರ್

ಶೇಕಡಾ ಐದಕ್ಕಿಂತ ಕಡಿಮೆ ಪಾಸಿಟಿವಿಟಿ ಇದ್ರೆ ಬೇಗ ಅನ್ಲಾಕ್ ಆಗುತ್ತದೆ. ಏಕಾಏಕಿ ದೇವಸ್ಥಾನಗಳು ತೆರೆದರೆ ಸಮಸ್ಯೆ ಆಗುತ್ತದೆ. ಜನಜಂಗುಳಿ ಜಾಸ್ತಿಯಾಗುವ ಸಾಧ್ಯತೆಯಿದೆ. ಸ್ವಲ್ಪ ದಿನ ಬಿಟ್ಟು ದೇವಾಲಯ ತೆರೆಯುವ ಬಗ್ಗೆ ಚಿಂತನೆ ಇದೆ. ಆದಷ್ಟು ಬೇಗ ದೇವಸ್ಥಾನ ತೆರೆಯಲು ಕ್ರಮ ಕೈಗೊಳ್ಳಲಾಗುವುದು. ಯಾವತ್ತು ಮತ್ತು ಯಾವ ರೀತಿ ದೇವಸ್ಥಾನ ತೆರೆಯಬೇಕು ಎಂಬ ಬಗ್ಗೆ ಶೀಘ್ರ ನಿರ್ಧಾರ ಮಾಡುತ್ತೇವೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *